ಆ್ಯಪ್ನಗರ

ಮೂಢನಂಬಿಕೆಗೆ 3 ವರ್ಷದ ಬಾಲಕಿ ಬಲಿ

ಹರಿಯಾಣದ ಯಮುನಾನಗರದಲ್ಲಿ ಮೂಢನಂಬಿಕೆಗೆ 3 ವರ್ಷದ ಪುಟ್ಟ ಬಾಲಕಿ ಬಲಿಯಾಗಿದ್ದಾಳೆ.

TIMESOFINDIA.COM 8 May 2018, 12:36 pm
ಚಂಡೀಗಡ/ಯಮುನಾನಗರ: ಹರಿಯಾಣದ ಯಮುನಾನಗರದಲ್ಲಿ ಮೂಢನಂಬಿಕೆಗೆ 3 ವರ್ಷದ ಪುಟ್ಟ ಬಾಲಕಿ ಬಲಿಯಾಗಿದ್ದಾಳೆ.
Vijaya Karnataka Web girl child


ಬಾಲಕಿಯ ಹತ್ತಿರ ಸಂಬಂಧಿಯಾಗಿರುವ ನರಿಂದರ್‌ ಕೌರ್‌ ಅಲಿಯಾಸ್‌ ಪೂಜಾ ಚಾಕುವಿನಿಂದ ಮಗುವಿನ ಕತ್ತು ಸೀಳಿದ್ದಾಳೆ.

ಮಾಟ-ಮಂತ್ರ ಇತ್ಯಾದಿ ಮೂಢನಂಬಿಕೆಗಳ ಕುರಿತು ಕಾರ್ಯಗಳನ್ನು ಮಾಡುತ್ತಿದ್ದ ಪೂಜಾಳಿಗೆ, ಮಗುವನ್ನು ಬಲಿಕೊಡುವಂತೆ ಅಶರೀರವಾಣಿ ಕೇಳಿತ್ತು. ದಿನ ನಿತ್ಯ ಕನಸಿನಲ್ಲಿ ಮಗುವನ್ನು ಬಲಿ ಕೊಡದೇ ಹೋದಲ್ಲಿ ಆಕೆಯ ಪತಿಯನ್ನು ಬಲಿ ತೆಗೆದುಕೊಳ್ಳುವುದಾಗಿ ಹೇಳುತ್ತಿದ್ದವು. ಇದಕ್ಕಾಗಿ ಮಗುವನ್ನು ಸಾಯಿಸಿರುವುದಾಗಿ ವಿಚಾರಣೆ ವೇಳೆ ಪೂಜಾ ಒಪ್ಪಿಕೊಂಡಿದ್ದಾಳೆ.

ಭಾನುವಾರ ಸಂಜೆ ಪೂಜಾ ಕುಟುಂಬ ಜಗದ್ರಿ ಪ್ರದೇಶದಲ ಮಂದ್‌ನಲ್ಲಿರುವ ಬಾಲಕಿಯ ಮನೆಗೆ ತೆರಳಿದ್ದಾರೆ. ಬಾಲಕಿಯ ತಂದೆ ಹಾಗೂ ಪೂಜಾಳ ಪತಿ ಮನೆಯ ಹೊರಗೆ ಮಾತನಾಡುತ್ತಿದ್ದರು. ಬಾಲಕಿ ತಾಯಿ ಅಡುಗೆ ಕೋಣೆಯಲ್ಲಿದ್ದಳು. ಮಗು ಕೋಣೆಯಲ್ಲಿ ಆಟವಾಡುತ್ತಿರುವ ವೇಳೆ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿರುವುದಾಗಿ ಪೂಜಾ ಪೊಲೀಸರಿಗೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ