ಆ್ಯಪ್ನಗರ

ಅಲ್‌ ಕೈದಾ ಬೆದರಿಕೆ ಕುರಿತು ಭಯ ಅನಗತ್ಯವೆಂದ ಕೇಂದ್ರ

ನಮ್ಮ ಸೇನಾ ಪಡೆಗಳು ಶಸ್ತ್ರಸಜ್ಜಿತವಾಗಿ ಸನ್ನದ್ಧವಾಗಿವೆ. ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಸಮರ್ಥವಾಗಿವೆ. ಹಾಗಾಗಿ ಬಹಳ ಸಲ ಇಂಥದ್ದೇ ಹುಸಿ ಬೆದರಿಕೆಗಳನ್ನು ನೀಡಿರುವ ಉಗ್ರ ಸಂಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕುಮಾರ್‌ ತಿಳಿಸಿದ್ದಾರೆ.

PTI 12 Jul 2019, 5:00 am
ಹೊಸದಿಲ್ಲಿ: ಕಾಶ್ಮೀರದ ಮುಜಾಹಿದ್ದೀನ್‌ ಉಗ್ರರು ಸಂಘಟಿತರಾಗಿ ಭಾರತೀಯ ಸೇನೆ ಮತ್ತು ಸರಕಾರದ ಮೇಲೆ ದಾಳಿ ಮೂಲಕ ರಕ್ತಪಾತ ನಡೆಸಬೇಕು ಎಂದು ಕರೆ ನೀಡಿರುವ ಅಲ್‌ ಕೈದಾ ಮುಖ್ಯಸ್ಥ ಆಯ್ಮಾನ್‌ ಅಲ್‌-ಜವಾಹಿರಿಯ ವಿಡಿಯೊವನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿಲ್ಲ. ಹಿಂದೆಯೂ ಹಲವು ಬಾರಿ ಈ ಉಗ್ರ ಸಂಘಟನೆಗಳು ಇಂಥ ಬೆದರಿಕೆಗಳನ್ನು ಕೊಟ್ಟಿವೆ ಎಂದು ವಿದೇಶಾಂಗ ಸಚಿವಾಲಯ ವಕ್ತಾರ ರವೀಶ್‌ ಕುಮಾರ್‌ ಹೇಳಿದ್ದಾರೆ.
Vijaya Karnataka Web raveesh


ನಮ್ಮ ಸೇನಾ ಪಡೆಗಳು ಶಸ್ತ್ರಸಜ್ಜಿತವಾಗಿ ಸನ್ನದ್ಧವಾಗಿವೆ. ದೇಶದ ಸಮಗ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸಲು ಸಮರ್ಥವಾಗಿವೆ. ಹಾಗಾಗಿ ಬಹಳ ಸಲ ಇಂಥದ್ದೇ ಹುಸಿ ಬೆದರಿಕೆಗಳನ್ನು ನೀಡಿರುವ ಉಗ್ರ ಸಂಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಕುಮಾರ್‌ ತಿಳಿಸಿದ್ದಾರೆ.
ಅಮೆರಿಕ ವ್ಯಾಪಾರ ಬಿಕ್ಕಟ್ಟು ಶಮನ: ಭಾರತದ ಸುಂಕ ಹೇರಿಕೆ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಆಕ್ಷೇಪ ವ್ಯಕ್ತಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಕುಮಾರ್‌, '' ಒಸಾಕಾದಲ್ಲಿ ಮೋದಿ -ಟ್ರಂಪ್‌ ಸಭೆ ನಡೆಸಿ ನಿರ್ಧರಿಸಿದಂತೆ ಶೀಘ್ರವೇ ಉಭಯ ರಾಷ್ಟ್ರಗಳ ಉನ್ನತಮಟ್ಟದ ಅಧಿಕಾರಿಗಳು ಸಭೆ ಸೇರಿ ವ್ಯಾಪಾರ ಸಂಬಂಧದ ಎಲ್ಲ ವಿಚಾರಗಳ ಕುರಿತು ಚರ್ಚಿಸಿ ಪರಿಹಾರ ಕಂಡುಕೊಳ್ಳಲಿದ್ದಾರೆ '', ಎಂದು ಆಶಾಭಾವ ವ್ಯಕ್ತಪಡಿಸಿದರು.

ಇನ್ನೊಂದೆಡೆ, ಕರ್ತಾರಪುರ ಕಾರಿಡಾರ್‌ ಕುರಿತು ಮಾತನಾಡಿದ ಕುಮಾರ್‌, ನಿಗದಿಯಂತೆ 2019ರ ಸೆಪ್ಟೆಂಬರ್‌ ವೇಳೆಗೆ ಪ್ಯಾಸೆಂಜರ್‌ ಟರ್ಮಿನಲ್‌ ಹಾಗೂ ಅಕ್ಟೋಬರ್‌ ವೇಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ