ಆ್ಯಪ್ನಗರ

ಮಲಗಿದ್ದಾಳೆಂದು ಬೀಗ ಹಾಕಿ ಮದುವೆಗೆ ಹೋದ ಅಪ್ಪ-ಅಮ್ಮ; ಅಗ್ನಿ ದುರಂತದಲ್ಲಿ ಬಾಲಕಿ ಸಾವು

ಮೃತ ಬಾಲಕಿ ಶ್ರಾವಣಿ ಚಾವನ್ ತಂದೆ- ತಾಯಿ ಮದುವೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಆ ಸಂದರ್ಭದಲ್ಲಿ ಮಗಳು ಮಲಗಿದ್ದಳು. ಆಕೆ ನಿದ್ದೆ ಮಾಡಿ ಎದ್ದು ಓದಿ ಕೊಳ್ಳಲಿ ಎಂದುಕೊಂಡ ಅವರು , ಬೀಗ ಹಾಕಿ ಅಲ್ಲಿಂದ ತೆರಳಿದರು.

Times Now 14 May 2019, 2:04 pm
ಮುಂಬಯಿ: ಮಲಗಿದ್ದ ಮಗಳನ್ನು ಎಬ್ಬಿಸುವುದು ಬೇಡವೆಂದು ತಂದೆ-ತಾಯಿ ಮನೆ ಬಾಗಿಲು ಹಾಕಿ ಹೋಗಿದ್ದೇ ಬಹುದೊಡ್ಡ ಅನಾಹುತಕ್ಕೆ ಕಾರಣವಾಯಿತು. ಮನೆಯೊಳಗೆ ಬೆಂಕಿ ಹತ್ತಿ ಉರಿದು, 16 ವರ್ಷದ ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಮುಂಬಯಿ ಉಪನಗರ ಇಲಾಖೆಯ ದಾದರ್‌ನಲ್ಲಿ ಭಾನುವಾರ ಈ ಹೃದಯ ವಿದ್ರಾವಕ ಘಟನೆ ನಡೆದಿದೆ.
Vijaya Karnataka Web 1557810390-fire_in_room_girl_died


ಮೃತ ಬಾಲಕಿ ಶ್ರಾವಣಿ ಚಾವನ್ ತಂದೆ- ತಾಯಿ ಮದುವೆಯಲ್ಲಿ ಪಾಲ್ಗೊಳ್ಳಲು ಹೋಗಿದ್ದರು. ಆ ಸಂದರ್ಭದಲ್ಲಿ ಮಗಳು ಮಲಗಿದ್ದಳು. ಆಕೆ ನಿದ್ದೆ ಮಾಡಿ ಎದ್ದು ಓದಿ ಕೊಳ್ಳಲಿ ಎಂದುಕೊಂಡ ಅವರು , ಬೀಗ ಹಾಕಿ ಅಲ್ಲಿಂದ ತೆರಳಿದರು.

ಮಧ್ಯಾಹ್ನ 1.ಗಂಟೆ 45 ನಿಮಿಷಕ್ಕೆ ಅವರ ಅಪಾರ್ಟ್‌ಮೆಂಟ್‌ನ ಮೂರನೇ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿತು. ಬೆಂಕಿ ಅವರ ಮನೆಗೂ ಹಬ್ಬಿ ಶ್ರಾವಣಿ ಕೋಣೆ ಕೂಡ ಬೆಂಕಿಗಾಹುತಿಯಾಯಿತು. ಆಕೆಯ ಕೋಣೆಯ ಬಾಗಿಲು ಒಳಗಿಂದ ಮತ್ತು ಹೊರಗಿಂದ ಬಂದ್ ಆಗಿತ್ತು.

ಬೆಂಕಿ ಮತ್ತು ಹೊಗೆಯ ಮಧ್ಯೆ ಸಿಲುಕಿದ ಬಾಲಕಿಗೆ ಹೊರಕ್ಕೆ ಬರಲಾಗಲಿಲ್ಲ, ಜೊತೆಗೆ ಉಸಿರಾಡಲು ಆಗಲಿಲ್ಲ. ಪ್ರಜ್ಞೆ ಕಳೆದುಕೊಂಡ ಆಕೆಯನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ.

ಅಪಾರ್ಟ್‌ಮೆಂಟ್ ಬೆಂಕಿ ನಂದಿಸಲು ಅಗ್ನಿಶಾಮಕ ತಂಡಕ್ಕೆ ಮೂರು ಗಂಟೆ ತಗುಲಿದ್ದ, ಅನೇಕ ಮನೆಗಳ ಬೆಲೆಬಾಳುವ ವಸ್ತುಗಳು ಸಹ ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ