ಆ್ಯಪ್ನಗರ

ತೆರಿಗೆ ಇಲಾಖೆಯ 22 ಭ್ರಷ್ಟ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ

ಕಳೆದ ಮೂರು ತಿಂಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಹಲವು ಭ್ರಷ್ಟ ಅಧಿಕಾರಿಗಳನ್ನು ಮನೆಗೆ ಕಳಿಸಲಾಗಿದೆ. ಈ ಹಿಂದಿನ ಬಾರಿ ಸಿಬಿಡಿಟಿಯ 12 ಅಧಿಕಾರಿಗಳು ಸೇರಿದಂತೆ ಐಆರ್‌ಎಸ್‌ ಸೇವೆಯ 27 ಉನ್ನತ ದರ್ಜೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು.

PTI 27 Aug 2019, 5:00 am
ಹೊಸದಿಲ್ಲಿ: ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರವು ಗಂಭೀರ ಆರೋಪಗಳಡಿ ಹೆಸರು ಕೆಡಿಸಿಕೊಂಡಿರುವ ಆದಾಯ ತೆರಿಗೆ ಇಲಾಖೆಯ 22 ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿ ಮನೆಗೆ ಕಳಿಸಿದೆ.
Vijaya Karnataka Web it retire

ಭ್ರಷ್ಟಾಚಾರ ಮತ್ತಿತರೆ ಆರೋಪಗಳಡಿ ಕೇಂದ್ರ ಪರೋಕ್ಷ ತೆರಿಗೆಗಳು ಹಾಗೂ ಸೀಮಾ ಸುಂಕ ಮಂಡಳಿಯ ಸುಪರಿಂಟೆಂಡೆಂಟ್‌ ದರ್ಜೆಯ 22 ಅಧಿಕಾರಿಗಳ ವಿರುದ್ಧ ಸರಕಾರ ಈ ಕಠಿಣ ಕ್ರಮ ಜರಿಗಿಸಿದೆ. ಮೂಲಭೂತ ನಿಯಮ 56 (ಜೆ) ಅಡಿಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಭ್ರಷ್ಟಾಚಾರ ಬುಡಸಮೇತ ಕಿತ್ತು ಹಾಕುವ ಪಣ ತೊಟ್ಟಿರುವ ಮೋದಿ ಸರಕಾರ, ಮೊದಲ ಅಧಿಕಾರಾವಧಿಯಿಂದಲೂ ಬಿಗಿ ಕ್ರಮಗಳನ್ನು ಜರುಗಿಸುತ್ತ ಬಂದಿದೆ. ಈ ಅವಧಿಯಲ್ಲಿ ಕಳೆದ ಜೂನ್‌ನಿಂದ ಈ ಅಭಿಯಾನವನ್ನು ಇನ್ನಷ್ಟು ಚುರುಕುಗೊಳಿಸಿದೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ಮೂರು ಹಂತಗಳಲ್ಲಿ ಹಲವು ಭ್ರಷ್ಟ ಅಧಿಕಾರಿಗಳನ್ನು ಮನೆಗೆ ಕಳಿಸಲಾಗಿದೆ. ಈ ಹಿಂದಿನ ಬಾರಿ ಸಿಬಿಡಿಟಿಯ 12 ಅಧಿಕಾರಿಗಳು ಸೇರಿದಂತೆ ಐಆರ್‌ಎಸ್‌ ಸೇವೆಯ 27 ಉನ್ನತ ದರ್ಜೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಲಾಗಿತ್ತು.

ತೆರಿಗೆ ಇಲಾಖೆಯಲ್ಲಿ ಕೆಲವು ಭ್ರಷ್ಟ ಅಧಿಕಾರಿಗಳು ಸೇರಿಕೊಂಡಿದ್ದು, ಪ್ರಾಮಾಣಿಕ ತೆರಿಗೆ ಪಾವತಿದಾರರನ್ನು ಅವರು ಸತಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ 15ರಂದು ಸ್ವಾತಂತ್ರ್ಯ ದಿನೋತ್ಸವದ ಭಾಷಣ ಮಾಡಿದ ಬೆನ್ನ ಹಿಂದೆಯೇ ಈಗ 22 ಭ್ರಷ್ಟರಿಗೆ ಗೇಟ್‌ಪಾಸ್‌ ನೀಡಿರುವುದು ಗಮನರ್ಹ.

ನಿವೃತ್ತರ ವಲಯ: ಈಗ ಕಡ್ಡಾಯ ನಿವೃತ್ತಿ ಹೊಂದಿದ 22 ಅಧಿಕಾರಿಗಳ ಪೈಕಿ ನಾಗ್ಪುರ, ಭೋಪಾಲ್‌ ವಲಯಕ್ಕೆ ಸೇರಿದ 11 ಅಧಿಕಾರಿಗಳಿದ್ದಾರೆ. ಬೆಂಗಳೂರು, ಮುಂಬಯಿ, ಜೈಪುರದಿಂದ ತಲಾ ಇಬ್ಬರು ಮತ್ತು ಚೆನ್ನೈ, ದಿಲ್ಲಿ, ಕೋಲ್ಕೊತಾ, ಮೀರತ್‌ ಮತ್ತು ಚಂಡೀಗಢ ವಲಯಗಳಿಂದ ತಲಾ ಒಬ್ಬರು ಅಧಿಕಾರಿಗಳು ಕಡ್ಡಾಯ ನಿವೃತ್ತಿ ಪಡೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ