ಹೊಸದಿಲ್ಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ 151ನೇ ಜನ್ಮವಾರ್ಷಿಕೋತ್ಸವ ಅಂಗವಾಗಿ ಅವರ ನೆಚ್ಚಿನ ಗುಜರಾತಿ ಭಜನೆ ' ವೈಷ್ಣವ ಜನ್ ತೋ' ವನ್ನು ಕಾಶ್ಮೀರಿ ಭಾಷೆಗೆ ಅನುವಾದಿಸಿ ಬಿಡುಗಡೆಗೊಳಿಸಲಾಗುತ್ತಿದೆ.
ಸಾಮಾಜಿಕ ಕಾರ್ಯಕರ್ತೆ ಕುಸುಮ್ ಕೌಲ್ ವ್ಯಾಸ್ , ಕಾಶ್ಮೀರಿ ಗಾಯಕ ಗುಲ್ಜಾರ್ ಅಹ್ಮದ್ ಗನೇಯಿ ಮತ್ತು ಲೇಖಕ ಶಾಬಾಜ್ ಹಕ್ಬರೀ ಅವರು ಕಾಶ್ಮೀರಿ ಆವೃತ್ತಿಯನ್ನು ಸಿದ್ಧಪಡಿಸಿದ್ದಾರೆ.
ಗುಜರಾತಿನ ಖ್ಯಾತ ಕವಿ ನರಸಿಂಹ್ ಮೆಹ್ತಾ ಅವರು ಗಾಂಧೀಜಿ ತಮ್ಮ ಜೀವನದಲ್ಲಿ ಪ್ರತಿನಿಧಿಸಿದ ಮಾನವೀಯತೆ, ಕರುಣೆ, ಶಾಂತಿ, ಸತ್ಯದ ಗುಣಗಳನ್ನು ಈ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಎಂದು ಕುಸುಮ್ ಕೌಲ್ ತಿಳಿಸಿದ್ದಾರೆ.
ಅನುವಾದದ ಮೂಲಕ ಗಾಂಧೀಜಿ ಅವರ ಬಗ್ಗೆ ಹೆಚ್ಚೆಚ್ಚು ಕಾಶ್ಮೀರಿಗರಿಗೆ ತಿಳಿದುಬರಲಿದೆ. ಈ ಭಜನೆಯ ಮೂಲ ಆಶಯದ ಬಗ್ಗೆ ಮತ್ತಷ್ಟು ಕಣಿವೆ ಜನರನ್ನು ಜಾಗೃತಿಗೊಳಿಸಿ ಶಾಂತಿ, ದಯೆಗಳ ಬೀಜವನ್ನು ಅವರ ಮನಸ್ಸಿನಲ್ಲಿಬಿತ್ತಲು ಸಣ್ಣ ಪ್ರಯತ್ನವಿದು ಎಂದು ಕುಸುಮ್ ಅಭಿಪ್ರಾಯಪಟ್ಟಿದ್ದಾರೆ.
ಸಾಮಾಜಿಕ ಕಾರ್ಯಕರ್ತೆ ಕುಸುಮ್ ಕೌಲ್ ವ್ಯಾಸ್ , ಕಾಶ್ಮೀರಿ ಗಾಯಕ ಗುಲ್ಜಾರ್ ಅಹ್ಮದ್ ಗನೇಯಿ ಮತ್ತು ಲೇಖಕ ಶಾಬಾಜ್ ಹಕ್ಬರೀ ಅವರು ಕಾಶ್ಮೀರಿ ಆವೃತ್ತಿಯನ್ನು ಸಿದ್ಧಪಡಿಸಿದ್ದಾರೆ.
ಗುಜರಾತಿನ ಖ್ಯಾತ ಕವಿ ನರಸಿಂಹ್ ಮೆಹ್ತಾ ಅವರು ಗಾಂಧೀಜಿ ತಮ್ಮ ಜೀವನದಲ್ಲಿ ಪ್ರತಿನಿಧಿಸಿದ ಮಾನವೀಯತೆ, ಕರುಣೆ, ಶಾಂತಿ, ಸತ್ಯದ ಗುಣಗಳನ್ನು ಈ ಕವಿತೆಯಲ್ಲಿ ಕಟ್ಟಿಕೊಟ್ಟಿದ್ದಾರೆ ಎಂದು ಎಂದು ಕುಸುಮ್ ಕೌಲ್ ತಿಳಿಸಿದ್ದಾರೆ.
ಅನುವಾದದ ಮೂಲಕ ಗಾಂಧೀಜಿ ಅವರ ಬಗ್ಗೆ ಹೆಚ್ಚೆಚ್ಚು ಕಾಶ್ಮೀರಿಗರಿಗೆ ತಿಳಿದುಬರಲಿದೆ. ಈ ಭಜನೆಯ ಮೂಲ ಆಶಯದ ಬಗ್ಗೆ ಮತ್ತಷ್ಟು ಕಣಿವೆ ಜನರನ್ನು ಜಾಗೃತಿಗೊಳಿಸಿ ಶಾಂತಿ, ದಯೆಗಳ ಬೀಜವನ್ನು ಅವರ ಮನಸ್ಸಿನಲ್ಲಿಬಿತ್ತಲು ಸಣ್ಣ ಪ್ರಯತ್ನವಿದು ಎಂದು ಕುಸುಮ್ ಅಭಿಪ್ರಾಯಪಟ್ಟಿದ್ದಾರೆ.