ಆ್ಯಪ್ನಗರ

ಸಮಾಜ ಇಷ್ಟು ಕೆಟ್ಟು ಹೋಗಿದೆಯೇ? ಈ ಸುದ್ದಿ ಓದಿದರೆ ನಿಮಗೆ ಹಾಗನ್ನಿಸದೆ ಇರಲಾರದು

ಕಾವಲುಗಾರರು, ಎಲಿವೇಟರ್ ಆಪರೇಟರ್, ಪ್ಲಂಬರ್‌ಗಳು ಸೇರಿದಂತೆ ಬರೋಬ್ಬರಿ 22 ಜನರು ಶ್ರವಣ ದೋಷವಿರುವ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬೆಚ್ಚಿಬೀಳಿಸುವ ಹೇಯ ಘಟನೆ ನಗರದ ಹೃದಯ ಭಾಗದಲ್ಲಿರುವ ಪುರುಷವಾಕಂನಲ್ಲಿ ನಡೆದಿದೆ.

TIMESOFINDIA.COM 17 Jul 2018, 12:45 pm
ಚೆನ್ನೈ: ಕಾವಲುಗಾರರು, ಎಲಿವೇಟರ್ ಆಪರೇಟರ್, ಪ್ಲಂಬರ್‌ಗಳು ಸೇರಿದಂತೆ ಬರೋಬ್ಬರಿ 22 ಜನರು ಶ್ರವಣ ದೋಷವಿರುವ 12 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ ಬೆಚ್ಚಿಬೀಳಿಸುವ ಹೇಯ ಘಟನೆ ನಗರದ ಹೃದಯ ಭಾಗದಲ್ಲಿರುವ ಪುರುಷವಾಕಂನಲ್ಲಿ ನಡೆದಿದೆ.
Vijaya Karnataka Web Accused


18 ಜನ ಶಂಕಿತ ಆರೋಪಿಗಳನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸಿದ್ದಾರೆ.

ಇಂಜೆಕ್ಷನ್, ಮಾದಕ ದ್ರವ್ಯ ಬೆರೆಸಿದ ಪಾನೀಯವನ್ನು ಕುಡಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗುತ್ತಿತ್ತು. ಅಷ್ಟೇ ಅಲ್ಲ ತಮ್ಮ ಕೀಚಕತನದ ವೀಡಿಯೋ ಚಿತ್ರೀಕರಿಸಿದ ಅವರು ಅದನ್ನು ಬಹಿರಂಗ ಪಡಿಸುವುದಾಗಿ ಬೆದರಿಕೆ ಒಡ್ಡಿ 7 ತಿಂಗಳಷ್ಟು ದೀರ್ಘ ಕಾಲದಿಂದ ಬಾಲಕಿ ಬಾಯಿ ಮುಚ್ಚಿಸಿಟ್ಟಿದ್ದರು.ಕಳೆದ ಶನಿವಾರ ದೆಹಲಿಯಲ್ಲಿ ಓದುತ್ತಿದ್ದ ಹಿರಿಯ ಸಹೋದರಿ ಮನೆಗೆ ಬಂದಾಗ ಬಾಲಕಿ ತಾನು ಅನುಭವಿಸುತ್ತಿರುವ ಕರಾಳತೆಯನ್ನು ಬಿಚ್ಚಿಟ್ಟಿದ್ದಾಳೆ. ಮಗಳ ಜತೆ ನಡೆಯುತ್ತಿದ್ದ ಘೋರ ಅನ್ಯಾಯವನ್ನು ಕೇಳಿ ಬೆಚ್ಚಿ ಬಿದ್ದ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಲಿವೇಟರ್ ಆಪರೇಟರ್ ಆಗಿರುವ ರವಿಕುಮಾರ್ (66) ಮೊದಲ ಬಾರಿಗೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಮೂರು ದಿನಗಳ ಬಳಿಕ ಮತ್ತಿಬ್ಬರನ್ನು ಕರೆದುಕೊಂಡು ಬಂದು ಸಾಮೂಹಿಕ ಅತ್ಯಾಚಾರ ಎಸಗಿದ್ದಾನೆ. ಹೀಗೆ ಸಂಖ್ಯೆ ಹೆಚ್ಚುತ್ತಲೇ ಹೋಗಿದೆ. 300 ಫ್ಲಾಟ್‌ಗಳಿರುವ ವಸತಿ ಸಮುಚ್ಚಯದಲ್ಲಿ ಹೆಚ್ಚಿನ ಫ್ಲಾಟ್‌ಗಳು ಖಾಲಿ ಇದ್ದುದು ಆರೋಪಿಗಳಿಗೆ ತಮ್ಮ ಕೃತ್ಯವನ್ನೆಸಗಲು ನೆರವಾಗಿದೆ.

ಬಾಲಕಿ ಶಾಲೆಯಿಂದ ಬರುತ್ತಿದ್ದಂತೆ ಆಕೆಯನ್ನು ಎಳೆದೊಯ್ದು ಅತ್ಯಾಚಾರವೆಸಗಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಬಾಲಕಿ ತಂದೆ ದಿನವೀಡಿ ಕೆಲಸದ ನಿಮಿತ್ತ ಹೊರಗೆ ಇರುತ್ತಾರೆ. ಮಗಳು ಪ್ರತಿದಿನ ಶಾಲೆಯಿಂದ ಲೇಟಾಗಿ ಬರುತ್ತಿದ್ದರು ತಾಯಿ ಪ್ರಶ್ನಿಸಿರಲಿಲ್ಲ, ಸ್ನೇಹಿತರೊಂದಿಗೆ ಆಟವಾಡಿಕೊಂಡು ಬರುತ್ತಾಳೆ ಎಂದುಕೊಂಡು ಸುಮ್ಮನಾಗಿದ್ದಳು, ಎಂದು ತಿಳಿದುಬಂದಿದೆ.

ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹಲವರಿಂದ ಆಕೆ ಮೇಲೆ ಅತ್ಯಾಚಾರವಾಗಿರುವುದು ಖಚಿತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ