ಆ್ಯಪ್ನಗರ

ಮನದಾಳದ ಮಾತು ಹೇಳಲು ಮತ್ತೆ ಸಜ್ಜಾದ ಪ್ರಧಾನಿ ಮೋದಿ

ಮೋದಿ ಅವರೇ ಟ್ವಿಟರ್‌ ಮೂಲಕ ಈ ವಿಷಯ ಖಚಿತಪಡಿಸಿದ್ದು, ಫೋನ್‌ ನಂಬರ್‌ ಹಂಚಿಕೊಂಡಿದ್ದಾರೆ. ಅಲ್ಲದೆ, ಸರಕಾರ ಗಮನ ಹರಿಸಬೇಕಾದ ವಿಷಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುವಂತೆ ಜನರಿಗೆ ಕರೆ ನೀಡಿದ್ದಾರೆ.

PTI 16 Jun 2019, 5:00 am
ಹೊಸದಿಲ್ಲಿ: ಸುಮಾರು ಮೂರು ತಿಂಗಳ ವಿರಾಮದ ಬಳಿಕ ಪ್ರಧಾನಿ ನರೇಂದ್ರಿ ಮೋದಿ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮ 'ಮನ್‌ ಕಿ ಬಾತ್‌' ಮತ್ತೆ ಆರಂಭವಾಗಲಿದೆ. ಮೋದಿ ಪ್ರಧಾನಿಯಾಗಿ ಆಯ್ಕೆಯಾದ ಬಳಿಕ ಅವರ ಚೊಚ್ಚಲ ಬಾನುಲಿ ಕಾರ್ಯಕ್ರಮ ಜೂನ್‌ 30ರಂದು ಪ್ರಸಾರವಾಗಲಿದೆ.
Vijaya Karnataka Web mann ki baat

ಮೋದಿ ಅವರೇ ಟ್ವಿಟರ್‌ ಮೂಲಕ ಈ ವಿಷಯ ಖಚಿತಪಡಿಸಿದ್ದು, ಫೋನ್‌ ನಂಬರ್‌ ಹಂಚಿಕೊಂಡಿದ್ದಾರೆ. ಅಲ್ಲದೆ, ಸರಕಾರ ಗಮನ ಹರಿಸಬೇಕಾದ ವಿಷಯಗಳ ಬಗ್ಗೆ ಸಲಹೆ ಸೂಚನೆಗಳನ್ನು ನೀಡುವಂತೆ ಜನರಿಗೆ ಕರೆ ನೀಡಿದ್ದಾರೆ.

''ಜೂನ್‌ 30, ಭಾನುವಾರ ಬೆಳಗ್ಗೆ 11 ಗಂಟೆಗೆ...ನಾವು ಮತ್ತೆ ಭೇಟಿಯಾಗೋಣ. ಬಾನುಲಿಗೆ ಧನ್ಯವಾದಗಳು. ಸಂತೋಷ, ಸಕಾರಾತ್ಮಕತೆ ಹಂಚಿಕೊಳ್ಳಿ. 130 ಕೋಟಿ ಭಾರತೀಯರ ಒಟ್ಟಾರೆ ಶಕ್ತಿಯನ್ನು ಸಂಭ್ರಮಿಸಿ. ಮನ್‌ ಕಿ ಬಾತ್‌ನಲ್ಲಿ ಹಂಚಿಕೊಳ್ಳಲು ನಿಮ್ಮ ಬಳಿ ಖಂಡಿತಾ ಸಾಕಷ್ಟು ವಿಷಯಗಳಿವೆ ಎಂಬುದು ನನ್ನ ನಂಬಿಕೆ. 1800-11-7800 ಸಂಖ್ಯೆಗೆ ಕರೆ ಮಾಡಿ ನಿಮ್ಮ ಸಂದೇಶವನ್ನು ದಾಖಲಿಸಿ. ಅಥವಾ 'ನಮೋ ಆ್ಯಪ್‌ ಓಪನ್‌ ಫೋರಮ್‌' ಅಂತರ್ಜಾಲ ವೇದಿಕೆಯಲ್ಲಿ ಬರವಣಿಗೆ ಮೂಲಕವೂ ಸಲಹೆ ನೀಡಬಹುದು. ನಿಮ್ಮ ಜತೆ ಸಂವಹನಕ್ಕಾಗಿ ಕಾಯುತ್ತಿರುತ್ತೇನೆ,'' ಎಂದು ಮೋದಿ ಟ್ವೀಟಿಸಿದ್ದಾರೆ.

ಮನ್‌ ಕಿ ಬಾತ್‌ ಸಲಹೆ ಸೂಚನೆಗೆ ನಿಗದಿಪಡಿಸಲಾಗಿರುವ ಟೋಲ್‌ ಫ್ರೀ ದೂರವಾಣಿ ಸಂಖ್ಯೆಯು ಜೂನ್‌ 11ರಿಂದ ಜೂನ್‌ 26ರವರೆಗೂ ಸಕ್ರಿಯವಾಗಿರಲಿದೆ. ಅಷ್ಟರೊಳಗೆ ಕರೆ ಮಾಡಬಹುದು.
ಚುನಾವಣೆ ಹಿನ್ನೆಲೆಯಲ್ಲಿ ಸ್ಥಗಿತ: ಸುಮಾರು ನಾಲ್ಕು ವರ್ಷಗಳಿಂದ ಪ್ರತಿ ತಿಂಗಳ ಕೊನೆಯ ಭಾನುವಾರ ಎಲ್ಲಾ ಆಕಾಶವಾಣಿ ಕೇಂದ್ರಗಳಲ್ಲಿ ಪ್ರಸಾರವಾಗುತ್ತಿದ್ದ ಮೋದಿ ಅವರ ಕೊನೆಯ ಮನ್‌ ಕಿ ಬಾತ್‌ ಲೈವ್‌ ಕಾರ್ಯಕ್ರ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿತ್ತು. ಕಳೆದ ಫೆ.24ರಂದು ಕೊನೆಯ ಕಂತು ಪ್ರಸಾರವಾಗಿತ್ತು. ಕೊನೆಯ ರೇಡಿಯೋ ಕಾರ್ಯಕ್ರಮದಲ್ಲಿ ಮೋದಿ ಅವರು ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದ್ದರು. ಬಿಜೆಪಿಗೆ ಮತ ನೀಡಿ ತಮ್ಮನ್ನು ಮತ್ತೆ ಆಶೀರ್ವದಿಸುವಂತೆ ಜನರಲ್ಲಿ ಮನವಿ ಮಾಡಿದ್ದರು.

=================

ಅ. 03, 2014: ಮನ್‌ ಕಿ ಬಾತ್‌ ಕಾರ್ಯಕ್ರಮಕ್ಕೆ ಚಾಲನೆ

ಫೆ.24, 2019: ಪ್ರಧಾನಿ ಮೋದಿ ಅವರ ಕೊನೆಯ ಮನ್‌ ಕಿ ಬಾತ್‌

53: ಪ್ರಧಾನಿ ಮೋದಿ ಅವರು ಇದುವರೆಗೂ ನಡೆಸಿಕೊಟ್ಟ ಮನ್‌ ಕಿ ಬಾತ್‌ ಕಾರ್ಯಕ್ರಮಗಳ ಸಂಖ್ಯೆ

====================

ರೇಡಿಯೋ ಏಕೆ?
ದೇಶದ ಕುಗ್ರಾಮಗಳು, ಗುಡ್ಡಗಾಡು ಪ್ರದೇಶಗಳಲ್ಲಿ ಇನ್ನೂ ಸಮರ್ಪಕ ಟಿವಿ ಸಂಪರ್ಕ ವ್ಯವಸ್ಥೆ ಇಲ್ಲ. ಆದರೆ, ಅಂದಾಜಿನ ಪ್ರಕಾರ, ದೇಶದ ಶೇ. 90ರಷ್ಟು ಜನರು ರೇಡಿಯೊ ಮೂಲಕ ತಲುಪಬಹುದು. ಹೀಗಾಗಿಯೇ ಮೋದಿ ಹೆಚ್ಚು ಜನರನ್ನು ತಲುಪುವ ಸಲುವಾಗಿ ಬಾನುಲಿಯನ್ನು ತಮ್ಮ ಕಾರ್ಯಕ್ರಮದ ಮಾಧ್ಯವನ್ನಾಗಿ ಆರಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ