ಆ್ಯಪ್ನಗರ

ವೈನ್ ಕುಡಿಯೋದು, ಗಾಲ್ಫ್ ಆಡೋದಷ್ಟೇ ರಾಜ್ಯಪಾಲರ ಕೆಲಸ: ಸತ್ಯಪಾಲ್!

ಭಾರತದ ರಾಜಕಾರಣದಲ್ಲಿ ರಾಜ್ಯಪಾಲರ ಮಹತ್ವ ಮತ್ತು ರಾಜ್ಯಪಾಲ ಹುದ್ದೆಯ ಪ್ರಸ್ತುತತೆ ಕುರಿತು ಅನೇಕ ಬಾರಿ ಚರ್ಚೆಗಳಾಗಿವೆ. ರಾಜ್ಯಪಾಲರು ಕೇಂದ್ರ ಸರ್ಕಾರ ಕೈಗೊಂಬೆಗಳಾಗಿದ್ದು, ರಾಜ್ಯ ಸರ್ಕಾರದ ಮೇಲೆ ನಿಗಾ ಇಡುವುದಷ್ಟೇ ಅವರ ಕೆಲಸ ಎಂದು ಅನೇಕ ಬಾರಿ ಟೀಕೆ ಮಾಡಲಾಗಿದೆ. ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಹಾಗೂ ಸದ್ಯ ಗೋವಾದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಹೇಳಿಕೆಯೊಂದು ಮತ್ತೆ ಈ ಚರ್ಚೆಗೆ ಇಂಬು ನೀಡಿದೆ.

Vijaya Karnataka Web 16 Mar 2020, 10:43 am
ಬಾಗ್ಪಟ್: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯಪಾಲರಾಗಿ ನೇಮಕಗೊಳ್ಳುವವರಿಗೆ ಏನು ಕೆಲಸವಿರುವುದಿಲ್ಲ. ಸಾಮಾನ್ಯವಾಗಿ ರಾಜ್ಯಪಾಲರು ನಿತ್ಯವೂ ವೈನ್ ಕುಡಿಯುತ್ತಾ, ಗಾಲ್ಫ್ ಆಡುತ್ತಾ ಕಾಲ ಕಳೆಯುತ್ತಾರೆ ಎಂದು ಗೋವಾ ರಾಜ್ಯಪಾಲ ಸತ್ಯಪಾಲ್ ಮಲಿಕ್ ಹೇಳಿದ್ದಾರೆ.
Vijaya Karnataka Web Satya Pal Malik
ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ನೇಮಕಗೊಳ್ಳುವವರಿಗೆ ವೈನ್ ಕುಡಿಯುವುದು ಮತ್ತು ಗಾಲ್ಫ್ ಆಡುವುದನ್ನು ಬಿಟ್ಟರೆ ಬೇರೇನೂ ಕೆಲಸ ಇರುವುದಿಲ್ಲ ಎಂದು ಗೋವಾದ ರಾಜ್ಯಪಾಲ ಸತ್ಯಪಾಲ್ ಮಲ್ಲಿಕ್ ಹೇಳಿದ್ದಾರೆ.


ಸ್ವತಃ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿರುವ ಸತ್ಯಪಾಲ್ ಮಲಿಕ್, ಕಣಿವೆಯಂತ ಸೂಕ್ಷ್ಮ ಪ್ರದೇಶದ ರಾಜ್ಯಪಾಲರ ಜವಾಬ್ದಾರಿಗಳ ಕುರಿತು ಕ್ಷುಲ್ಲಕವಾಗಿ ಮಾತನಾಡಿರುವುದು ಆಶ್ಚರ್ಯ ತಂದಿದೆ.

ಭಾರತದ ರಾಜಕಾರಣದಲ್ಲಿ ರಾಜ್ಯಪಾಲರ ಹುದ್ದೆ ಅಷ್ಟೇನೂ ಮಹತ್ವದ್ದಲ್ಲ. ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯಪಾಲರಾಗಿ ನೇಮಕಗೊಳ್ಳುವವರು ಸಾಮಾನ್ಯವಾಗಿ ವೈನ್ ಕುಡಿಯುತ್ತಾ, ಗಾಲ್ಫ್ ಆಡುತ್ತಾ ದಿನ ದೂಡುತ್ತಾರೆ ಎಂದು ಮಲಿಕ್ ಹೇಳಿದ್ದಾರೆ.


ಉತ್ತರಪ್ರದೇಶದಲ್ಲಿ ಸಮಾರಂಭವೊಂದರಲ್ಲಿ ಮಾತನಾಡಿದ ಮಲಿಕ್, ರಾಜ್ಯಪಾಲರಿಗೇನು ಕೆಲಸವಿರುತ್ತದೆ? ಹೆಚ್ಚೆಂದರೆ ರಾಜ್ಯಕ್ಕೆ ಬರುವ ಗಣ್ಯ ಅತಿಥಿಗಳನ್ನು ಸ್ವಾಗತಿಸುವುದಷ್ಟೇ ಅವರ ಕೆಲಸ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ರಾಜ್ಯಪಾಲರ ಹುದ್ದೆಗೆ 'ಪವರ್‌' ಇಲ್ಲ, ಅತ್ಯಂತ ದುರ್ಬಲ, ಸುದ್ದಿಗೋಷ್ಠಿ ನಡೆಸಲು ಸಾಧ್ಯವಿಲ್ಲ: ಸತ್ಯಪಾಲ್‌ ಮಲಿಕ್‌

ಸತ್ಯಪಾಲ್ ಮಲ್ಲಿಕ್ ಅವರ ಹೇಳಿಕೆಯನ್ನು ಖಂಡಿಸಿರುವ ಪ್ರತಿಪಕ್ಷಗಳು, ಹಾಗಾದರೆ ಕಣಿವೆಯಂತ ಸೂಕ್ಷ್ಮ ರಾಜ್ಯದ ರಾಜ್ಯಪಾಲರಾಗಿದ್ದಾಗ ಅತ್ಯಪಾಲ್ ಮಲಿಕ್ ಇದನ್ನಷ್ಟೇ ಮಾಡಿದ್ದಾರೆ ಎಂದಾಯ್ತು ಎಂದು ಹರಿಹಾಯ್ದಿವೆ.

ಸತ್ಯಪಾಲ್ ಮಲಿಕ್ ಈ ಹಿಂದೆಯೂ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು. ಕಣಿವೆಯಲ್ಲಿ ನಿರ್ಬಂಧ ಹೇರಿದ್ದಾಗ ರಾಜ್ಯಕ್ಕೆ ಬರಲು ಬಿಡುತ್ತಿಲ್ಲ ಎಂದ ರಾಹುಲ್ ಗಾಂಧಿ ಅವರನ್ನು ತಾವೇ ಸ್ವತಃ ವಿಶೇಷ ವಿಮಾನದಲ್ಲಿ ಕೊಂಡೊಯ್ಯವುದಾಗಿ ಸತ್ಯಪಾಲ್ ಮಲಿಕ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ