ಆ್ಯಪ್ನಗರ

ಅತ್ಯಾಚಾರ ಆರೋಪಿ ಗೋಪಾಲ್‌ ಕಾಂಡಾ ಬೆಂಬಲ ಪಡೆಯುತ್ತಿರುವ ಬಿಜೆಪಿ ವಿರುದ್ಧ ಟೀಕೆಗಳ ಸುರಿಮಳೆ

ಹರಿಯಾಣದಲ್ಲಿ ಮತ್ತೆ ಕಮಲ ಸರಕಾರ ರಚನೆಗೆ ಬಿಜೆಪಿ ತಯಾರಿ ನಡೆಸಿದೆ. ಈ ಪೈಕಿ ಗೋಪಾಲ್‌ ಕಾಂಡಾ ಸಹ ಬಿಜೆಪಿಗೆ ಬೆಂಬಲ ನೀಡಿರುವುದು ವಿರೋಧ ವ್ಯಕ್ತವಾಗುತ್ತಿದೆ. ಸ್ವತ: ಪಕ್ಷದ ನಾಯಕಿಯೇ ಈ ಬಗ್ಗೆ ಬಿಜೆಪಿಗೆ ಕಿವಿ ಮಾತು ಹೇಳಿದ್ದಾರೆ.

Agencies 25 Oct 2019, 9:58 pm
ಹೊಸದಿಲ್ಲಿ: ಭಾರೀ ನಿರೀಕ್ಷೆ ಮೂಡಿಸಿದ್ದ ಹರಿಯಾಣ ಚುನಾವಣೆಯಲ್ಲಿ ಮತದಾರರು ಯಾವ ರಾಜ್ಯಕ್ಕೂ ಪೂರ್ಣ ಬಹುಮತ ನೀಡಲಿಲ್ಲ. ಈ ಹಿನ್ನೆಲೆ ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಈ ಪೈಕಿ ಗೋಪಾಲ್‌ ಕಾಂಡಾ ಸಹ ಒಬ್ಬರು. ಆದರೆ, ಹರಿಯಾಣ ಶಾಸಕ ಗೋಪಾಲ್‌ ಕಾಂಡಾ ಕಮಲಕ್ಕೆ ಬೆಂಬಲ ನೀಡುತ್ತಿರುವುದಕ್ಕೆ ತೀವ್ರ ವಿರೋಧ ಕೇಳಿಬರುತ್ತಿದೆ.
Vijaya Karnataka Web gopal kanda


ಬಿಜೆಪಿ-ಕಾಂಗ್ರೆಸ್ ಎರಡೂ ಬೇಡ ! ಹರಿಯಾಣ‘ಕಿಂಗ್ ಮೇಕರ್’ತಟಸ್ಥ

ಅಖಿಲ ಭಾರತ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಷ್ಮಿತಾ ದೇವ್ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್‌ ಶಾಗೆ ಪತ್ರ ಬರೆದಿದ್ದು, ಗೋಪಾಲ್‌ ಕಾಂಡಾ ಬಿಜೆಪಿಗೆ ಬೆಂಬಲ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಗೀತಿಕಾ ಶರ್ಮಾ ಅತ್ಯಾಚಾರ ಆರೋಪಿಗೆ ಬಿಜೆಪಿ ಬೆಂಬಲ ಕೊಡುತ್ತಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸಿದೆ ಹರಿಯಾಣ ರಾಜಕೀಯ ಲೆಕ್ಕಾಚಾರ-ಪಕ್ಷೇತರ ಶಾಸಕರ ಬೆಂಬಲ ಬಿಜೆಪಿಗೆ?

ಗೋಪಾಲ್‌ ಕಾಂಡಾ ಮೇಲೆ ಅತ್ಯಾಚಾರ ಆರೋಪ, ಆತ್ಮಹತ್ಯೆಗೆ ಪ್ರಚೋದನೆ, ಆತ್ಮಹತ್ಯೆ ಪ್ರಕರಣದಲ್ಲಿ ಕ್ರಿಮಿನಲ್ ಪಿತೂರಿಯಂತಹ ಪ್ರಕರಣಗಳಿವೆ. ಅವರಂತಹ ಅಪರಾಧಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಮಹಿಳೆಯರಿಗೆ ಭದ್ರತೆ ಒದಗಿಸುವ ಬಿಜೆಪಿಯ ನಿರ್ಣಯದ ಬಗ್ಗೆ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ ಎಂದು ಸುಷ್ಮಿತಾ ದೇವ್‌ ಅಮಿತ್‌ ಶಾಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

ಹರಿಯಾಣಾದಲ್ಲಿ ಬಿಜೆಪಿಗೆ ಮುಳುವಾದ ಅತಿವಿಶ್ವಾಸ; ಕಿವಿ ಹಿಂಡಿದ ಮತದಾರರು

ಇನ್ನೊಂದೆಡೆ, ಬಿಜೆಪಿ ಹಿರಿಯ ನಾಯಕಿ ಉಮಾ ಭಾರತಿ ಸಹ ಗೋಪಾಲ್‌ ಕಾಂಡಾ ಬಿಜೆಪಿಗೆ ಬೆಂಬಲ ನೀಡುತ್ತಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಅವರ ತಾಯಿ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ ಅದೇ ಗೋಪಾಲ್‌ ಕಾಂಡಾ ಆದರೆ, ಅವರ ವಿರುದ್ಧ ಕೋರ್ಟ್ ತನಿಖೆ ನಡೆಸುತ್ತಿದ್ದು, ಸದ್ಯ ಅವರು ಜಾಮೀನಿನ ಮೇಲೆ ಹೊರಗಿದ್ದಾರೆ ಅಷ್ಟೇ. ಅವರು ಅಪರಾಧಿಯೋ ಅಲ್ಲವೋ ಎಂಬುದನ್ನು ಕೋರ್ಟ್ ನಿರ್ಧರಿಸುತ್ತದೆ. ಅವರು ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದ ತಕ್ಷಣ ನಿರಪರಾಧಿ ಎನ್ನಲು ಸಾಧ್ಯವಿಲ್ಲ'' ಎಂದೂ ಉಮಾ ಭಾರತಿ ಪಕ್ಷದ ನಾಯಕರಿಗೆ ಟ್ವೀಟ್‌ಗಳ ಮೂಲಕ ಕಿವಿ ಮಾತು ಹೇಳಿದ್ದಾರೆ.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ