ಆ್ಯಪ್ನಗರ

91 ಸ್ವಘೋಷಿತ ಸುಸ್ತಿದಾರರಿಗೆ ಕಂಟಕ

ವಿಜಯ್‌ ಮಲ್ಯ, ನೀರವ್‌ ಮೋದಿಯರಂತಹ ವಂಚನೆ ಪ್ರಕರಣದಿಂದ ಎಚ್ಚೆತ್ತಿರುವ ಸರಕಾರ ಇದೀಗ 91 ಸ್ವಘೋಷಿತ ಸುಸ್ಥಿದಾರರನ್ನು ಗುರುತಿಸಿದ್ದು, ಇವರೆಲ್ಲರನ್ನು ದೇಶಬಿಟ್ಟು ತೆರಳದಂತೆ ಸೂಕ್ತ ಕ್ರಮ ತೆಗದುಕೊಳ್ಳಲು ಮುಂದಾಗಿದೆ.

TNN 15 Mar 2018, 6:13 pm
ಹೊಸದಿಲ್ಲಿ: ವಿಜಯ್‌ ಮಲ್ಯ, ನೀರವ್‌ ಮೋದಿಯರಂತಹ ವಂಚನೆ ಪ್ರಕರಣದಿಂದ ಎಚ್ಚೆತ್ತಿರುವ ಸರಕಾರ ಇದೀಗ 91 ಸ್ವಘೋಷಿತ ಸುಸ್ಥಿದಾರರನ್ನು ಗುರುತಿಸಿದ್ದು, ಇವರೆಲ್ಲರನ್ನು ದೇಶಬಿಟ್ಟು ತೆರಳದಂತೆ ಸೂಕ್ತ ಕ್ರಮ ಕೈಕೊಳ್ಳಲು ಮುಂದಾಗಿದೆ.
Vijaya Karnataka Web government may ban 91 defaulters from leaving india
91 ಸ್ವಘೋಷಿತ ಸುಸ್ತಿದಾರರಿಗೆ ಕಂಟಕ


ಅಧಿಕೃತ ಮಾಹಿತಿಗಳ ಪ್ರಕಾರ, ಸರಕಾರ ಈಗಾಗಲೇ 400ಕ್ಕೂ ಅಧಿಕ ಕಂಪನಿಗಳನ್ನು ಹಾಗು 91 ವ್ಯಕ್ತಿಗಳನ್ನು ಗುರುತಿಸಿದ್ದು, ಇವರೆಲ್ಲರೂ ಬ್ಯಾಂಕ್‌ನಿಂದ ಸಾಲ ಪಡೆದಿದ್ದು, ಆದರೆ ಹಿಂತಿರುಗಿಸಲಾಗದೆ ಸ್ವಘೋಷಿತ ಸುಸ್ಥಿದಾರರ ಪಟ್ಟಿಗೆ ಸೇರಿದ್ದಾರೆ. ಹೀಗಾಗಿ ಇವರ ವಿರುದ್ಧದ ಕ್ರಮಕ್ಕೆ ಮುಂದಾದ ಸರಕಾರ ಇವರೆಲ್ಲರನ್ನು ದೇಶ ಬಿಟ್ಟು ತೆರಳದಂತೆ ಸೂಕ್ತ ಕ್ರಮ ತೆಗೆದುಕೊಳ್ಳಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ಪಂಜಾಬ್‌ ನ್ಯಾಷನಲ್‌‌ ಬ್ಯಾಂಕ್‌‌ಗೆ ವಜ್ರಾಭರಣದ ವ್ಯಾಪಾರಿಗಳಾದ ನೀರವ್ ಮೋದಿ ಹಾಗೂ ಮೆಹುಲ್‌ 12,600 ಕೋಟಿ ರೂಪಾಯಿ ವಂಚಿಸಿ ದೇಶ ತೊರೆದಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ವಿವಿಧ ರಾಷ್ಟ್ರೀಯ ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರುಪಾಯಿ ಸಾಲ ಪಡೆದು ಲಂಡನ್ ನಲ್ಲಿ ತಲೆಮರೆಸಿಕೊಂಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಸಾರ್ವಜನಿಕರೂ ಕೂಡಾ ಸರಕಾರದ ವಿರುದ್ಧ ಚೀಮಾರಿ ಹಾಕಿದ್ದರು. ಅಲ್ಲದೇ ಸಾಮಾಜಿಕ ಜಾಲತಾಣದಲ್ಲೂ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ