ಆ್ಯಪ್ನಗರ

ಬಾವಿಗೆ ಬಿದ್ದ ಮೇಕೆ ಉಳಿಸಲು ಹೋಗಿ ನಾಲ್ಕು ಸಾವು

ಸಾಮಾನ್ಯವಾಗಿ ಮುಳುಗುತ್ತಿರುವ ವ್ಯಕ್ತಿಯನ್ನು ಉಳಿಸಲು ಹೋಗಿ, ಮೂರ್ನಾಲ್ಕು ಮಂದಿ ಪ್ರಾಣ ಬಿಟ್ಟಿರುವ ಸುದ್ದಿ ಕೇಳಿದ್ದೇವೆ. ಆದರೆ, ಇಲ್ಲೊಂದು ವಿಭಿನ್ನ ಪ್ರಕರಣದಲ್ಲಿ ಮುಳುಗುತ್ತಿರುವ ಮೇಕೆಯನ್ನು ಉಳಿಸಲು ಹೋಗಿ ಭಾನುವಾರ ನಾಲ್ವರು ಪ್ರಾಣ ತೆತ್ತಿದ್ದಾರೆ.

ಏಜೆನ್ಸೀಸ್ 8 May 2016, 5:11 pm
ತ್ರಿಚಿ: ಸಾಮಾನ್ಯವಾಗಿ ಮುಳುಗುತ್ತಿರುವ ವ್ಯಕ್ತಿಯನ್ನು ಉಳಿಸಲು ಹೋಗಿ, ಮೂರ್ನಾಲ್ಕು ಮಂದಿ ಪ್ರಾಣ ಬಿಟ್ಟಿರುವ ಸುದ್ದಿ ಕೇಳಿದ್ದೇವೆ. ಆದರೆ, ಇಲ್ಲೊಂದು ವಿಭಿನ್ನ ಪ್ರಕರಣದಲ್ಲಿ ಮುಳುಗುತ್ತಿರುವ ಮೇಕೆಯನ್ನು ಉಳಿಸಲು ಹೋಗಿ ಭಾನುವಾರ ನಾಲ್ವರು ಪ್ರಾಣ ತೆತ್ತಿದ್ದಾರೆ.
Vijaya Karnataka Web four men die while trying to rescue goat from unused well in tamil nadu village
ಬಾವಿಗೆ ಬಿದ್ದ ಮೇಕೆ ಉಳಿಸಲು ಹೋಗಿ ನಾಲ್ಕು ಸಾವು


ಸುಮಾರು 60 ಅಡಿ ಆಳವಿರುವ, ಬಳಸದ ಬಾವಿಯೊಂದರಲ್ಲಿ ಬಿದ್ದ ಮೇಕೆಯನ್ನು ಉಳಿಸಲು ಹಾರಿದ ನಾಲ್ವರು ಉಸಿರಗಟ್ಟಿ ಮೃತಪಟ್ಟಿದ್ದಾರೆಂದು ಶಂಕಿಸಲಾಗಿದೆ.

ತಮಿಳುನಾಡಿನ ಪಡುಕೊಟ್ಟೈ ಜಿಲ್ಲೆಯ ಕರಂಬಕುಡಿಯಲ್ಲಿ ಈ ಪ್ರಕರಣ ನಡೆದಿದ್ದು, ಧುವರ್ ಗ್ರಾಮದ ಸೌಂದರರಾಜನ್ (45) ಮತ್ತವರ ಸ್ನೇಹಿತರಾದ ರೆಂಗಸಾಮಿ (55), ಪೆರಮೈಯಾ (55) ಮತ್ತು ಐಯಾವು (45) ಮೃತಪಟ್ಟವರು.

ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಬಾವಿಗೆ ಮೇಕೆ ಬೀಳುತ್ತಿರುವುದನ್ನು ಕಂಡ ಸೌಂದರರಾಜನ್ ತನ್ನ ಸ್ನೇಹಿತರನ್ನು ಕರೆದು, ಹಗ್ಗದ ಸಹಾಯದಿಂದ ಬಾವಿಗೆ ಇಳಿದಿದ್ದಾರೆ. ಗಂಟೆ ನಂತರವೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಸ್ನೇಹಿತರೂ ಒಬ್ಬರ ನಂತರ ಮತ್ತೊಬ್ಬರು ಬಾವಿಗಿಳಿದಿದ್ದಾರೆ. ಅವರೂ ಬಾರದೇ ಹೋದಾಗ ಸೌಂದರರಾಜನ್ ಪತ್ನಿ ನೆರೆಹೊರೆಯವರಿಗೆ ಮಾಹಿತಿ ನೀಡಿ, ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣವೇ ಅಗ್ನಿ ಶಾಮಕ ದಳದೊಂದಿಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಅಗತ್ಯ ಆಮ್ಲಜನಕದ ಮಾಸ್ಕ್‌ನೊಂದಿಗೆ ಬಾವಿಗಿಳಿದು, ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.

ಮೃತದೇಹಗಳನ್ನು ಸಮೀಪದ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ