ಆ್ಯಪ್ನಗರ

ಅಮಿತಾಭ್‌ ಬಚ್ಚನ್‌ ಕ್ಷಮೆ ಕೋರಿದ ಎಸ್ಪಿ ಮಾಜಿ ನಾಯಕ ಅಮರ್‌ಸಿಂಗ್‌

​​ಒಂದು ಕಾಲದಲ್ಲಿ ಅಮರ್‌ಸಿಂಗ್‌ ಮತ್ತು ಅಮಿತಾಭ್‌ ಬಚ್ಚನ್‌ ಬಹಳ ಆಪ್ತರಾಗಿದ್ದರು. ದಶಕದಿಂದ ಈಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಅಮಿತಾಭ್‌ ಪತ್ನಿ ಜಯಾ ಬಚ್ಚನ್‌ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆಯೂ ಹೌದು.

Agencies 18 Feb 2020, 9:18 pm
ಲಖನೌ: ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್‌ಸಿಂಗ್‌ ಅವರು ವಿನಾಕಾರಣ ಹಗೆತನ ಸಾಧಿಸಿದ್ದಕ್ಕಾಗಿ ತಮ್ಮ ಮಾಜಿ ಸ್ನೇಹಿತರಾಗಿರುವ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಮತ್ತು ಅವರ ಕುಟುಂಬದ ಕ್ಷಮೆ ಕೋರಿದ್ದಾರೆ.
Vijaya Karnataka Web Amitab Bachchan Amar Singh


ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವ ಅಮರ್‌ಸಿಂಗ್‌ ಸಿಂಗಾಪುರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸ್ಪತ್ರೆಯಿಂದಲೇ ಮಂಗಳವಾರ ಟ್ವೀಟ್‌ ಮಾಡಿರುವ ಅವರು, "ಇಂದು ನನ್ನ ತಂದೆಯವರ ಪುಣ್ಯತಿಥಿ. ಈ ಸಂದರ್ಭದಲ್ಲಿ ಬಚ್ಚನ್‌ಜಿ ನನಗೆ ಸಂದೇಶ ಕಳುಹಿಸಿದ್ದಾರೆ. ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ನಾನು ವಿನಾಕಾರಣದ ದ್ವೇಷಕ್ಕಾಗಿ ಅಮಿತ್‌ಜಿ ಹಾಗೂ ಅವರ ಕುಟುಂಬದ ಕ್ಷಮೆ ಕೋರುತ್ತೇನೆ,'' ಎಂದು ಹೇಳಿದ್ದಾರೆ.

ಒಂದು ಕಾಲದಲ್ಲಿ ಅಮರ್‌ಸಿಂಗ್‌ ಮತ್ತು ಅಮಿತಾಭ್‌ ಬಚ್ಚನ್‌ ಬಹಳ ಆಪ್ತರಾಗಿದ್ದರು. ದಶಕದಿಂದ ಈಚೆಗೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಅಮಿತಾಭ್‌ ಪತ್ನಿ ಜಯಾ ಬಚ್ಚನ್‌ ಸಮಾಜವಾದಿ ಪಕ್ಷದ ರಾಜ್ಯಸಭಾ ಸದಸ್ಯೆಯೂ ಹೌದು.

"ಕಳೆದ ಹತ್ತು ವರ್ಷಗಳಿಂದ ನಾನು ಅಮಿತಾಭ್‌ ಕುಟುಂಬದಿಂದ ದೂರ ಇದ್ದುದು ಮಾತ್ರವಲ್ಲ, ಅವರ ವಿರುದ್ಧ ದ್ವೇಷ ಸಾಧಿಸುತ್ತ ಬಂದೆ. ಆದರೂ ಅಮಿತಾಭ್‌ ಬಚ್ಚನ್‌ ನನ್ನ ತಂದೆಯವರ ಪುಣ್ಯತಿಥಿಯಂದು ಅವರಿಗೆ ಗೌರವ ಸಲ್ಲಿಸಿದರು. ನನ್ನ ಕಿಡ್ನಿ ಚಿಕಿತ್ಸೆಗಾಗಿ ಇದೇ ಆಸ್ಪತ್ರೆಯಲ್ಲಿ ದಶಕದ ಹಿಂದೆ ನಾನು ಮತ್ತು ಅಮಿತ್‌ಜಿ ಎರಡು ತಿಂಗಳು ಒಟ್ಟಿಗೇ ಇದ್ದೆವು. ಆ ನಂತರ ನಾವು ಬೇರ್ಪಟ್ಟೆವು,'' ಎಂದು ಅಮರ್‌ಸಿಂಗ್‌ ನೆನಪಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ