ಆ್ಯಪ್ನಗರ

ಲೋಕಪಾಲ ಮುಖ್ಯಸ್ಥರ ನೇಮಕಕ್ಕೆ ಚಾಲನೆ

ಲೋಕಪಾಲ ಮುಖ್ಯಸ್ಥರು ಮತ್ತು ಸದಸ್ಯರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಸಿಬ್ಬಂದಿ ಸಚಿವಾಲಯ ಜಾಹೀರಾತು ನೀಡಿದೆ.

Vijaya Karnataka 7 Feb 2019, 5:00 am
ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನಿಂದ ಬಿಸಿ ಅನುಭವಿಸಿದ ಬಳಿಕ ಕೇಂದ್ರ ಸರಕಾರ ಭ್ರಷ್ಟಾಚಾರ ತಡೆ ಸಂಸ್ಥೆ ಲೋಕಪಾಲದ ಮುಖ್ಯಸ್ಥರ ಹಾಗೂ ಸದಸ್ಯರ ನೇಮಕಕ್ಕೆ ಮುಂದಾಗಿದೆ. ಸಂಸ್ಥೆಯ ಮುಖ್ಯಸ್ಥರು ಮತ್ತು ಸದಸ್ಯರ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿ ಸಿಬ್ಬಂದಿ ಸಚಿವಾಲಯ ಜಾಹೀರಾತು ನೀಡಿದೆ.
Vijaya Karnataka Web govt seeks applications for lokpal chief members
ಲೋಕಪಾಲ ಮುಖ್ಯಸ್ಥರ ನೇಮಕಕ್ಕೆ ಚಾಲನೆ


ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಾಗಿರುವ ರಂಜನಾ ಪ್ರಕಾಶ್‌ ದೇಸಾಯಿ ನೇತೃತ್ವದ ಎಂಟು ಸದಸ್ಯರ ಶೋಧನಾ ಸಮಿತಿಯು ಅರ್ಹರ ಆಯ್ಕೆ ಕುರಿತು ಕಳೆದ ತಿಂಗಳು ಸಭೆ ನಡೆಸಿದ ಬೆನ್ನಲ್ಲೇ ಈ ಜಾಹೀರಾತು ಪ್ರಕಟಗೊಂಡಿದೆ. ಅರ್ಜಿ ಸಲ್ಲಿಸಲು ಫೆ.22 ಕೊನೆ ದಿನವಾಗಿದೆ. ಲೋಕಪಾಲ ಮುಖ್ಯಸ್ಥರಿಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳಿಗೆ ಸಮನಾದ ವೇತನ ಮತ್ತಿತರ ಭತ್ಯೆಗಳು ದೊರೆಯಲಿವೆ. ಹಾಗೆಯೇ ಸಂಸ್ಥೆಯ ಸದಸ್ಯರಿಗೆ ಸುಪ್ರೀಂ ನ್ಯಾಯಮೂರ್ತಿಗಳಿಗೆ ಸಮನಾದ ವೇತನ ಮತ್ತು ಭತ್ಯೆಗಳು ದೊರೆಯಲಿವೆ .

ಲೋಕಪಾಲ ಕಾಯಿದೆ ಜಾರಿಗೆ ಬಂದು ಐದು ವರ್ಷವಾದೂ ಲೋಕಪಾಲರ ನೇಮಕಕ್ಕೆ ಸರಕಾರ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಸಾಮಾಜಿಕ ಕಾರ‍್ಯಕರ್ತ ಅಣ್ಣಾ ಹಜಾರೆ ರಾಳೇಗಾಂವ್‌ಸಿದ್ಧಿಯಲ್ಲಿ ನಿರಶನ ಆರಂಭಿಸಿದ್ದರು. ಸರಕಾರದ ಭರವಸೆ ಮೇರೆಗೆ ಮಂಗಳವಾರವಷ್ಟೇ ಅವರು ನಿರಶನ ಅಂತ್ಯಗೊಳಿಸಿದರು. ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್‌ ಕೂಡ ಸರಕಾರವನ್ನು ತರಾಟೆಗೆ ತೆಗೆದುಕೊಂಡು, ಫೆಬ್ರವರಿ ಅಂತ್ಯದೊಳಗೆ ಲೋಕಪಾಲ ಹುದ್ದೆ ಭರ್ತಿಗೆ ಅರ್ಹರ ಹೆಸರು ಸೂಚಿಸುವಂತೆ ಖಡಕ್‌ ಸೂಚನೆ ನೀಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ