ಆ್ಯಪ್ನಗರ

ಪತ್ರಕರ್ತನನ್ನು ಹಿಗ್ಗಾಮುಗ್ಗ ಥಳಿಸಿ, ಮೂತ್ರ ಮಾಡಿದ್ದ ರೈಲ್ವೆ ಪೊಲೀಸ್‌ ಅಮಾನತು

ಪತ್ರಕರ್ತನ ಮೇಲೆ ಪೊಲೀಸ್‌ ಸಿಬ್ಬಂದಿ ಅಮಾನೀಯವಾಗಿ ವರ್ತಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

Times Now 12 Jun 2019, 11:54 am
ಲಖನೌ: ಉತ್ತರ ಪ್ರದೇಶದ ಶಾಮಿಲಿ ನಗರದ ಸಮೀಪ ಗೂಡ್ಸ್‌ ರೈಲು ಹಳಿ ತಪ್ಪಿದ್ದರ ಸುದ್ದಿಯನ್ನು ವರದಿ ಮಾಡಲು ಬಂದಿದ್ದ ಪತ್ರಕರ್ತನನ್ನು ಹಿಗ್ಗಾಮುಗ್ಗ ಥಳಿಸಿ, ಆತನ ಮೇಲೆ ಮೂತ್ರ ಮಾಡಿ ವಿಕೃತಿ ಮೆರೆದ ಆರೋಪಿ ಸರಕಾರಿ ರೈಲ್ವೆ ಪೊಲೀಸ್‌ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.

ಸಂತ್ರಸ್ತ ನ್ಯೂಸ್‌ 24 ವಾಹಿನಿಯ ಉದ್ಯೋಗಿ ಎಂದು ತಿಳಿದುಬಂದಿದ್ದು, ಆತನ ಮೇಲೆ ಪೊಲೀಸ್‌ ಸಿಬ್ಬಂದಿ ಅಮಾನೀಯವಾಗಿ ವರ್ತಿಸುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದ್ದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಜೈಲು ಆವರಣದೊಳಗೂ ಪತ್ರಕರ್ತನ ಮೇಲೆ ರೈಲ್ವೆ ಪೊಲೀಸ್‌ ಸಿಬ್ಬಂದಿ ಬಟ್ಟೆ ಬಿಚ್ಚಿಸಿ, ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಘಟನೆಗೆ ಸಂಬಂಧಿಸಿ ಪ್ರಮುಖ ಆರೋಪಿ ಜಿಆರ್‌ಪಿ ಇನ್ಸ್‌ಪೆಕ್ಟರ್‌ ರಾಕೇಶ್‌ ಕುಮಾರ್‌ ಮತ್ತು ಸಂಜಯ್‌ ಪವಾರ್‌ರನ್ನು ಅಮಾನತುಗೊಳಿಸಲಾಗಿದೆ. ಮೊರದಾಬಾದ್‌ನ ರೈಲ್ವೆ ಪೊಲೀಸ್‌ ಸುಪರಿಟೆಂಡೆಂಟ್‌ ಸುಭಾಶ್‌ ಚಂದ್ರ ದುಬೇ ಅಮಾನತು ಆದೇಶ ಹೊರಡಿಸಿದ್ದಾರೆ.

ಗೂಡ್ಸ್‌ ರೈಲು ಮಂಗಳವಾರ ಸಂಜೆ 8.50ಕ್ಕೆ ಹಳಿ ತಪ್ಪಿದೆ. ಯಾವುದೆ ಸಾವುನೋವು ಸಂಭವಿಸಿಲ್ಲ. ಸುಮಾರು 9.30ರ ಹೊತ್ತಿಗೆ ಬ್ಲಾಕ್‌ ಆಗಿದ್ದ ಮಾರ್ಗವನ್ನು ಮುಕ್ತಗೊಳಿಸಲಾಗಿದೆ. ಆದರೆ ಈ ಸುದ್ದಿಯನ್ನು ಕವರ್‌ ಮಾಡಲು ಪತ್ರಕರ್ತರಿಗೆ ಯಾವ ಕಾರಣಕ್ಕೆ ಬಿಡಲಿಲ್ಲ ಎಂಬ ಬಗ್ಗೆ ತಿಳಿದುಬಂದಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ