ಆ್ಯಪ್ನಗರ

ಒತ್ತಡ ನಿವಾರಣೆಗೆ ಚಾಕಲೇಟ್‌ ಅಥವಾ ಗುಳಿಗೆ ತಿನ್ನುವ ಬದಲು, ಗೀತೆ ಓದಿದರೆ ಸಾಕು: ಸುಷ್ಮಾ

ದೇಶವಾಸಿಗಳ ಪ್ರೀತಿಯ ನಾಯಕಿಯಾಗಿದ್ದ ಸುಷ್ಮಾ ಅನಾರೋಗ್ಯದ ಹಿನ್ನೆಲೆಯಲ್ಲಿ ರಾಜಕೀಯದಿಂದ ದೂರವಿದ್ದರು.

Vijaya Karnataka 7 Aug 2019, 7:35 am
ಭಗವದ್ಗೀತೆಯನ್ನು ರಾಷ್ಟ್ರದ ಪವಿತ್ರ ಗ್ರಂಥವೆಂದು ಘೋಷಣೆ ಮಾಡಬೇಕು ಎಂದು ಸುಷ್ಮಾ ಹೇಳುತ್ತಿದ್ದರು. ''ಭಗವದ್ಗೀತೆಯು ಎಲ್ಲ ಸಮಸ್ಯೆಗೂ ಉತ್ತರ ನೀಡುವಂತಿದೆ. ವಿದೇಶಾಂಗ ವ್ಯವಹಾರ ಸಚಿವೆಯಾಗಿ ನಾನು ಎದುರಿಸುವ ಸವಾಲು ಮತ್ತು ಸಮಸ್ಯೆಗಳಿಗೆ ಗೀತೆಯಿಂದ ಪರಿಹಾರ ಕಂಡುಕೊಂಡಿದ್ದೇನೆ. ಒತ್ತಡ ನಿವಾರಣೆಗೆ ಚಾಕಲೇಟ್‌ ಅಥವಾ ಗುಳಿಗೆ ತಿನ್ನುವ ಬದಲು, ಗೀತೆ ಓದಿದರೆ ಸಾಕು,'' ಎಂದು ಅವರು ಹೇಳಿಕೊಂಡಿದ್ದರು.
Vijaya Karnataka Web Sushma


ಎಲ್ಲರಿಗೂ ನೆರವು

ದಕ್ಷಿಣ ಆಫ್ರಿಕಾದಲ್ಲಿ ಹಲ್ಲೆಗೊಳಗಾಗಿದ್ದ ಉಡುಪಿ ನಿವಾಸಿ ಆನಂದ್‌ ಕೃಷ್ಣ ಸಿಂಗ್‌ ಅವರಿಗೆ ಸುಷ್ಮಾ ನೆರವು ನೀಡಿದ್ದರು. ಆನಂದ 2015 ಅಕ್ಟೋಬರ್‌ 15ರಂದು ಆಫ್ರಿಕಾಕ್ಕೆ ಕೆಲಸದ ನಿಮಿತ್ತ ತೆರಳಿದ್ದರು. ಅಲ್ಲಿ ಸ್ಟೋರ್‌ ಕೀಪರ್‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದು , ಸಂಬಳ ಕೂಡಾ ಸರಿಯಾಗಿ ನೀಡುತ್ತಿರಲಿಲ್ಲ . ಇವರ ಮೇಲೆ ಕಳ್ಳತನ ಆರೋಪ ಹೊರಿಸಿ ಹಲ್ಲೆ ಮಾಡಲಾಗಿತ್ತು. ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ಆನಂದ್‌ ಸಹೋದರಿ ಟ್ವೀಟ್‌ ಮಾಡಿ ಕಷ್ಟ ತೊಡಿಕೊಂಡಿದ್ದರು. ತಕ್ಷಣ ಸ್ಪಂದಿಸಿದ್ದ ಸುಷ್ಮಾ ಆಫ್ರಿಕಾದ ರಾಯಭಾರಿ ಕಚೇರಿ ಸಂಪರ್ಕಿಸಿ ಆನಂದ್‌ ಅವರನ್ನು ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ