ಆ್ಯಪ್ನಗರ

ಬೋಪಣ್ಣ ಸೇರಿ ನಾಲ್ವರು ಜಡ್ಜ್‌ಗಳ ಪದೋನ್ನತಿಗೆ ಕೇಂದ್ರ ಸರಕಾರ ಸಮ್ಮತಿ

ಅನಿರುದ್ಧ ಬೋಸ್‌, ಎ.ಎಸ್‌.ಬೋಪಣ್ಣ, ಬಿ.ಆರ್‌.ಗವಾಯಿ ಮತ್ತು ಸೂರ್ಯಕಾಂತ್‌ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದ ನ್ಯಾಯಮೂರ್ತಿಗಳು.

Vijaya Karnataka 23 May 2019, 5:00 am
ಹೊಸದಿಲ್ಲಿ: ಕರ್ನಾಟಕದ ಎ.ಎಸ್‌.ಬೋಪಣ್ಣ ಸೇರಿದಂತೆ ನಾಲ್ವರು ಹೈಕೋರ್ಟ್‌ ಜಡ್ಜ್‌ಗಳಿಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ಬಡ್ತಿ ನೀಡುವ ಕೊಲಿಜಿಯಂ ಶಿಫಾರಸಿಗೆ ಕೇಂದ್ರ ಸರಕಾರ ಕೊನೆಗೂ ಸಮ್ಮತಿ ನೀಡಿದೆ.
Vijaya Karnataka Web bopanna


ಅನಿರುದ್ಧ ಬೋಸ್‌, ಎ.ಎಸ್‌.ಬೋಪಣ್ಣ, ಬಿ.ಆರ್‌.ಗವಾಯಿ ಮತ್ತು ಸೂರ್ಯಕಾಂತ್‌ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದ ನ್ಯಾಯಮೂರ್ತಿಗಳು.

ಈ ಮೊದಲು, ಸೇವಾ ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದ ಕಾರಣ ನೀಡಿ ಬೋಸ್‌ ಮತ್ತು ಬೋಪಣ್ಣ ಅವರ ಹೆಸರುಗಳನ್ನು ಮರು ಪರಿಶೀಲನೆಗಾಗಿ ಸರಕಾರ ಕೊಲಿಜಿಯಂಗೆ ವಾಪಸ್‌ ಕಳಿಸಿತ್ತು. ಆದರೆ, ನಿರ್ಧಾರ ಬದಲಿಸಲು ನಿರಾಕರಿಸಿದ್ದ ಕೊಲಿಜಿಯಂ ಎರಡನೇ ಬಾರಿ ಪಟ್ಟಿಯನ್ನು ಸರಕಾರಕ್ಕೆ ಕಳಿಸಿಕೊಟ್ಟಿತ್ತು. ಈ ನ್ಯಾಯಮೂರ್ತಿಗಳ ಬಡ್ತಿಯಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ 31ಕ್ಕೆ ಏರಿಕೆಯಾಗಲಿದ್ದು, ಖಾಲಿ ಹುದ್ದೆಗಳು ಸಂಪೂರ್ಣವಾಗಿ ಭರ್ತಿಯಾಗಲಿವೆ.

8 ತಿಂಗಳಲ್ಲಿ 10 ನ್ಯಾಯಮೂರ್ತಿಗಳಿಗೆ ಪ್ರಮಾಣ
ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ರಂಜನ್‌ ಗೊಗೊಯ್‌ ಅವರು ಅಧಿಕಾರ ವಹಿಸಿಕೊಂಡ ಎಂಟೇ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯದ ಹತ್ತು ಮಂದಿ ನೂತನ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಿದ ಕೀರ್ತಿಗೆ ಪಾತ್ರರಾಗಲಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಯಾವ ಸಿಜೆಐ ಅವಧಿಯಲ್ಲಿಯೂ ಇಷ್ಟೊಂದು ಸಂಖ್ಯೆಯಲ್ಲಿ ಜಡ್ಜ್‌ಗಳಿಳ ನೇಮಕ ಆಗಿರಲಿಲ್ಲ. ಗುರುವಾರ ಅಥವಾ ಶುಕ್ರವಾರ ನಾಲ್ವರು ನ್ಯಾಯಮೂರ್ತಿಗಳು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಗೆಯೇ ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಪೂರ್ಣಪ್ರಮಾಣದಲ್ಲಿ , ಅಂದರೆ ಎಲ್ಲ 31 ನ್ಯಾಯಮೂರ್ತಿಗಳು ಕಾರ್ಯನಿರ್ವಹಿಸಿದ ಉದಾಹರಣೆಯೂ ಇಲ್ಲ. 2018ರ ಅಕ್ಟೋಬರ್‌ 3ರಂದು ಸಿಜೆಐ ಆಗಿ ಪ್ರಮಾಣ ವಚನ ಸ್ವೀಕರಿಸಿದ ಗೊಗೊಯ್‌ ಅವರು, ಅಧಿಕಾರ ವಹಿಸಿಕೊಂಡ 27 ದಿನಗಳಲ್ಲಿ ಸುಪ್ರೀಂ ಪದೋನ್ನತಿಯ ಮೊದಲ ಶಿಫಾರಸು ಮಾಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ