ಆ್ಯಪ್ನಗರ

ಕಾಶ್ಮೀರದಲ್ಲಿ ರಾಜ್ಯಪಾಲರ ಆಡಳಿತ: ಸೇನೆಗೆ ಹಿತ

ಪಿಡಿಪಿ-ಬಿಜೆಪಿ ಸರಕಾರ ಪತನಗೊಂಡ ಒಂದು ದಿನದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಘೋಷಿಸಲಾಗಿದೆ...

Vijaya Karnataka 21 Jun 2018, 8:00 am
Vijaya Karnataka Web Indian Army
ಹೊಸದಿಲ್ಲಿ/ಶ್ರೀನಗರ: ಪಿಡಿಪಿ-ಬಿಜೆಪಿ ಸರಕಾರ ಪತನಗೊಂಡ ಒಂದು ದಿನದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ರಾಜ್ಯಪಾಲರ ಆಳ್ವಿಕೆ ಘೋಷಿಸಲಾಗಿದೆ. ರಾಜ್ಯಪಾಲರ ಆಳ್ವಿಕೆ ಹೇರುವ ಕೇಂದ್ರ ಸಂಪುಟದ ನಿರ್ಧಾರಕ್ಕೆ ಸುರಿನಾಮ್‌ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅಲ್ಲಿಂದಲೇ ಸಮ್ಮತಿ ಸೂಚಿಸಿದ್ದಾರೆ.

2008ರಿಂದ 2018ರವರೆಗೆ ಕಾಶ್ಮೀರದಲ್ಲಿ ಕೇಂದ್ರಾಡಳಿತ ಜಾರಿಯಾಗುತ್ತಿರುವುದು ಇದು 4ನೇ ಬಾರಿ. ನಾಲ್ಕು ಬಾರಿಯೂ ಅಧಿಕಾರದ ಸಾರಥ್ಯ ವಹಿಸಿದ್ದು ರಾಜ್ಯಪಾಲ ಎನ್‌.ಎನ್‌. ವೋರಾ. ಕೇಂದ್ರಾಡಳಿತ ಜಾರಿಯ ಹೊರತಾಗಿಯೂ ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಘೋಷಿಸಿದ್ದಾರೆ.

ರಾಷ್ಟ್ರಪತಿ ಆಳ್ವಿಕೆಯಲ್ಲ

ರಾಜ್ಯಗಳಲ್ಲಿ ಸಂವಿಧಾನದ 356ನೇ ವಿಧಿಯಡಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದರೆ ಪ್ರತ್ಯೇಕ ಸಂವಿಧಾನ ಹೊಂದಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಲಿನ ಸಂವಿಧಾನ 92ನೇ ವಿಧಿಯಡಿ ರಾಜ್ಯಪಾಲರ ಆಳ್ವಿಕೆ ಜಾರಿ ಮಾಡಲಾಗುತ್ತದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ