ಆ್ಯಪ್ನಗರ

370ನೇ ವಿಧಿಗೆ ಸಂಬಂಧಿಸಿ ಸಕಾಲದಲ್ಲಿ ಸೂಕ್ತ ನಿರ್ಧಾರ

ಜಮ್ಮು-ಕಾಶ್ಮೀರ ಜನತೆಯ ಹಿತಾಸಕ್ತಿ ದೃಷ್ಟಿಯಿಂದ 370ನೇ ಮತ್ತು 35(ಎ) ವಿಧಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರಕಾರವು ಸೂಕ್ತ ನಿರ್ಧಾರ ಕೈಗೊಳ್ಳಲಿದೆ.

PTI 3 Aug 2019, 5:00 am
ಹೊಸದಿಲ್ಲಿ: ಜಮ್ಮು-ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದ 370ನೇ ಮತ್ತು 35(ಎ)ನೇ ವಿಧಿಗಳ ಬಗ್ಗೆ ಸರಕಾರ ಸಕಾಲದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಕಣಿವೆ ರಾಜ್ಯದ ಬಿಜೆಪಿ ಚುನಾವಣಾ ಉಸ್ತುವಾರಿ ಅವಿನಾಶ್‌ ರಾಯ್‌ ಖನ್ನಾ ತಿಳಿಸಿದ್ದಾರೆ.
Vijaya Karnataka Web khanna

''ಜಮ್ಮು-ಕಾಶ್ಮೀರ ಜನತೆಯ ಹಿತಾಸಕ್ತಿ ದೃಷ್ಟಿಯಿಂದ 370ನೇ ಮತ್ತು 35(ಎ) ವಿಧಿಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರಕಾರವು ಸೂಕ್ತ ನಿರ್ಧಾರ ಕೈಗೊಳ್ಳಲಿದೆ. ಕಾಶ್ಮೀರ ಕಣಿವೆಗೆ ವಿಶೇಷ ಸ್ಥಾನಮಾನ ಮತ್ತು ಅಲ್ಲಿನ ವಿಧಾನಸಭೆಗೆ ವಿಶೇಷ ಅಧಿಕಾರ ನೀಡುವ ಈ ವಿಧಿಗಳ ವಿಚಾರವನ್ನು ಕಾಲವೇ ನಿರ್ಧರಿಸಲಿದೆ,'' ಎಂದು ಖನ್ನಾ ಹೇಳಿದ್ದಾರೆ.
ಇದೇ ವೇಳೆ, ಪ್ರಸ್ತುತ ರಾಜ್ಯಪಾಲರ ಆಡಳಿತದಲ್ಲಿರುವ ಕಾಶ್ಮೀರ ಕಣಿವೆಯಲ್ಲಿ ಚುನಾವಣೆ ಘೋಷಿಸಿ ಮತದನ ನಡೆದರೆ, ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷರೂ ಆಗಿರುವ ಖನ್ನಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆ.15ರಂದು ಸ್ವಾತಂತ್ರ್ಯ ದಿನೋತ್ಸವದಂದು ಜಮ್ಮು-ಕಾಶ್ಮೀರದ ಎಲ್ಲಾ ಗ್ರಾಮ ಪಂಚಾಯಿತಿ ಕಚೇರಿಗಳಲ್ಲಿ ಬಿಜೆಪಿ ತಿರಂಗ ಹಾರಿಸಲು ನಿರ್ಧರಿಸಿದೆ. ರಾಜ್ಯದಲ್ಲಿ ರಾಷ್ಟ್ರೀಯತೆಯನ್ನು ಹಬ್ಬಿಸುವ ಸಲುವಾಗಿ ಪಕ್ಷ ಈ ನಿರ್ಧಾರ ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
ಗೌರವಧನ ಹೆಚ್ಚಳ: ಜಮ್ಮು-ಕಾಶ್ಮೀರದ ವಿಶೇಷ ಪೊಲೀಸ್‌ ಅಧಿಕಾರಿಗಳ ಮಾಸಿಕ ಗೌರವಧನವನ್ನು ಗರಿಷ್ಠ 6,000 ರೂ.ವರೆಗೂ ಹೆಚ್ಚಿಸಿ ಹೆಚ್ಚಿಸಿ ಕೇಂದ್ರ ಗೃಹ ಸಚಿವಾಲಯ ಆದೇಶ ಹೊರಡಿಸಿದೆ. 15 ವರ್ಷಕ್ಕೂ ಹೆಚ್ಚು ಸೇವಾವಧಿ ಪೂರೈಸಿದ 10,821 ವಿಶೇಷ ಪೊಲೀಸ್‌ ಅಧಿಕಾರಿಗಳು 18,000 ರೂ. ಪರಿಷ್ಕೃತ ಗೌರವಧನ ಪಡೆಯಲಿದ್ದಾರೆ. 10 ವರ್ಷ ಮತ್ತು 5 ವರ್ಷ ಸೇವಾವಧಿ ಪೂರೈಸಿದ ಅಧಿಕಾರಿಗಳುಕ್ರಮವಾಗಿ ಇನ್ನು ಮುಂದೆ 15,000 ರೂ. ಹಾಗೂ 12,000 ರೂ. ಗೌರವಧನವನ್ನು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಂತರಿಕ ಭದ್ರತೆಗಾಗಿ ನಿಯೋಜನೆ: ಜಮ್ಮು-ಕಾಶ್ಮೀರಕ್ಕೆ ಕಳೆದ ವಾರ 10,000 ಹೆಚ್ಚುವರಿ ಯೋಧರನ್ನು ನಿಯೋಜಿಸಿದ್ದ ಕೇಂದ್ರ ಸರಕಾರವು, ಗುರುವಾರ ಮತ್ತೆ 28,000 ಹೆಚ್ಚುವರಿ ಯೋಧರನ್ನು ನಿಯೋಜನೆ ಮಾಡಿದೆ. ''ರಾಜ್ಯದ ಆಂತರಿಕ ಭದ್ರತೆಗಾಗಿ ಇಷ್ಟು ಸಿಬ್ಬಂದಿ ಅಗತ್ಯವಿತ್ತು. ಭದ್ರತಾ ಪಡೆಗಳು ಹಾಗೂ ರಾಜ್ಯ ಪೊಲೀಸ್‌ ಇಲಾಖೆಯ ವರದಿ ಆಧರಿಸಿಯೇ ಹೆಚ್ಚುವರಿ ಯೋಧರನ್ನು ನಿಯೋಜನೆ ಮಾಡಲಾಗಿದೆ,'' ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟನೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ