ಆ್ಯಪ್ನಗರ

ಮಹಾ ಘಟಬಂಧನ್ ಎಂದ್ರೆ ಮೋದಿ ವಿರೋಧಿಗಳ ಗ್ರೂಪ್ ಫೋಟೊ: ಅಮರ್ ಸಿಂಗ್

'ಸಾಥಿ ಹಾಥ್ ಮಿಲಾನಾ ಸಾಥಿ ರೇ' (ಎಲ್ಲರೂ ಕೈ ಜೋಡಿಸೋಣ ಬನ್ನಿ) ಪ್ರಸ್ತಾಪಿಸಿದ ಅವರು, ಮೋದಿ ಕುರಿತು ಭಯ ಹೊಂದಿದವರೆಲ್ಲ ಒಂದುಗೂಡಿದ್ದಾರೆ ಎಂದು ಟೀಕಿಸಿದ್ದಾರೆ.

Vijaya Karnataka 1 Apr 2019, 10:07 am
ಲಖನೌ: ಉತ್ತರ ಪ್ರದೇಶದಲ್ಲಿ ಎಸ್‌ಪಿ-ಬಿಎಸ್‌ಪಿ-ಆರ್‌ಎಲ್‌ಡಿ ಮೈತ್ರಿಕೂಟವು ಪ್ರಧಾನಿ ನರೇಂದ್ರ ಮೋದಿ ನಿಂದಕರ ಗ್ರೂಪ್ ಫೋಟೋಗ್ರಾಫ್ ರೀತಿ ಇದೆ ಎಂದು ಲೇವಡಿ ಮಾಡಿರುವ ಸಮಾಜವಾದಿ ಪಕ್ಷದ ಮಾಜಿ ನಾಯಕ ಅಮರ್ ಸಿಂಗ್, ಈ ಮೈತ್ರಿ ಕೂಟವು ರಾಜ್ಯದ 80 ಕ್ಷೇತ್ರಗಳಲ್ಲಿ ಏಳಕ್ಕಿಂತ ಹೆಚ್ಚು ಸ್ಥಾನ ಗೆಲ್ಲದು ಎಂದು ಭವಿಷ್ಯ ನುಡಿದಿದ್ದಾರೆ.
Vijaya Karnataka Web sp


ಹಿಂದಿ ಸಿನಿಮಾದ ಹಾಡು 'ಸಾಥಿ ಹಾಥ್ ಮಿಲಾನಾ ಸಾಥಿ ರೇ' (ಎಲ್ಲರೂ ಕೈ ಜೋಡಿಸೋಣ ಬನ್ನಿ) ಪ್ರಸ್ತಾಪಿಸಿದ ಅವರು, ಮೋದಿ ಕುರಿತು ಭಯ ಹೊಂದಿದವರೆಲ್ಲ ಒಂದುಗೂಡಿದ್ದಾರೆ ಎಂದು ಟೀಕಿಸಿದ್ದಾರೆ.

'ಇನ್ನು ದೇಶದಲ್ಲಿ ಮಹಾ ಘಟಬಂಧನ್ ಎಲ್ಲಿದೆ? ಮಮತಾ ಬ್ಯಾನರ್ಜಿ ಎಲ್ಲಿ ಹೋದರು? ಕಾಂಗ್ರೆಸ್ ಹಾಗೂ ಎಡಪಕ್ಷಗಳು ಎಲ್ಲಿವೆ? ಮಮತಾ ಹಾಗೂ ಬಿಜೆಪಿ ಎರಡೂ ಒಂದೇ ಎಂಬುದಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಈಗ ಹೇಳುತ್ತಿದ್ದಾರೆ ಎಂದು ಅಮರ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ