ಆ್ಯಪ್ನಗರ

ಹಿಂದೂ ಮಹಾಸಭಾದ ಮಾಜಿ ನಾಯಕನ ಗುಂಡಿಕ್ಕಿ ಹತ್ಯೆ

ಹಿಂದೂ ಮಹಾಸಭಾದ ಮಾಜಿ ನಾಯಕ ಕಮಲೇಶ್‌ ತಿವಾರಿ ಅವರನ್ನು ಉತ್ತರ ಪ್ರದೇಶದ ಲಖನೌದಲ್ಲಿ ಶುಕ್ರವಾರ ಹಾಡಹಾಗಲೇ ಹತ್ಯೆ ಮಾಡಲಾಗಿದೆ. ಪ್ರವಾದಿ ಮಹಮ್ಮದ್‌ ಪೈಗಂಬರರ ಕುರಿತು ವಿವಾದಿತ ಹೇಳಿಕೆ ನೀಡಿ ಈ ಹಿಂದೆ ಸುದ್ದಿಯಾಗಿದ್ದರು ತಿವಾರಿ.

Vijaya Karnataka Web 19 Oct 2019, 6:33 am
ಲಖನೌ: ಹಿಂದೂ ಮಹಾಸಭಾದ ಮಾಜಿ ನಾಯಕ ಕಮಲೇಶ್‌ ತಿವಾರಿ (45) ಅವರನ್ನು ಉತ್ತರ ಪ್ರದೇಶದ ಲಖನೌದಲ್ಲಿ ಶುಕ್ರವಾರ ಹಾಡಹಾಗಲೇ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ನಗರದ ನಾಕಾ ಹಿಂಡೋಲಾ ಪ್ರದೇಶದ ಖುರ್ಷಿದ್‌ ಬಾಗ್‌ನಲ್ಲಿರುವ ತಿವಾರಿ ಅವರ ನಿವಾಸದ ಸಮೀಪವೇ ದುಷ್ಕರ್ಮಿಗಳು ಅವರ ಹತ್ಯೆ ಮಾಡಿದ್ದಾರೆ.
Vijaya Karnataka Web kamlesh-tiwari


ಗುಂಡೇಟು ತಿಂದು ರಕ್ತದ ಮಡುವಿನಲ್ಲಿ ಬಿದ್ದಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿ­ತಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ದೀಪಾವಳಿ ಸಿಹಿ ಹಂಚಿಕೆ ನೆಪದಲ್ಲಿ ಕೇಸರಿ ವಸ್ತ್ರದಲ್ಲಿ ದಾಳಿಕೋರರು ತಿವಾರಿ ಮನೆ ಪ್ರವೇಶಿಸಿದ್ದರು. ಪಾನ್‌ ತರಲು ತಿವಾರಿ ತಮ್ಮ ಸಹಾಯಕರೊಬ್ಬರನ್ನು ಅಂಗಡಿಗೆ ಕಳುಹಿಸಿದ್ದ ವೇಳೆ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ, ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪ್ರಾಥಮಿಕ ತನಿಖಾ ವರದಿಗಳು ತಿಳಿಸಿವೆ.

ಸಹಾಯಕ ಮನೆಗೆ ಮರಳಿದಾಗ ರಕ್ತದ ಮಡು­ವಿನಲ್ಲಿ ಬಿದ್ದಿದ್ದ ತಿವಾರಿ ಅವರನ್ನು ಕೂಡೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾ­ಗಲಿಲ್ಲ. ದಾಳಿ­­ಕೋರರ ಪತ್ತೆಗೆ ಪೊಲೀಸರು ತಿವಾರಿ ಮನೆ ಸುತ್ತಮುತ್ತಲಿನ ಸಿಸಿಟಿವಿ­ಗಳನ್ನು ಜಾಲಾಡುತ್ತಿದ್ದಾರೆ.

ಯಾರಿವರು?: ಕಮಲೇಶ್‌ ತಿವಾರಿ ಹಿಂದೂ ಮಹಾಸಭಾದ ಮಾಜಿ ನಾಯಕ. 2017ರ ಜನವರಿಯಲ್ಲಿ ಹಿಂದೂ ಸಮಾಜ ಪಕ್ಷ ಸ್ಥಾಪಿಸಿದ್ದರು. ಪ್ರವಾದಿ ಮಹಮ್ಮದ್‌ ಪೈಗಂಬರರ ಕುರಿತು ವಿವಾದಿತ ಹೇಳಿಕೆ ನೀಡಿ ಈ ಹಿಂದೆ ಸುದ್ದಿಯಾಗಿದ್ದರು. ಅವರನ್ನು ಬಂಧಿಸಿ ರಾಷ್ಟ್ರೀಯ ಭದ್ರತಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಇತ್ತೀಚೆಗೆ ಅಲಹಾಬಾದ್‌ ಹೈಕೋರ್ಟ್‌ ಅವರ ವಿರುದ್ಧದ ಆರೋಪಗಳನ್ನು ವಜಾಗೊಳಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ