ಹೊಸದಿಲ್ಲಿ: ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಜತೆ ಮುನಿಸಿಕೊಂಡಿರುವ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಸೋಮವಾರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಿದರು. ಬಳಿಕ ನಾಯಕರ ಜತೆಗಿರುವ ಫೋಟೊವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಲ್ಲದೇ, ''ರಾಜ್ಯದ ಪರಿಸ್ಥಿತಿಯ ವರದಿಯನ್ನು ಕಾಂಗ್ರೆಸ್ ಅಧ್ಯಕ್ಷರಿಗೆ ಸಲ್ಲಿಸಿದ್ದೇನೆ,'' ಎಂದು ಟ್ವೀಟ್ ಮಾಡುವ ಮೂಲಕ ಹೈಕಮಾಂಡ್ ಮಟ್ಟದಲ್ಲಿ ತಾನಿನ್ನೂ ಪ್ರಬಲ ಎಂಬ ಸಂದೇಶ ರವಾನಿಸುವ ಪ್ರಯತ್ನ ಮಾಡಿದರು. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಹಿರಿಯ ನಾಯಕ ಅಹಮದ್ ಪಟೇಲ್ ಅವರನ್ನೂ ಸಿಧು ಭೇಟಿ ಮಾಡಿದರು. ಅಮರಿಂದರ್ ಸಿಂಗ್ ಜತೆಗಿನ ಮುನಿಸಿನಿಂದ ಕಳೆದ ವಾರದ ಸಂಪುಟ ಸಭೆಗೆ ಸಿಧು ಗೈರಾಗಿದ್ದರು. ಅದೇ ದಿನ ಸಿಂಗ್ ಅವರು ಸಿಧು ಬಳಿ ಇದ್ದ ಮಹತ್ವದ ಸ್ಥಳೀಯ ಆಡಳಿತ ಖಾತೆ ಹಿಂಪಡೆದು, ಅಷ್ಟೇನೂ ಮುಖ್ಯವಲ್ಲದ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಖಾತೆ ನೀಡಿದ್ದರು. ಆಡಳಿತಾತ್ಮಕ ನೆರವಿಗೆ ರಚಿಸಿರುವ ಎಂಟು ಸಮಿತಿಗಳಿಂದಲೂ ಸಿಧು ಅವರನ್ನು ದೂರ ಇಟ್ಟಿದ್ದರು.
ರಾಹುಲ್ ಗಾಂಧಿ ಭೇಟಿ ಮಾಡಿದ ಸಿಧು
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಹಿರಿಯ ನಾಯಕ ಅಹಮದ್ ಪಟೇಲ್ ಅವರನ್ನೂ ಸಿಧು ಭೇಟಿ ಮಾಡಿದರು.
PTI 11 Jun 2019, 5:00 am