ಆ್ಯಪ್ನಗರ

ರಾಮ ಮಂದಿರಕ್ಕೆ ಸರಕಾರ ಬದ್ಧ ಎಂದ ಆರೆಸ್ಸೆಸ್‌

ಮಂದಿರ ನಿರ್ಮಾಣಕ್ಕಿರುವ ಕಾನೂನು ಅಡೆತಡೆಗಳ ನಿವಾರಣೆಗೆ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಅಪೇಕ್ಷೆ ನಮಗಿತ್ತು. ಆದರೆ ಅದು ಈಡೇರಲಿಲ್ಲ. ಹಾಗಂತ ಸರಕಾರ ಮಂದಿರ ನಿರ್ಮಾಣದ ವಿಚಾರದಿಂದ ಹಿಂದೆ ಸರಿದಿದೆ ಎಂದು ಭಾವಿಸಬೇಕಿಲ್ಲ.

Vijaya Karnataka 11 Mar 2019, 7:30 am
ಗ್ವಾಲಿಯರ್‌: ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ತನ್ನ ನಿಲುವು ಎಂದಿಗೂ ಬದಲಾಗದು ಎಂದಿರುವ ಆರೆಸ್ಸೆಸ್‌, ಅಯೋಧ್ಯೆಯಲ್ಲಿ ಮಂದಿರ ನಿರ್ಮಿಸಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಹೇಳಿದೆ.
Vijaya Karnataka Web Ram mandir


ಮಧ್ಯಪ್ರದೇಶದಲ್ಲಿ ನಡೆದ ಆರೆಸ್ಸೆಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭಾದ ಮೂರು ದಿನಗಳ ಸಮಾವೇಶದ ಕೊನೆಯ ದಿನವಾದ ಭಾನುವಾರ ಮಾತನಾಡಿದ ಆರೆಸ್ಸೆಸ್‌ ಪ್ರಧಾನ ಕಾರ‍್ಯದರ್ಶಿ ಭಯ್ಯಾಜಿ ಜೋಶಿ, ''ಮಂದಿರ ನಿರ್ಮಾಣಕ್ಕಿರುವ ಕಾನೂನು ಅಡೆತಡೆಗಳ ನಿವಾರಣೆಗೆ ಸರಕಾರ ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಅಪೇಕ್ಷೆ ನಮಗಿತ್ತು. ಆದರೆ ಅದು ಈಡೇರಲಿಲ್ಲ. ಹಾಗಂತ ಸರಕಾರ ಮಂದಿರ ನಿರ್ಮಾಣದ ವಿಚಾರದಿಂದ ಹಿಂದೆ ಸರಿದಿದೆ ಎಂದು ಭಾವಿಸಬೇಕಿಲ್ಲ,'' ಎಂದು ಹೇಳಿದ್ದಾರೆ.

''ಬಾಬ್ರಿ ಮಸೀದಿಗೂ ಮುನ್ನ ಯಾವ ಸ್ಥಳದಲ್ಲಿ ರಾಮ ಮಂದಿರವಿತ್ತೋ ಅದೇ ಸ್ಥಳದಲ್ಲಿ ಭವ್ಯ ಮಂದಿರ ತಲೆಯತ್ತಲಿದೆ. ಈ ವಿಚಾರದಲ್ಲಿ ರಾಜೀ ಮಾತೇ ಇಲ್ಲ,'' ಎಂದಿರುವ ಅವರು, ಸುಪ್ರೀಂ ಕೋರ್ಟ್‌ ರಚಿಸಿರುವ ಸಂಧಾನ ಸಮಿತಿ ವಿವಾದ ಇತ್ಯರ್ಥಕ್ಕೆ ಕೊನೆ ಹಾಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಸರಕಾರವೂ ಮಂದಿರ ನಿರ್ಮಾಣಕ್ಕೆ ಬದ್ಧವಾಗಿದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ