ಹೊಸದಿಲ್ಲಿ: ಅಫ್ಘಾನಿಸ್ತಾನದ ಸನ್ನಿವೇಶ ಯಥಾಸ್ಥಿತಿಯಲ್ಲಿ ಮುಂದುವರಿಯಲಿದೆಯೇ ಅಥವಾ ಭೀಕರ ಯುದ್ಧದ ಸನ್ನಿವೇಶ ಎದುರಾಗಲಿದೆಯೇ? ಸಂಘರ್ಷಪೀಡಿತ ದೇಶದ ಸುತ್ತಲೂ ನಡೆಯುತ್ತಿರುವ ಚಟುವಟಿಕೆಗಳು ಮುಂದಿನ ದಿನಗಳಲ್ಲಿನ ಅಪಾಯದ ಮುನ್ಸೂಚನೆ ನೀಡುತ್ತಿದೆ. ಅಫ್ಘಾನಿಸ್ತಾನದಲ್ಲಿ ಉಗ್ರರ ಬೆನ್ನಿಗೆ ನಿಂತಿರುವ ಚೀನಾ ಮತ್ತು ಪಾಕಿಸ್ತಾನ ದೇಶಗಳು ಮೂರು ದೇಶಗಳ ಮಿತ್ರಪಡೆಗಳ ಸವಾಲನ್ನು ಎದುರಿಸಬೇಕಾಗಬಹುದು ಎನ್ನಲಾಗುತ್ತಿದೆ. ಅಫ್ಘಾನಿಸ್ತಾನ ವಿಚಾರದಲ್ಲಿ ಯಾವುದೇ ಭೂ-ರಾಜಕೀಯ ಸಂಘರ್ಷ ನಡೆದರೆ ಅದು ಒಂದೆಡೆ ಚೀನಾ ಮತ್ತು ಪಾಕಿಸ್ತಾನ ಹಾಗೂ ಇನ್ನೊಂದೆಡೆ ಭಾರತ, ರಷ್ಯಾ ಮತ್ತು ಇರಾನ್ ಪಡೆಗಳ ನಡುವೆ ಸಂಭವಿಸಲಿದೆ ಎಂದು ಹಿರಿಯ ಅರಬ್ ಗಲ್ಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಳೆದ ತಿಂಗಳು ಅವಸರದಲ್ಲಿ ಅಫ್ಘಾನಿಸ್ತಾನದಿಂದ ಕಾಲ್ಕಿತ್ತ ಅಮೆರಿಕ, ಈ ಹೋರಾಟದಲ್ಲಿ ಭಾಗಿಯಾಗುವುದಿಲ್ಲ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
ಕಾಬೂಲ್ನಲ್ಲಿ ಅಧಿಕಾರಕ್ಕಾಗಿ ತಾಲಿಬಾನ್ ಉಗ್ರರು ಮುನ್ನುಗ್ಗುವ ಮುಂಚೆಯಿಂದಲೂ ಇಲ್ಲಿನ ಭೂ ರಾಜಕೀಯದ ಆಟದಲ್ಲಿ ಚೀನಾ ಮತ್ತು ಪಾಕಿಸ್ತಾನ ಮುಂಚೂಣಿಯಲ್ಲಿವೆ. ಪಾಕಿಸ್ತಾನದ ಐಎಸ್ಐ ಸುದೀರ್ಘ ಕಾಲದಿಂದಲೂ ತನ್ನ ನೆಲದಲ್ಲಿ ತಾಲಿಬಾನ್ ಅನ್ನು ಪೋಷಣೆ ಮಾಡುತ್ತಿದ್ದರೆ, ಅಫ್ಘಾನಿಸ್ತಾನದ ಸಮೃದ್ಧ ಖನಿಜ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿರುವ ಚೀನಾ, ತನ್ನ ಬಹು ಕೋಟಿ ವೆಚ್ಚದ ರಸ್ತೆ ಯೋಜನೆ ಕಾರಿಡಾರ್ ಅನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸಲು ಬಯಸಿದೆ.
ಈ ಭಾಗದಲ್ಲಿ ಚೀನಾ ತನ್ನ ಬಹು ಮುಖ್ಯ ಪಾಲುದಾರ ಎಂದು ತಾಲಿಬಾನ್ ಈಗಾಗಲೇ ಪ್ರಕಟಿಸಿದೆ. ಅಫ್ಘಾನಿಸ್ತಾನಕ್ಕೆ 250 ಕೋಟಿ ಡಾಲರ್ ಮಾನವೀಯ ನೆರವು ಘೋಷಿಸಿರುವ ಚೀನಾ, ದೇಶಕ್ಕೆ ಮತ್ತಷ್ಟು ಆರ್ಥಿಕ ಸಹಾಯ ಒದಗಿಸಲು ಸಿದ್ಧ ಇರುವುದಾಗಿ ಹೇಳಿದೆ.
ಪಾಕಿಸ್ತಾನದ ಹಸ್ತಕ್ಷೇಪ
ಇನ್ನೊಂದೆಡೆ ತಾಲಿಬಾನ್ ಅಧಿಕಾರಕ್ಕೆ ಬಂದ ಸಂದರ್ಭದಿಂದಲೂ ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನ ಸಕ್ರಿಯವಾಗಿ ತೊಡಗಿಕೊಂಡಿದೆ. ಅಲ್ಲಿನ ಸರ್ಕಾರದ ರಚನೆಯಲ್ಲಿ ಪಾಕಿಸ್ತಾನವೇ ಪ್ರಮುಖ ಪಾತ್ರ ವಹಿಸಿದೆ. ಸರ್ಕಾರ ರಚನೆ ವಿಚಾರದಲ್ಲಿ ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ಸಂಘಟನೆಗಳ ನಡುವೆ ಸಂಘರ್ಷ ನಡೆದು ತಾಲಿಬಾನ್ ಮುಖಂಡ ಮುಲ್ಲಾ ಬರಾದಾರ್ ಗಾಯಗೊಂಡಿದ್ದಾನೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಐಎಸ್ಐ ಮುಖ್ಯಸ್ಥ ಜನರಲ್ ಫೈಜ್ ಹಮೀದ್ ಅಲ್ಲಿಗೆ ಧಾವಿಸಿದ್ದು ಇದಕ್ಕೆ ಉದಾಹರಣೆ.
ಇದು ಪ್ರತ್ಯೇಕವಾಗಿ ಎರಡು ದೇಶಗಳು ತಮ್ಮ ಅಧಿಪತ್ಯದ ಪ್ರಯತ್ನ ನಡೆಸುತ್ತಿರುವಂತೆ ಕಂಡರೂ, ಭಾರತದ ವಿರುದ್ಧದ ಚಟುವಟಿಕೆಗಳಿಗಾಗಿ ಈಗಾಗಲೇ ಜತೆಗೂಡಿರುವ ಚೀನಾ ಮತ್ತು ಪಾಕಿಸ್ತಾನ, ತಮ್ಮ ಜಂಟಿ ಸಹಭಾಗಿತ್ವವನ್ನು ಅಫ್ಘಾನಿಸ್ತಾನಕ್ಕೂ ವಿಸ್ತರಿಸುವುದು ಸ್ಪಷ್ಟವಾಗಿದೆ.
ರಷ್ಯಾಕ್ಕೆ ಕಳವಳ
ಆರಂಭದಲ್ಲಿ ತಾಲಿಬಾನ್ ಜತೆ ಉತ್ತಮ ಸಂಬಂಧ ಹೊಂದುವಂತೆ ಕಂಡರೂ, ರಷ್ಯಾ ಈಗ ಹೊಸ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬಯಸುತ್ತಿಲ್ಲ. ಈ ವಿಚಾರವಾಗಿ ತನ್ನ ನಿಲುವನ್ನು ಕಠಿಣಗೊಳಿಸಿದೆ. ಅಫ್ಘಾನಿಸ್ತಾನದ ಹೊಸ ಸರ್ಕಾರದ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲು ಅದು ನಿರಾಕರಿಸಿದೆ. ಈ ಭಾಗದಲ್ಲಿ ಅನೇಕ ಭಯೋತ್ಪಾದನಾ ಗುಂಪುಗಳು ಸಕ್ರಿಯವಾಗಿರುವುದು ರಷ್ಯಾ ಚಿಂತೆಗೆ ಕಾರಣವಾಗಿದೆ. ಅಫ್ಘಾನಿಸ್ತಾನವು ತನ್ನ ನೆಲದ ಮೇಲಿನ ಭಯೋತ್ಪಾದಕರ ದಾಳಿಗಳಿಗೆ ಬಳಕೆಯಾಗದಂತೆ ತಡೆಯಲು ಅದು ಬಯಸಿದೆ.
ಈ ಭಯದ ಕಾರಣದಿಂದಲೇ, ಅಫ್ಘಾನಿಸ್ತಾನ ಗಡಿಯಲ್ಲಿರುವ ತಜಿಕಿಸ್ತಾನಕ್ಕೆ ಅದು ಸಶಸ್ತ್ರಸಜ್ಜಿತ ವಾಹನಗಳು ಹಾಗೂ ಸೇನಾ ಸಾಧನಗಳನ್ನು ಇತ್ತೀಚೆಗೆ ರವಾನೆ ಮಾಡಿದೆ. ಭಾರತಕ್ಕೂ ಇದೇ ರೀತಿಯ ಭಯೋತ್ಪಾದನೆಯ ಭೀತಿ ಎದುರಾಗಿದೆ. ಈ ಬಗ್ಗೆ ರಷ್ಯಾ ಮತ್ತು ಭಾರತ ತಮ್ಮ ಕಳವಳಗಳನ್ನು ಹಂಚಿಕೊಂಡಿವೆ. ಕಳೆದ ವಾರ ರಷ್ಯಾ ಭದ್ರತಾ ಅಧಿಕಾರಿ ಜನರಲ್ ನಿಕೋಲಯ್ ಪತ್ರುಶೆವ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಜತೆ ಅಫ್ಘಾನಿಸ್ತಾನದ ಸನ್ನಿವೇಶಗಳ ಬಗ್ಗೆ ಚರ್ಚಿಸಿದ್ದರು.
ಪಾಕ್ ವಿರುದ್ಧ ಇರಾನ್ ಕಿಡಿ
ಅಫ್ಘಾನಿಸ್ತಾನದ ಹೊಸ ಸರ್ಕಾರದೊಂದಿಗೆ ಮರು ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಆರಂಭದಲ್ಲಿ ಸೂಚನೆ ನೀಡಿದ್ದರೂ, ಈ ಪ್ರದೇಶದ ಪ್ರಬಲ ಶಿಯಾ ಮುಸ್ಲಿಂ ಶಕ್ತಿಯಾಗಿರುವ ಇರಾನ್, ಅಫ್ಘನ್ ವಿಚಾರದಲ್ಲಿನ ತನ್ನ ನಿಲುವನ್ನು ಬದಲಿಸಿದಂತಿದೆ. ಪಂಜ್ಶೀರ್ ಕಣಿವೆ ಮೇಲಿನ ತಾಲಿಬಾನಿಗಳ ಇತ್ತೀಚಿನ ದಾಳಿ ಬಗ್ಗೆ ಅದು ತೀವ್ರ ಕಳವಳ ವ್ಯಕ್ತಪಡಿಸಿತ್ತು. ಅಫ್ಘನ್ ಸರ್ಕಾರವು ಎಲ್ಲವನ್ನೂ ಒಳಗೊಳ್ಳುವ ಸ್ವರೂಪದಲ್ಲಿಲ್ಲ ಎಂದು ಹೇಳಿದ್ದ ಇರಾನ್, ಅಫ್ಘನ್ ಆಂತರಿಕ ವಿಚಾರಗಳಲ್ಲಿ ಪಾಕಿಸ್ತಾನದ ಹಸ್ತಕ್ಷೇಪದ ವಿರುದ್ಧ ಕಿಡಿಕಾರಿತ್ತು.
ಅಫ್ಘಾನಿಸ್ತಾನದೊಂದಿಗೆ 900 ಕಿಮೀ ಉದ್ದಕ್ಕೂ ಗಡಿ ಹಂಚಿಕೊಂಡಿರುವ ಇರಾನ್, 1996-2001ರ ಅವಧಿಯಲ್ಲಿ ತಾಲಿಬಾನ್ ಆಡಳಿತವಿದ್ದಾಗ ಅದನ್ನು ಪರಿಗಣಿಸಿರಲಿಲ್ಲ. ಅಫ್ಘಾನಿಸ್ತಾನದ ವಿಚಾರದಲ್ಲಿ ಇರಾನ್ ಜತೆಗೆ ಭಾರತ ನಿಕಟವಾಗಿ ಸಮಾಲೋಚನೆ ನಡೆಸುತ್ತಿದೆ. ವಿದೇಶಾಂಗ ಸಚಿವ ಹೊಸ್ನೈನ್ ಅಮಿರಬ್ದೊಲ್ಲಾಹಿಯನ್ ಅವರೊಂದಿಗೆ ಎಸ್ ಜೈಶಂಕರ್ ಈ ಹಿಂದೆ ಚರ್ಚಿಸಿದ್ದರು. ತಜಿಕಿಸ್ತಾನದ ರಾಜಧಾನಿ ಡುಶ್ಬಂದೆಯಲ್ಲಿ ರಷ್ಯಾ, ಇರಾನ್ ಹಾಗೂ ತಜಿಕಿಸ್ತಾನಗಳ ಜತೆ ದ್ವಿಪಕ್ಷೀಯ ಸಭೆಗಳನ್ನು ಅವರು ನಡೆಸುವ ನಿರೀಕ್ಷೆಯಿದೆ.
ಭಾರತಕ್ಕೆ ಉಗ್ರರ ದಾಳಿ ಭೀತಿ
ಕಳೆದ ಬಾರಿ ತಾಲಿಬಾನ್ ಅಧಿಕಾರದಲ್ಲಿ ಇದ್ದಾಗ ಕಾಶ್ಮೀರದಲ್ಲಿ ಉಗ್ರರ ಹಾವಳಿ ತೀವ್ರವಾಗಿದ್ದು, ಭಾರತಕ್ಕೆ ಚೆನ್ನಾಗಿ ಅರಿವಿದೆ. ಹೀಗಾಗಿ ಅಫ್ಘಾನಿಸ್ತಾನ ಉಗ್ರರ ಸುರಕ್ಷಿತ ತಾಣವಾಗದಂತೆ ತಡೆಯಲು ಮತ್ತು ಅದು ತನ್ನ ಭದ್ರತೆಯ ಮತ್ತೊಂದು ಅಪಾಯವಾಗಿ ಎದುರಾಗದಂತೆ ಮಾಡಲು ಪ್ರಾದೇಶಿಕ ಶಕ್ತಿಗಳೊಂದಿಗೆ ಕೈಜೋಡಿಸುವತ್ತ ಭಾರತ ಗಮನ ಹರಿಸಿದೆ.
ತಾಲಿಬಾನ್ ಮತ್ತೆ ಚಿಗುರಿಕೊಂಡಿರುವುದು ಮತ್ತಷ್ಟು ಉಗ್ರರ ಸೇರ್ಪಡೆಗೆ ಹಾಗೂ ಪಾಕಿಸ್ತಾನದ ಕಡೆಯಿಂದ ಕಾಶ್ಮೀರದ ಒಳಗಿನ ಉಗ್ರರಿಗೆ ಶಸ್ತ್ರಾಸ್ತ್ರಗಳ ಪೂರೈಕೆಗೆ ನೆರವಾಗುವ ಭೀತಿ ಭಾರತಕ್ಕೆ ಉಂಟಾಗಿದೆ. ಕಾಬೂಲ್ನಲ್ಲಿ ಭಾರತ ಪ್ರಸ್ತುತ ರಾಯಭಾರ ಅಸ್ತಿತ್ವ ಹೊಂದಿಲ್ಲ. ತಾಲಿಬಾನ್ ಜತೆಗೆ ಸಮರ್ಪಕ ರೀತಿಯ ಚರ್ಚೆಗೆ ಇನ್ನೂ ಸಾಧ್ಯವಾಗಿಲ್ಲ. ಕತಾರ್ನ ದೋಹಾ, ಭಾರತಕ್ಕೆ ತಾಲಿಬಾನ್ ಅನ್ನು ಸಂಪರ್ಕಿಸುವ ಕೇಂದ್ರವಾಗಿದೆ. ಆಗಸ್ಟ್ 31ರಂದು ಅಲ್ಲಿ ತಾಲಿಬಾನ್ ಪ್ರತಿನಿಧಿಯ ಜತೆ ಸಭೆ ನಡೆದಿತ್ತು. ಆದರೆ ಅದರ ವಿವರಗಳನ್ನು ವಿದೇಶಾಂಗ ಸಚಿವಾಲಯ ಹಂಚಿಕೊಂಡಿಲ್ಲ.
ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನಕ್ಕೆ ಆರ್ಥಿಕ ಹಾಗೂ ಮೂಲಸೌಕರ್ಯ ಯೋಜನೆಗಳಲ್ಲಿ ಸಾಕಷ್ಟು ನೆರವು ನೀಡಿರುವ ಭಾರತ, ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ಒದಗಿಸುವುದರ ಕುರಿತು ನಡೆದ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಭೆಯಲ್ಲಿ ಆರ್ಥಿಕ ಸಹಾಯದ ಘೋಷಣೆಯಿಂದ ದೂರ ಉಳಿದಿದೆ. ಈಗಿನ ಪರಿಸ್ಥಿತಿ ಮುಂದುವರಿದರೆ ರಷ್ಯಾ ಮತ್ತು ಇರಾನ್ ಮುಂತಾದ ಪ್ರಾದೇಶಿಕ ಶಕ್ತಿಗಳ ಜತೆಗಿನ ಭಾರತದ ಮೈತ್ರಿ ಬಹಳ ಮುಖ್ಯವಾಗಲಿದೆ.
ಕಾಬೂಲ್ನಲ್ಲಿ ಅಧಿಕಾರಕ್ಕಾಗಿ ತಾಲಿಬಾನ್ ಉಗ್ರರು ಮುನ್ನುಗ್ಗುವ ಮುಂಚೆಯಿಂದಲೂ ಇಲ್ಲಿನ ಭೂ ರಾಜಕೀಯದ ಆಟದಲ್ಲಿ ಚೀನಾ ಮತ್ತು ಪಾಕಿಸ್ತಾನ ಮುಂಚೂಣಿಯಲ್ಲಿವೆ. ಪಾಕಿಸ್ತಾನದ ಐಎಸ್ಐ ಸುದೀರ್ಘ ಕಾಲದಿಂದಲೂ ತನ್ನ ನೆಲದಲ್ಲಿ ತಾಲಿಬಾನ್ ಅನ್ನು ಪೋಷಣೆ ಮಾಡುತ್ತಿದ್ದರೆ, ಅಫ್ಘಾನಿಸ್ತಾನದ ಸಮೃದ್ಧ ಖನಿಜ ಸಂಪನ್ಮೂಲಗಳ ಮೇಲೆ ಕಣ್ಣಿಟ್ಟಿರುವ ಚೀನಾ, ತನ್ನ ಬಹು ಕೋಟಿ ವೆಚ್ಚದ ರಸ್ತೆ ಯೋಜನೆ ಕಾರಿಡಾರ್ ಅನ್ನು ಅಫ್ಘಾನಿಸ್ತಾನಕ್ಕೆ ವಿಸ್ತರಿಸಲು ಬಯಸಿದೆ.
ಈ ಭಾಗದಲ್ಲಿ ಚೀನಾ ತನ್ನ ಬಹು ಮುಖ್ಯ ಪಾಲುದಾರ ಎಂದು ತಾಲಿಬಾನ್ ಈಗಾಗಲೇ ಪ್ರಕಟಿಸಿದೆ. ಅಫ್ಘಾನಿಸ್ತಾನಕ್ಕೆ 250 ಕೋಟಿ ಡಾಲರ್ ಮಾನವೀಯ ನೆರವು ಘೋಷಿಸಿರುವ ಚೀನಾ, ದೇಶಕ್ಕೆ ಮತ್ತಷ್ಟು ಆರ್ಥಿಕ ಸಹಾಯ ಒದಗಿಸಲು ಸಿದ್ಧ ಇರುವುದಾಗಿ ಹೇಳಿದೆ.
ಪಾಕಿಸ್ತಾನದ ಹಸ್ತಕ್ಷೇಪ
ಇನ್ನೊಂದೆಡೆ ತಾಲಿಬಾನ್ ಅಧಿಕಾರಕ್ಕೆ ಬಂದ ಸಂದರ್ಭದಿಂದಲೂ ಅಫ್ಘಾನಿಸ್ತಾನದ ಆಂತರಿಕ ವ್ಯವಹಾರಗಳಲ್ಲಿ ಪಾಕಿಸ್ತಾನ ಸಕ್ರಿಯವಾಗಿ ತೊಡಗಿಕೊಂಡಿದೆ. ಅಲ್ಲಿನ ಸರ್ಕಾರದ ರಚನೆಯಲ್ಲಿ ಪಾಕಿಸ್ತಾನವೇ ಪ್ರಮುಖ ಪಾತ್ರ ವಹಿಸಿದೆ. ಸರ್ಕಾರ ರಚನೆ ವಿಚಾರದಲ್ಲಿ ತಾಲಿಬಾನ್ ಮತ್ತು ಹಕ್ಕಾನಿ ನೆಟ್ವರ್ಕ್ ಸಂಘಟನೆಗಳ ನಡುವೆ ಸಂಘರ್ಷ ನಡೆದು ತಾಲಿಬಾನ್ ಮುಖಂಡ ಮುಲ್ಲಾ ಬರಾದಾರ್ ಗಾಯಗೊಂಡಿದ್ದಾನೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಐಎಸ್ಐ ಮುಖ್ಯಸ್ಥ ಜನರಲ್ ಫೈಜ್ ಹಮೀದ್ ಅಲ್ಲಿಗೆ ಧಾವಿಸಿದ್ದು ಇದಕ್ಕೆ ಉದಾಹರಣೆ.
ಇದು ಪ್ರತ್ಯೇಕವಾಗಿ ಎರಡು ದೇಶಗಳು ತಮ್ಮ ಅಧಿಪತ್ಯದ ಪ್ರಯತ್ನ ನಡೆಸುತ್ತಿರುವಂತೆ ಕಂಡರೂ, ಭಾರತದ ವಿರುದ್ಧದ ಚಟುವಟಿಕೆಗಳಿಗಾಗಿ ಈಗಾಗಲೇ ಜತೆಗೂಡಿರುವ ಚೀನಾ ಮತ್ತು ಪಾಕಿಸ್ತಾನ, ತಮ್ಮ ಜಂಟಿ ಸಹಭಾಗಿತ್ವವನ್ನು ಅಫ್ಘಾನಿಸ್ತಾನಕ್ಕೂ ವಿಸ್ತರಿಸುವುದು ಸ್ಪಷ್ಟವಾಗಿದೆ.
ರಷ್ಯಾಕ್ಕೆ ಕಳವಳ
ಆರಂಭದಲ್ಲಿ ತಾಲಿಬಾನ್ ಜತೆ ಉತ್ತಮ ಸಂಬಂಧ ಹೊಂದುವಂತೆ ಕಂಡರೂ, ರಷ್ಯಾ ಈಗ ಹೊಸ ಸರ್ಕಾರದೊಂದಿಗೆ ಮಾತುಕತೆ ನಡೆಸಲು ಬಯಸುತ್ತಿಲ್ಲ. ಈ ವಿಚಾರವಾಗಿ ತನ್ನ ನಿಲುವನ್ನು ಕಠಿಣಗೊಳಿಸಿದೆ. ಅಫ್ಘಾನಿಸ್ತಾನದ ಹೊಸ ಸರ್ಕಾರದ ಅಧಿಕಾರ ಸ್ವೀಕಾರ ಸಮಾರಂಭಕ್ಕೆ ಹಾಜರಾಗಲು ಅದು ನಿರಾಕರಿಸಿದೆ. ಈ ಭಾಗದಲ್ಲಿ ಅನೇಕ ಭಯೋತ್ಪಾದನಾ ಗುಂಪುಗಳು ಸಕ್ರಿಯವಾಗಿರುವುದು ರಷ್ಯಾ ಚಿಂತೆಗೆ ಕಾರಣವಾಗಿದೆ. ಅಫ್ಘಾನಿಸ್ತಾನವು ತನ್ನ ನೆಲದ ಮೇಲಿನ ಭಯೋತ್ಪಾದಕರ ದಾಳಿಗಳಿಗೆ ಬಳಕೆಯಾಗದಂತೆ ತಡೆಯಲು ಅದು ಬಯಸಿದೆ.
ಈ ಭಯದ ಕಾರಣದಿಂದಲೇ, ಅಫ್ಘಾನಿಸ್ತಾನ ಗಡಿಯಲ್ಲಿರುವ ತಜಿಕಿಸ್ತಾನಕ್ಕೆ ಅದು ಸಶಸ್ತ್ರಸಜ್ಜಿತ ವಾಹನಗಳು ಹಾಗೂ ಸೇನಾ ಸಾಧನಗಳನ್ನು ಇತ್ತೀಚೆಗೆ ರವಾನೆ ಮಾಡಿದೆ. ಭಾರತಕ್ಕೂ ಇದೇ ರೀತಿಯ ಭಯೋತ್ಪಾದನೆಯ ಭೀತಿ ಎದುರಾಗಿದೆ. ಈ ಬಗ್ಗೆ ರಷ್ಯಾ ಮತ್ತು ಭಾರತ ತಮ್ಮ ಕಳವಳಗಳನ್ನು ಹಂಚಿಕೊಂಡಿವೆ. ಕಳೆದ ವಾರ ರಷ್ಯಾ ಭದ್ರತಾ ಅಧಿಕಾರಿ ಜನರಲ್ ನಿಕೋಲಯ್ ಪತ್ರುಶೆವ್ ಅವರು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪ್ರಧಾನಿ ನರೇಂದ್ರ ಮೋದಿ ಜತೆ ಅಫ್ಘಾನಿಸ್ತಾನದ ಸನ್ನಿವೇಶಗಳ ಬಗ್ಗೆ ಚರ್ಚಿಸಿದ್ದರು.
ಪಾಕ್ ವಿರುದ್ಧ ಇರಾನ್ ಕಿಡಿ
ಅಫ್ಘಾನಿಸ್ತಾನದ ಹೊಸ ಸರ್ಕಾರದೊಂದಿಗೆ ಮರು ಹೊಂದಾಣಿಕೆ ಮಾಡಿಕೊಳ್ಳುವುದಾಗಿ ಆರಂಭದಲ್ಲಿ ಸೂಚನೆ ನೀಡಿದ್ದರೂ, ಈ ಪ್ರದೇಶದ ಪ್ರಬಲ ಶಿಯಾ ಮುಸ್ಲಿಂ ಶಕ್ತಿಯಾಗಿರುವ ಇರಾನ್, ಅಫ್ಘನ್ ವಿಚಾರದಲ್ಲಿನ ತನ್ನ ನಿಲುವನ್ನು ಬದಲಿಸಿದಂತಿದೆ. ಪಂಜ್ಶೀರ್ ಕಣಿವೆ ಮೇಲಿನ ತಾಲಿಬಾನಿಗಳ ಇತ್ತೀಚಿನ ದಾಳಿ ಬಗ್ಗೆ ಅದು ತೀವ್ರ ಕಳವಳ ವ್ಯಕ್ತಪಡಿಸಿತ್ತು. ಅಫ್ಘನ್ ಸರ್ಕಾರವು ಎಲ್ಲವನ್ನೂ ಒಳಗೊಳ್ಳುವ ಸ್ವರೂಪದಲ್ಲಿಲ್ಲ ಎಂದು ಹೇಳಿದ್ದ ಇರಾನ್, ಅಫ್ಘನ್ ಆಂತರಿಕ ವಿಚಾರಗಳಲ್ಲಿ ಪಾಕಿಸ್ತಾನದ ಹಸ್ತಕ್ಷೇಪದ ವಿರುದ್ಧ ಕಿಡಿಕಾರಿತ್ತು.
ಅಫ್ಘಾನಿಸ್ತಾನದೊಂದಿಗೆ 900 ಕಿಮೀ ಉದ್ದಕ್ಕೂ ಗಡಿ ಹಂಚಿಕೊಂಡಿರುವ ಇರಾನ್, 1996-2001ರ ಅವಧಿಯಲ್ಲಿ ತಾಲಿಬಾನ್ ಆಡಳಿತವಿದ್ದಾಗ ಅದನ್ನು ಪರಿಗಣಿಸಿರಲಿಲ್ಲ. ಅಫ್ಘಾನಿಸ್ತಾನದ ವಿಚಾರದಲ್ಲಿ ಇರಾನ್ ಜತೆಗೆ ಭಾರತ ನಿಕಟವಾಗಿ ಸಮಾಲೋಚನೆ ನಡೆಸುತ್ತಿದೆ. ವಿದೇಶಾಂಗ ಸಚಿವ ಹೊಸ್ನೈನ್ ಅಮಿರಬ್ದೊಲ್ಲಾಹಿಯನ್ ಅವರೊಂದಿಗೆ ಎಸ್ ಜೈಶಂಕರ್ ಈ ಹಿಂದೆ ಚರ್ಚಿಸಿದ್ದರು. ತಜಿಕಿಸ್ತಾನದ ರಾಜಧಾನಿ ಡುಶ್ಬಂದೆಯಲ್ಲಿ ರಷ್ಯಾ, ಇರಾನ್ ಹಾಗೂ ತಜಿಕಿಸ್ತಾನಗಳ ಜತೆ ದ್ವಿಪಕ್ಷೀಯ ಸಭೆಗಳನ್ನು ಅವರು ನಡೆಸುವ ನಿರೀಕ್ಷೆಯಿದೆ.
ಭಾರತಕ್ಕೆ ಉಗ್ರರ ದಾಳಿ ಭೀತಿ
ಕಳೆದ ಬಾರಿ ತಾಲಿಬಾನ್ ಅಧಿಕಾರದಲ್ಲಿ ಇದ್ದಾಗ ಕಾಶ್ಮೀರದಲ್ಲಿ ಉಗ್ರರ ಹಾವಳಿ ತೀವ್ರವಾಗಿದ್ದು, ಭಾರತಕ್ಕೆ ಚೆನ್ನಾಗಿ ಅರಿವಿದೆ. ಹೀಗಾಗಿ ಅಫ್ಘಾನಿಸ್ತಾನ ಉಗ್ರರ ಸುರಕ್ಷಿತ ತಾಣವಾಗದಂತೆ ತಡೆಯಲು ಮತ್ತು ಅದು ತನ್ನ ಭದ್ರತೆಯ ಮತ್ತೊಂದು ಅಪಾಯವಾಗಿ ಎದುರಾಗದಂತೆ ಮಾಡಲು ಪ್ರಾದೇಶಿಕ ಶಕ್ತಿಗಳೊಂದಿಗೆ ಕೈಜೋಡಿಸುವತ್ತ ಭಾರತ ಗಮನ ಹರಿಸಿದೆ.
ತಾಲಿಬಾನ್ ಮತ್ತೆ ಚಿಗುರಿಕೊಂಡಿರುವುದು ಮತ್ತಷ್ಟು ಉಗ್ರರ ಸೇರ್ಪಡೆಗೆ ಹಾಗೂ ಪಾಕಿಸ್ತಾನದ ಕಡೆಯಿಂದ ಕಾಶ್ಮೀರದ ಒಳಗಿನ ಉಗ್ರರಿಗೆ ಶಸ್ತ್ರಾಸ್ತ್ರಗಳ ಪೂರೈಕೆಗೆ ನೆರವಾಗುವ ಭೀತಿ ಭಾರತಕ್ಕೆ ಉಂಟಾಗಿದೆ. ಕಾಬೂಲ್ನಲ್ಲಿ ಭಾರತ ಪ್ರಸ್ತುತ ರಾಯಭಾರ ಅಸ್ತಿತ್ವ ಹೊಂದಿಲ್ಲ. ತಾಲಿಬಾನ್ ಜತೆಗೆ ಸಮರ್ಪಕ ರೀತಿಯ ಚರ್ಚೆಗೆ ಇನ್ನೂ ಸಾಧ್ಯವಾಗಿಲ್ಲ. ಕತಾರ್ನ ದೋಹಾ, ಭಾರತಕ್ಕೆ ತಾಲಿಬಾನ್ ಅನ್ನು ಸಂಪರ್ಕಿಸುವ ಕೇಂದ್ರವಾಗಿದೆ. ಆಗಸ್ಟ್ 31ರಂದು ಅಲ್ಲಿ ತಾಲಿಬಾನ್ ಪ್ರತಿನಿಧಿಯ ಜತೆ ಸಭೆ ನಡೆದಿತ್ತು. ಆದರೆ ಅದರ ವಿವರಗಳನ್ನು ವಿದೇಶಾಂಗ ಸಚಿವಾಲಯ ಹಂಚಿಕೊಂಡಿಲ್ಲ.
ಕಳೆದ 20 ವರ್ಷಗಳಿಂದ ಅಫ್ಘಾನಿಸ್ತಾನಕ್ಕೆ ಆರ್ಥಿಕ ಹಾಗೂ ಮೂಲಸೌಕರ್ಯ ಯೋಜನೆಗಳಲ್ಲಿ ಸಾಕಷ್ಟು ನೆರವು ನೀಡಿರುವ ಭಾರತ, ಇದೇ ಮೊದಲ ಬಾರಿಗೆ ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವು ಒದಗಿಸುವುದರ ಕುರಿತು ನಡೆದ ವಿಶ್ವಸಂಸ್ಥೆಯ ಉನ್ನತ ಮಟ್ಟದ ಸಭೆಯಲ್ಲಿ ಆರ್ಥಿಕ ಸಹಾಯದ ಘೋಷಣೆಯಿಂದ ದೂರ ಉಳಿದಿದೆ. ಈಗಿನ ಪರಿಸ್ಥಿತಿ ಮುಂದುವರಿದರೆ ರಷ್ಯಾ ಮತ್ತು ಇರಾನ್ ಮುಂತಾದ ಪ್ರಾದೇಶಿಕ ಶಕ್ತಿಗಳ ಜತೆಗಿನ ಭಾರತದ ಮೈತ್ರಿ ಬಹಳ ಮುಖ್ಯವಾಗಲಿದೆ.