ಆ್ಯಪ್ನಗರ

ಮುಖಂಡರ ಸ್ವಾಗತಕ್ಕೆ ಚಪ್ಪಲಿ ಹಾರ ರೆಡಿ...!

ಅಗತ್ಯ ಮೂಲಸೌಕರ್ಯ ಕಲ್ಪಿಸದ ರಾಜಕೀಯ ನಾಯಕರಿಗೆ ತಕ್ಕ ಪಾಠ ಕಲಿಸಲು ಸಾರ್ವಜನಿಕರು ಸಿದ್ಧರಾಗಿದ್ದಾರೆ.

TIMESOFINDIA.COM 26 Jun 2018, 2:58 pm
ಭೋಪಾಲ್‌: ಅಗತ್ಯ ಮೂಲಸೌಕರ್ಯ ಕಲ್ಪಿಸದ ರಾಜಕೀಯ ನಾಯಕರಿಗೆ ತಕ್ಕ ಪಾಠ ಕಲಿಸಲು ಸಾರ್ವಜನಿಕರು ಸಿದ್ಧರಾಗಿದ್ದಾರೆ.
Vijaya Karnataka Web bhopal


ಓಂ ನಗರ ಭಾಗದಲ್ಲಿ ರಾಜಕೀಯ ನಾಯಕರನ್ನು ಸ್ವಾಗತಿಸಲು ವಿಶೇಷ ಹಾರ ರೆಡಿಯಾಗಿದೆ. ಊರಿನ ಮನೆಯಲ್ಲಿರುವ ಹಳೆ, ಚಪ್ಪಲಿ, ಶೂ, ಬೂಟ್ಸ್‌ಗಳ ಹಾರ ಸಿದ್ಧಗೊಳಿಸಲಾಗಿದೆ. ಈ ಹಾರಗಳನ್ನು ಮುಖಂಡರು ಆಗಮಿಸುವ ದಾರಿಗಳಲ್ಲಿ ಈ ಚಪ್ಪಲಿ ಹಾರಗಳನ್ನು ಹಾಕಿದ್ದಾರೆ.

ಪ್ರತಿ ಬಾರಿ ರಾಜಕೀಯ ನಾಯಕರು ಮತ ಕೇಳಲು ಮಾತ್ರ ಬರುತ್ತಾರೆ. ಆದರೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವತ್ತ ಪ್ರಯತ್ನವನ್ನೂ ಮಾಡುವುದಿಲ್ಲ. ಪೂರ್ವ ಮುಂಗಾರು ಮಳೆಗೆ ನಗರದಲ್ಲಿ ಸಾಕಷ್ಟು ಸಮಸ್ಯೆಗಳಾಗಿವೆ. ಇನ್ನು ಮುಂಗಾರು ಸರಿಯಾಗಿ ಆರಂಭಗೊಂಡ ಬಳಿಕ ಪರಿಸ್ಥಿತಿ ಬಿಗಡಾಯಿಸಲಿದೆ.

ಈ ವಿಚಾರವನ್ನು ಸರಿಯಾಗಿ ಅರ್ಥ ಮಾಡಿಸಲು ಚಪ್ಪಲಿ ಹಾರ ಸಿದ್ಧಗೊಳಿಸಿರುವುದಾಗಿ ಸ್ಥಳೀಯರು ಹೇಳಿದ್ದಾರೆ. ನಗರದಲ್ಲಿ ಆಗಿರುವ ಸಮಸ್ಯೆಗಳ ಕುರಿತು ಕಾರ್ಪೊರೇಟರ್‌, ಅಧಿಕಾರಿಗಳಿಗೆ ದೂರು ನೀಡಿದರೆ, ಯಾವುದೇ ವಿಧವಾರ ಕ್ರಮ ಕೈಗೊಳ್ಳುತ್ತಿಲ್ಲ. ಒಳಚರಂಡಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ ಎಷ್ಟು ಬಾರಿ ದೂರು ನೀಡಿದರೂ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ