ಆ್ಯಪ್ನಗರ

ಡೇವಿಡ್‌ ಗೆಟ್ಟಾಗೆ ರೆಡ್‌ಕಾರ್ಪೆಟ್‌ ಹಾಸಿದ ಹೈದರಾಬಾದ್‌ !

ಖ್ಯಾತ ಫ್ರೆಂಚ್ ಗಾಯಕ, ಗ್ರಾಮ್ಮಿ ಪ್ರಶಸ್ತಿ ಪುರಸ್ಕೃತ ಡಿಜೆ ಡೇವಿಡ್ ಗೆಟ್ಟಾ ಅವರ ಹೈದರಾಬಾದ್‌ನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮ ಜನರ ಮನಸ್ಸು ಗೆಲ್ಲುವ ಎಲ್ಲಾ ಲಕ್ಷಣ ಕಂಡುಬಂದಿದ್ದು ಗೆಟ್ಟಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.

Vijaya Karnataka Web 14 Jan 2017, 4:26 pm
ಮುಂಬಯಿ: ಖ್ಯಾತ ಫ್ರೆಂಚ್ ಗಾಯಕ, ಗ್ರಾಮ್ಮಿ ಪ್ರಶಸ್ತಿ ಪುರಸ್ಕೃತ ಡಿಜೆ ಡೇವಿಡ್ ಗೆಟ್ಟಾ ಅವರ ಹೈದರಾಬಾದ್‌ನಲ್ಲಿ ನಡೆಯಲಿರುವ ಸಂಗೀತ ಕಾರ್ಯಕ್ರಮ ಜನರ ಮನಸ್ಸು ಗೆಲ್ಲುವ ಎಲ್ಲಾ ಲಕ್ಷಣ ಕಂಡುಬಂದಿದ್ದು ಗೆಟ್ಟಾ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
Vijaya Karnataka Web gotcha david guetta to rock in hyderabad after bengaluru fiasco
ಡೇವಿಡ್‌ ಗೆಟ್ಟಾಗೆ ರೆಡ್‌ಕಾರ್ಪೆಟ್‌ ಹಾಸಿದ ಹೈದರಾಬಾದ್‌ !


ಭದ್ರತೆಯ ನೆಪವೊಡ್ಡಿ ಗುರುವಾರದಂದು ಗೆಟ್ಟಾ ಕಾರ್ಯಕ್ರಮವನ್ನು ಬೆಂಗಳೂರು ಪೊಲೀಸರು ರದ್ದುಗೊಳಿಸುವಂತೆ ಮನವಿ ಮಾಡಿದ್ದರು. ಈ ವಿಚಾರ ರಾಷ್ಟ್ರಾದ್ಯಂತ ಭಾರೀ ಟೀಕೆಗೆ ಕಾರಣವಾಗಿತ್ತು. ಇದಾದ ಬಳಿಕ ಶುಕ್ರವಾರ ಮುಂಬಯಿಯಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಕ್ಕೆ ಆಯೋಜಕರು ಕೋರಿದ್ದ ಮನವಿಯನ್ನು ಮುಂಬಯಿ ಪಾಲಿಕೆ ತಿರಸ್ಕರಿಸಿತ್ತು.

ಆದರೆ ಇದೆಲ್ಲಾ ಬೆಳವಣಿಗೆ ನಡುವೆ ಇಂದು ಹೈದರಾಬಾದ್‌ಗೆ ಆಗಮಿಸಲಿರುವ ಗೆಟ್ಟಾಗೆ ಸೈಬರಾಬಾದ್‌ ಪೊಲೀಸರು ಟ್ವೀಟ್‌ ಮೂಲಕವೇ ಸ್ವಾಗತ ಕೋರಿದ್ದು, ಕಾರ್ಯಕ್ರಮದ ವೇಳೆ ಯಾವುದೇ ಅಹಿತಕರ ಘಟನೆಯಾಗದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಿದ್ದಾರೆ.

ಯಲಹಂಕ ಸಮೀಪದ ತರಹುಣಸೆ ಬಳಿಯ ಮೈದಾನದಲ್ಲಿ ಗುರುವಾರ ಸಂಜೆ ಕಾರ್ಯಕ್ರಮ ನಿಗದಿಯಾಗಿತ್ತು. ಇದೇ ಪ್ರದೇಶದಲ್ಲಿ ಗುರುವಾರ ಎಪಿಎಂಸಿ ಚುನಾವಣೆ ಇದ್ದ ಕಾರಣ ಕಾರ್ಯಕ್ರಮ ನಡೆಸಲು ಪೊಲೀಸರು ಅನುಮತಿ ನೀಡಲಿಲ್ಲ. ಹೀಗಾಗಿ ಬೆಂಗಳೂರು ಕಾರ್ಯಕ್ರಮ ರದ್ದಾಗಿತ್ತು.

ಪೊಲೀಸರು ಅನುಮತಿ ನಿರಾಕರಿಸಿದ್ದನ್ನೇ ದೊಡ್ಡದು ಮಾಡಿದ 'ಸನ್ ಬರ್ನ್ ಫೆಸ್ಟಿವಲ್' ಆಯೋಜಕರು, ಫೇಸ್ಬುಕ್, ಟ್ವಿಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿಬೆಂಗಳೂರಿನ ಬ್ರ್ಯಾಂಡ್ ಇಮೇಜ್‌ಗೆ ಧಕ್ಕೆ ತರುವ ಪ್ರಯತ್ನ ನಡೆಸಿದರು. ಇದರ ಬೆನ್ನಲ್ಲೇ, ಕಾರ್ಯಕ್ರಮಕ್ಕೆ ಅನುಮತಿ ನೀಡದ ಬೆಂಗಳೂರು ಪೊಲೀಸರ ಕ್ರಮ ದೇಶಾದ್ಯಂತ ವ್ಯಾಪಕ ಟೀಕೆಗೊಳಗಾಗಿತ್ತು.

ಇದರ ಬೆನ್ನಲ್ಲೇ ಶುಕ್ರವಾರ ಮುಬಯಿನಲ್ಲಿ ನಡೆಯಬೇಕಿದ್ದ ಕಾರ್ಯಕ್ರಮ ಕೂಡಾ ರದ್ದಾಗಿತ್ತು. ತಮ್ಮ ಕಾರ್ಯಕ್ರಮದ ಕುರಿತು ಆಯೋಜಕರು ಬೃಹನ್ಮುಂಬಯಿ ಮಹಾನಗರ ಪಾಲಿಕೆಗೆ ಸರಿಯಾದ ಮಾಹಿತಿ ಒದಗಿಸಿಲ್ಲ ಎಂದು ವರದಿಯಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ