Please enable javascript.ಅತಿ ವೃಷ್ಟಿ, ಪ್ರಧಾನಿ ಮೋದಿಗೆ ಒತ್ತಡ: 'ಘಟ್ ಮಂದನಿ' ಭವಿಷ್ಯ - ghat mandani : predicted heavy rains, stress like situations for prime minister narendra modi - Vijay Karnataka

ಅತಿ ವೃಷ್ಟಿ, ಪ್ರಧಾನಿ ಮೋದಿಗೆ ಒತ್ತಡ: 'ಘಟ್ ಮಂದನಿ' ಭವಿಷ್ಯ

ಏಜೆನ್ಸೀಸ್ 11 May 2016, 3:46 pm
Subscribe

ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಭೆಂದ್ವಾಲ್ ಗ್ರಾಮದಲ್ಲಿ ನಡೆದ 'ಘಟ್ ಮಂದನಿ'ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಡದ ಸನ್ನಿವೇಶಕ್ಕೆ ಮುಖಾಮುಖಿಯಾಗಲಿದ್ದಾರೆ. ಆದರೆ ಸರಕಾರಕ್ಕೆ ಬೆದರಿಕೆ ಇಲ್ಲ, ಚುನಾವಣೆ ನಡೆಯುವ ಸಾಧ್ಯತೆ ಇಲ್ಲ ಎಂಬ ಭವಿಷ್ಯವಾಣಿ ವ್ಯಕ್ತವಾಗಿದೆ.

ghat mandani predicted heavy rains stress like situations for prime minister narendra modi
ಅತಿ ವೃಷ್ಟಿ, ಪ್ರಧಾನಿ ಮೋದಿಗೆ ಒತ್ತಡ: 'ಘಟ್ ಮಂದನಿ' ಭವಿಷ್ಯ
ಬುಲ್ದಾನ: 'ಘಟ್ ಮಂದನಿ' ಎಂಬುದು ಕಾಲ ಜ್ಞಾನ ತಿಳಿಯುವ ವಿಶಿಷ್ಟವಾದ ಸಾಂಪ್ರದಾಯಿಕ ಪ್ರಕ್ರಿಯೆ. ಇದಕ್ಕೆ 350 ವರ್ಷಗಳ ಇತಿಹಾಸವಿದೆ. ಈ ಬಾರಿ ಮಹಾರಾಷ್ಟ್ರದ ಬುಲ್ದಾನ ಜಿಲ್ಲೆಯ ಭೆಂದ್ವಾಲ್ ಗ್ರಾಮದಲ್ಲಿ ನಡೆದ 'ಘಟ್ ಮಂದನಿ'ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಒತ್ತಡದ ಸನ್ನಿವೇಶಕ್ಕೆ ಮುಖಾಮುಖಿಯಾಗಲಿದ್ದಾರೆ. ಆದರೆ ಸರಕಾರಕ್ಕೆ ಬೆದರಿಕೆ ಇಲ್ಲ, ಚುನಾವಣೆ ನಡೆಯುವ ಸಾಧ್ಯತೆ ಇಲ್ಲ ಎಂಬ ಭವಿಷ್ಯವಾಣಿ ವ್ಯಕ್ತವಾಗಿದೆ.
350 ವರ್ಷಗಳ ಹಿಂದೆ 'ಘಟ್ ಮಂದನಿ' ಆರಂಭಿಸಿರುವ ಚಂದ್ರಬನ್ ಮಹಾರಾಜ್ ಅವರ ಉತ್ತರಾಧಿಕಾರಿಗಳಾದ ಶರಂಗ್‌ಧರ್ ಮತ್ತು ಪುಂಜಾಜಿ ಮಹಾರಾಜ್‌ 'ಘಟ್ ಮಂದನಿ' ನಡೆಸಿಕೊಟ್ಟರು.
ದೇಶ ಹಲವೆಡೆ ಅತಿವೃಷ್ಟಿ , ಕೆಲವು ರಾಜ್ಯಗಳಲ್ಲಿ ಅನಾವೃಷ್ಟಿ ಉಂಟಾಗಲಿದೆ. ಅದೇ ರೀತಿ ಆರ್ಥಿಕ ಬಿಕ್ಕಟ್ಟು, ನಾನಾ ಸಾಂಕ್ರಾಮಿಕ ಕಾಯಿಲೆಗಳ ಬಾಧೆ, ರೋಗ ಉಲ್ಬಣ ಸಮಸ್ಯೆಗಳು ಹೆಚ್ಚಲಿವೆ ಎಂಬುದು ಕೂಡ ತಿಳಿದುಬಂದಿದೆ.

ಅಕ್ಷಯ ತೃತೀಯ ದಿನ ಘಟ್ ಮಂದನಿ

18 ವಿಧಗಳ ಧಾನ್ಯ, ಆಹಾರ ವಸ್ತುಗಳನ್ನು ಮಣ್ಣಿನ ಮಡಕೆಯಲ್ಲಿ ಅಕ್ಷಯ ತೃತೀಯದ ಹಿಂದಿನ ದಿನ ರಾತ್ರಿ ಜಮೀನಿನಲ್ಲಿ ಹೂತಿಡಲಾಗಿತ್ತು. ಮರುದಿನ ಮುಂಜಾನೆ 5 ಗಂಟೆಗೆ ಶರಂಗ್‌ಧರ್ ಮತ್ತು ಪುಂಜಾಜಿ ಮಹಾರಾಜ್‌ ಸಾವಿರಾರು ಗ್ರಾಮಸ್ಥರು ಜತೆ ಆ ಸ್ಥಳಕ್ಕೆ ಹೋಗಿ ಆ ಮಡಕೆ ಮತ್ತು ಅದರಲ್ಲಿರುವ ಧಾನ್ಯ, ಇತರ ವಸ್ತುಗಳು ಹೇಗಾಗಿವೆ ಎಂದು ಪರಿಶೀಲಿಸಿದರು.

ಬಳಿಕ ಶರಂಗ್‌ಧರ್ ಮಹಾರಾಜ್ ಭವಿಷ್ಯ ನುಡಿದರು. ಜೂನ್‌ನಲ್ಲಿ ಕಮ್ಮಿ ಅಥವಾ ಮಧ್ಯಮ ಮಳೆಯಾಗಲಿದೆ. ಆದರೆ ದೇಶದ ಹಲವೆಡೆ ಅತಿ ಮಳೆಯಾದರೆ, ಕೆಲವು ರಾಜ್ಯಗಳಲ್ಲಿ ಕಡಿಮೆ ಮಳೆಯಾಗಲಿದೆ. ದೇಶದ ರಕ್ಷಣಾ ವ್ಯವಸ್ಥೆಗೆ ಈ ವರ್ಷವಿಡೀ ಒತ್ತಡ ಇರಲಿದೆ. ನೆರೆ ದೇಶಗಳಿಂದ ದಾಳಿ ಬೆದರಿಕೆ ಮುಂದುವರಿಯಲಿದೆ. ಜನರು ಪ್ರಧಾನಿ ಮೋದಿ ಅವರ ವರ್ಚಸ್ಸು ಕುಗ್ಗಿಸುವಲ್ಲಿ ನಿರತರಾಗಿರುತ್ತಾರೆ. ಮೋದಿ ಒತ್ತಡದಲ್ಲಿ ಸಿಲುಕುತ್ತಾರೆ.ರೈತರಿಗೆ ಜೋಳ ಮತ್ತು ಹತ್ತಿ ಫಸಲು ಚೆನ್ನಾಗಿರುತ್ತದೆ. ಎಳ್ಳು ಬೆಳೆ ಸಾಧಾರಣವಾಗಿರಲಿದೆ. ಬೇಳೆ ಕಾಳುಗಳ ಇಳುವರಿ ಉತ್ತಮವಾಗಿರಲಿದೆ ಎಂದು ಹೇಳಿದರು.

ಶರಂಗ್‌ಧರ್ ಮಹಾರಾಜ್ ಅವರು ಪ್ರಕೃತಿಯ ಚಲನವಲನ ಆಧರಿಸಿ ಭವಿಷ್ಯ ನುಡಿಯುತ್ತಾರೆ. ಅವರ ಈ ಕೌಶಲವನ್ನು ಬಡ ರೈತರು ಮೆಚ್ಚಿ ಗ್ರಾಮದಲ್ಲಿ ಮಹಾರಾಜ್ ಎಂದೇ ಸಂಬೋಧಿಸುತ್ತಾರೆ. ಮಳೆಗೆ ಸಂಬಂಧಿಸಿದಂತೆ ಅವರ ವಾಣಿಯನ್ನು ನೂರಾರು ರೈತರು ಅನುಸರಿಸುತ್ತಾರೆ.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ