ಆ್ಯಪ್ನಗರ

ಮನೆಮನೆಗೂ ನೀರು ಪೂರೈಕೆಗೆ ಕೇಂದ್ರ ಬದ್ಧ

ಭಾರತೀಯ ನಾರಿಯರು ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಅನುಭವಿಸುವ ಸಂಕಷ್ಟ ಪರಿಹರಿಸುವ ಅಗತ್ಯತೆಯನ್ನು ಪ್ರತಿಪಾದಿಸಿದ್ದರು. ಲೋಹಿಯಾ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ನಮ್ಮ ಸರಕಾರ ಬದ್ಧವಾಗಿದ್ದು, ಜಲ ಜೀವನ್‌ ಮಿಷನ್‌ಗೆ ಹೆಚ್ಚು ಹಣ ವಿನಿಯೋಗಿಸಲಿದೆ,'' ಎಂದು ಹೇಳಿದರು.

PTI 8 Sep 2019, 5:00 am
ಮುಂಬಯಿ: ಗ್ರಾಮೀಣ ಪ್ರದೇಶದಲ್ಲಿನ ಪ್ರತಿ ಮನೆಮನೆಗೂ ಕೊಳವೆ ಮಾರ್ಗದ ಮೂಲಕ ಕುಡಿಯುವ ನೀರು ಪೂರೈಸುವ 'ಜಲ ಜೀವನ್‌ ಮಿಷನ್‌' ಯೋಜನೆಗೆ ಸರಕಾರ ಮುಂದಿನ ಐದು ವರ್ಷಗಳಲ್ಲಿ 3.5 ಲಕ್ಷ ಕೋಟಿ ರೂ. ವಿನಿಯೋಗಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
Vijaya Karnataka Web mumbai modi-PTI


ಒಂದು ದಿನದ ಮುಂಬಯಿ ಭೇಟಿ ವೇಳೆ ಹಲವು ಕಾರ‍್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಮೋದಿ ಅವರು, ''ಒಂದು ಕೊಡ ನೀರು ತರಲು ಗ್ರಾಮೀಣ ಭಾಗದಲ್ಲಿ ಕಿಲೋಮೀಟರ್‌ ಗಟ್ಟಲೆ ನಡೆಯುವ ಪರಿಸ್ಥಿತಿ ದೇಶದಲ್ಲಿದೆ. ಸಮಾಜವಾದಿ ನಾಯಕ ರಾಮ್‌ ಮನೋಹರ ಲೋಹಿಯಾ ಅವರು 70ರ ದಶಕದಲ್ಲಿಯೇ ನೀರು ಮತ್ತು ಶೌಚಾಲಯ ವಿಚಾರದಲ್ಲಿ ಭಾರತೀಯ ನಾರಿಯರು ಅದರಲ್ಲೂ ಗ್ರಾಮೀಣ ಭಾಗದ ಮಹಿಳೆಯರು ಅನುಭವಿಸುವ ಸಂಕಷ್ಟ ಪರಿಹರಿಸುವ ಅಗತ್ಯತೆಯನ್ನು ಪ್ರತಿಪಾದಿಸಿದ್ದರು. ಲೋಹಿಯಾ ಅವರ ಕನಸನ್ನು ಸಾಕಾರಗೊಳಿಸುವಲ್ಲಿ ನಮ್ಮ ಸರಕಾರ ಬದ್ಧವಾಗಿದ್ದು, ಜಲ ಜೀವನ್‌ ಮಿಷನ್‌ಗೆ ಹೆಚ್ಚು ಹಣ ವಿನಿಯೋಗಿಸಲಿದೆ,'' ಎಂದು ಹೇಳಿದರು.

ಮುಂಬಯಿನಲ್ಲಿ ಗಾಯ್‌ಮುಖ್‌-ಶಿವಾಜಿ ಚೌಕ್‌, ವಡಾಲ-ಸಿಎಸ್‌ಟಿ ಮತ್ತು ಕಲ್ಯಾಣ್‌-ತಲೋಜಾ ಮೂರು ಮೆಟ್ರೊ ಮಾರ್ಗಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೇರವೇರಿಸಿದ ಪ್ರಧಾನಿ ಮೋದಿ, ಮೇಕ್‌ ಇನ್‌ ಇಂಡಿಯಾ ಯೋಜನೆಯಡಿ ಬಿಇಎಂಎಲ್‌ ಬೆಂಗಳೂರಿನ ಘಟಕದಲ್ಲಿ ನಿರ್ಮಿಸಿರುವ ನೂತನ ಮೆಟ್ರೊ ಬೋಗಿಯನ್ನು ಅನಾವರಣಗೊಳಿಸಿದರು. ಮುಂಬಯಿ ಮೆಟ್ರೊ ರೈಲು ನಿಗಮಕ್ಕೆ ಬಿಇಎಂಎಲ್‌ 500 ಬೋಗಿಗಳನ್ನು ನಿರ್ಮಿಸಿಕೊಡಲಿದೆ. ಸುಮಾರು 19,000 ಕೋಟಿ ರೂ. ವೆಚ್ಚದ ಹಲವು ಅಭಿವೃದ್ಧಿ ಕಾಮಗಾರಿಗಳಿಗೂ ಪ್ರಧಾನಿ ಚಾಲನೆ ನೀಡಿದರು.

ಗಣೇಶನಿಗೆ ಪ್ರಧಾನಿ ವಿಶೇಷ ಪೂಜೆ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮುಂಬಯಿನ ವಿಲೆಪಾರ್ಲೆ ಪ್ರದೇಶದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವಿನಾಯಕನಿಗೆ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಿದರು. ಬೆಂಗಳೂರಿನಿಂದ ನೇರವಾಗಿ ಮುಂಬಯಿನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಅವರು ಲೋಕಮಾನ್ಯ ಸೇವಾ ಸಂಘ ಏರ್ಪಡಿಸಿದ್ದ ಗಣೇಶೋತ್ಸವ ವೇದಿಕೆಗೆ ತೆರಳಿ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಂದರ್ಶಕರ ಪುಸ್ತಕದಲ್ಲಿ ಸ್ವಾತಂತ್ರ್ಯ ಸೇನಾನಿ ಬಾಲಗಂಗಾಧರ್‌ ತಿಲಕರು ಪ್ರತಿಪಾದಿಸಿದ ಮೌಲ್ಯಗಳ ಕುರಿತು ಚುಟುಕು ಸಂದೇಶ ಬರೆದು ಗಮನ ಸೆಳೆದರು. ಬಾಲಗಂಗಾಧರ್‌ ತಿಲಕ್‌ ಹಾಗೂ ಮರಾಠಿ ಸಾಹಿತಿ ಪಿ.ಎಲ್‌. ದೇಶಪಾಂಡೆ ಅವರ ಪುತ್ಥಳಿಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ