ಆ್ಯಪ್ನಗರ

ಬೈಕ್‌ನಲ್ಲಿ ಹೋಗುತ್ತಿದ್ದ ಬಾಲಕಿಯ ಕತ್ತು ಸೀಳಿದ ಗಾಳಿಪಟದ ಮಾಂಜಾ ದಾರ

ಖುಷಿಯಿಂದ ತಂದೆಯ ಬೈಕ್ ಏರಿದ್ದ ಬಾಲಕಿ ಯಾರೂ ಊಹಿಸಲಾಗದ ಸಾವನ್ನು ಕಂಡಳು.

TIMESOFINDIA.COM 25 Aug 2019, 7:49 pm
ಹೊಸದಿಲ್ಲಿ: ಗಾಳಿಪಟಕ್ಕೆ ಬಳಸುವ ಮಾಂಜಾ ದಾರದಿಂದಾಗಿ ತಂದೆಯೊಂದಿಗೆ ಸ್ಕೂಟರ್‌ನಲ್ಲಿ ತೆರಳುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಛಜೂರಿ ಖಾಸ್ ಪ್ರದೇಶದಲ್ಲಿ ಶನಿವಾರ ಈ ದಾರುಣ ಘಟನೆ ನಡೆದಿದೆ.
Vijaya Karnataka Web Kite


ನಾಲ್ಕುವರೆ ವರ್ಷದ ಇಷಿಕಾ ಮೃತ ದುರ್ದೈವಿಯಾಗಿದ್ದಾಳೆ.

ಇಷಿಕಾ, ತನ್ನ ತಂದೆ ಮತ್ತು ಸಹೋದರಿಯೊಂದಿಗೆ ಜಮುನಾ ಬಜಾರ್ ರಸ್ತೆಯಲ್ಲಿರುವ ಹನುಮಾನ್ ದೇವಸ್ಥಾನಕ್ಕೆ ಹೋಗುತ್ತಿದ್ದಾಗ ಈ ಘಟನೆ ನಡೆದಿದೆ. ಎಲ್ಲಿಂದಲೋ ಹಾರಿ ಬಂದ ಗಾಳಿ ಪಟದ ದಾರ ಬಾಲಕಿಯ ಕುತ್ತಿಗೆಯನ್ನು ಸೀಳಿದ್ದು, ಆಕೆಯನ್ನು ತಕ್ಷಣ ಜಗ್ ಪ್ರವೇಶ್ ಚಂದ್ರ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಆಗ ಆಕೆಯ ಪ್ರಾಣ ಪಕ್ಷಿ ಅದಾಗಲೇ ಹಾರಿ ಹೋಗಿತ್ತು.

ಬಾಲಕಿ ಬೈಕ್‌ ಮೇಲೆ ತಂದೆಯ ಮುಂದುಗಡೆ ಕುಳಿತಿದ್ದಳು ಎಂದು ತಿಳಿದು ಬಂದಿದೆ.

ಐಪಿಸಿಯ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾಗುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ