ಆ್ಯಪ್ನಗರ

ಮನ್‌ ಕಿ ಬಾತ್‌ ಹೇಳಲು ಬಂದಿಲ್ಲ, ನಿಮ್ಮ ಮನದ ಮಾತು ಆಲಿಸಲು ಬಂದಿದ್ದೇನೆ

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಂಧ್ರದ ಜನತೆ ಕಾಂಗ್ರೆಸ್‌ ಕೈಹಿಡಿದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿದೆ ಎಂದು ಆಂಧ್ರ ಮೂಲದ ಕಾರ್ಮಿಕರಿಗೆ ರಾಹುಲ್‌ ಗಾಂಧಿ ಭರವಸೆ ನೀಡಿದರು.

Vijaya Karnataka 12 Jan 2019, 5:00 am
ದುಬೈ: ಎರಡು ದಿನಗಳ ಯುಎಇ ಪ್ರವಾಸದಲ್ಲಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅಲ್ಲಿ ಕೂಡ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ದುಬೈನ ಜಬಲ್‌ ಅಲಿ ಲೇಬರ್‌ ಕಾಲೋನಿಯಲ್ಲಿ ಭಾರತೀಯ ಕಾರ್ಮಿಕರನ್ನು ಉದ್ದೇಶಿಸಿ ''ನಾನಿಲ್ಲಿ ನನ್ನ ಮನ್‌ ಕಿ ಬಾತ್‌ ಹೇಳಲು ಬಂದಿಲ್ಲ, ಬದಲಿಗೆ ನಿಮ್ಮ ಮನದ ಮಾತು ಆಲಿಸಲು ಬಂದಿದ್ದೇನೆ,'' ಎಂದು ಹೇಳುವ ಮೂಲಕ ರಾಹುಲ್‌, ಮೋದಿ ಅವರ ಮಾಸಿಕ ರೇಡಿಯೊ ಭಾಷಣ 'ಮನ್‌ ಕಿ ಬಾತ್‌'ಅನ್ನು ಲೇವಡಿ ಮಾಡಿದರು.
Vijaya Karnataka Web rahul gandhi


''ಮೋದಿ ಸರಕಾರ ಉಳ್ಳವರ ಪರವಿದೆ. ಕಾರ್ಮಿಕರು, ರೈತರಿಗೆ ಯಾವ ನೆರವನ್ನೂ ಕೈಗೊಂಡಿಲ್ಲ. ಅವರ ದೊಡ್ಡ ದೊಡ್ಡ ಭಾಷಣಗಳಿಂದ ಜನರ ಹೊಟ್ಟೆ ತುಂಬದು,'' ಎಂದು ಆರೋಪಿಸಿದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತದರ ಮಿತ್ರಪಕ್ಷಗಳು ಬಿಜೆಪಿಯನ್ನು ಸೋಲಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹೆಮ್ಮೆ ಹೆಚ್ಚಿಸಿದಿರಿ: ''ದುಬೈ ನಗರದ ಅಭಿವೃದ್ಧಿಯ ಪಾಲುದಾರರು ನೀವು. ಇಲ್ಲಿನ ಗಗನಚುಂಬಿ ಕಟ್ಟಡಗಳು, ಐಷಾರಾಮಿ ಹೋಟೆಲ್‌ಗಳು, ವಿಶಾಲ ರಸ್ತೆಗಳು, ವಿಮಾನ ನಿಲ್ದಾಣಗಳು ಪ್ರತಿಯೊಂದರ ನಿರ್ಮಾಣದಲ್ಲೂ ನಿಮ್ಮ ಬೆವರು, ರಕ್ತ ಹರಿದಿದೆ. ಹೊಟ್ಟೆಪಾಡಿಗೆ ನೀವು ಇಲ್ಲಿಗೆ ಬಂದು ಸಂಕಷ್ಟಗಳ ಮಧ್ಯೆಯೇ ಭಾರತದ ಹೆಮ್ಮೆ ಹೆಚ್ಚಿಸಿದಿರಿ,'' ಎಂದು ಕಾರ್ಮಿಕರನ್ನು ಕೊಂಡಾಡಿದರು. ನಿಮ್ಮ ಸಮಸ್ಯೆಗಳಿಗೆ ನಮ್ಮ ಪಕ್ಷ ಸದಾ ಸ್ಪಂದಿಸಲಿದೆ ಎಂದರು.

ಆಂಧ್ರಕ್ಕೆ ವಿಶೇಷ ಸ್ಥಾನಮಾನ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಆಂಧ್ರದ ಜನತೆ ಕಾಂಗ್ರೆಸ್‌ ಕೈಹಿಡಿದರೆ, ನಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಿದೆ ಎಂದು ಆಂಧ್ರ ಮೂಲದ ಕಾರ್ಮಿಕರಿಗೆ ಭರವಸೆ ನೀಡಿದರು.

------

ಉದ್ಯಮಿಗಳ ಜತೆ ಸಭೆ

ಕಾರ್ಮಿಕರ ಭೇಟಿಗೂ ಮುನ್ನ ರಾಹುಲ್‌ ಅವರು, ಕರ್ನಾಟಕದ ಕರಾವಳಿ ಮೂಲದ ಬಿ.ಆರ್‌.ಶೆಟ್ಟಿ ಸೇರಿದಂತೆ ಅನೇಕ ದುಬೈ ಉದ್ಯಮಿಗಳ ಜತೆ ಸಭೆ ನಡೆಸಿ ಹಲವು ವಿಷಯಗಳನ್ನು ಚರ್ಚಿಸಿದರು. ರಾಹುಲ್‌, ಶನಿವಾರ ಅಬುಧಾಬಿಗೆ ಭೇಟಿ ನೀಡುವ ಕಾರ‍್ಯಕ್ರಮವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ