ಆ್ಯಪ್ನಗರ

ಆಶ್ರಯ ಮನೆಯಲ್ಲಿದ್ದ ಹೆಣ್ಣುಮಕ್ಕಳ ರಕ್ಷಣೆ: ನಿರ್ದೇಶಕರ ಬಂಧನ

ಬಿಹಾರದ ಮುಜಾಫರಬಾದ್‌ನ ಆಶ್ರಯ ಮನೆಯಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯದ ಪ್ರಕರಣ ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲೂ ಅದೇ ಮಾದರಿಯ ಪ್ರಕರಣ ವರದಿಯಾಗಿದ್ದು, 24 ಹುಡುಗಿಯರನ್ನು ರಕ್ಷಿಸಲಾಗಿದೆ.

Vijaya Karnataka Web 6 Aug 2018, 9:59 pm
ವಾರಾಣಸಿ: ಬಿಹಾರದ ಮುಜಾಫರಬಾದ್‌ನ ಆಶ್ರಯ ಮನೆಯಲ್ಲಿ ಹೆಣ್ಣುಮಕ್ಕಳ ಮೇಲೆ ನಡೆಯುತ್ತಿದ್ದ ಲೈಂಗಿಕ ದೌರ್ಜನ್ಯದ ಪ್ರಕರಣ ಮಾಸುವ ಮುನ್ನವೇ ಉತ್ತರ ಪ್ರದೇಶದಲ್ಲೂ ಅದೇ ಮಾದರಿಯ ಪ್ರಕರಣ ವರದಿಯಾಗಿದ್ದು, 24 ಹುಡುಗಿಯರನ್ನು ರಕ್ಷಿಸಲಾಗಿದೆ.
Vijaya Karnataka Web Women harassment


ಉತ್ತರ ಪ್ರದೇಶದ ದಿಯೋರಿಯದಲ್ಲಿದ್ದ ಆಶ್ರಯ ಮನೆಯಲ್ಲಿದ್ದ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆಸಲಾಗುತ್ತಿತ್ತು. ಪ್ರಕರಣ ಸಂಬಂಧ ದಾಳಿ ನಡೆಸಿದ ಅಧಿಕಾರಿಗಳು ಆಶ್ರಯಗೃಹವನ್ನು ಬಂದ್ ಮಾಡಿದ್ದಾರೆ. ಆದರೆ ಸುಮಾರು 18 ಮಂದಿ ಹುಡುಗಿಯರು ಅಲ್ಲಿ ಕಾಣೆಯಾಗಿದ್ದಾರೆ. ಅವರಿಗಾಗಿ ಹುಡುಕಾಟ ನಡೆಸಲಾಗಿದೆ. ಅಲ್ಲದೆ ಆಶ್ರಯ ಮನೆ ನಡೆಸುತ್ತಿದ್ದ ಅದರ ನಿರ್ದೇಶಕ ಗಿರಿಜಾ ತ್ರಿಪಾಠಿ ಮತ್ತು ಆಕೆಯ ಗಂಡ ಮೋಹನ್ ತ್ರಿಪಾಠಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಶ್ರಯ ಮನೆಯಲ್ಲಿದ್ದ 10ರ ಬಾಲಕಿಯೋರ್ವಳು ತಪ್ಪಿಸಿಕೊಂಡು ಬಂದು ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ ಕೃತ್ಯ ಬೆಳಕಿಗೆ ಬಂದಿದೆ.
ಕೂಡಲೇ ಪೊಲೀಸರು ಅಧಿಕಾರಿಗಳ ಸಹಿತ ದಾಳಿ ನಡೆಸಿ, ಆಶ್ರಯ ಗೃಹದಲ್ಲಿದ್ದ ಹೆಣ್ಣುಮಕ್ಕಳ ರಕ್ಷಣೆಗೆ ಕ್ರಮ ಕೈಗೊಂಡಿದ್ದಾರೆ.

ಮಾ ವಿಂಧ್ಯಾವಾಸಿನಿ ಮಹಿಳಾ ಪ್ರಾಕಿಶನ್ ಈವಂ ಸಮಾಜ್ ಸೇವಾ ಸಂಸ್ಥಾನ್ ಹೆಸರಿನ ಆಶ್ರಯಗೃಹದಲ್ಲಿ 42 ಹುಡುಗಿಯರಿದ್ದರು. ಅವರ ಪೈಕಿ 24 ಮಂದಿಯನ್ನು ರಕ್ಷಿಸಲಾಗಿದ್ದರೆ, 18 ಮಂದಿ ತಪ್ಪಿಸಿಕೊಂಡಿದ್ದಾರೆ.

ಆಶ್ರಯ ಮನೆಯನ್ನು ವಶಕ್ಕೆ ಪಡೆದಿರುವ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಜತೆಗೆ ಪ್ರಕರಣಕ್ಕೆ ಸಂಬಂಧಿಸಿ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ದಿಯೋರಿಯಾ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಜಿತ್ ಕುಮಾರ್‌ರನ್ನು ಸರಕಾರ ವಜಾಗೊಳಿಸಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ