ಆ್ಯಪ್ನಗರ

ತಲೆಗೂದಲು ಉದ್ದ ಬಿಟ್ಟಿದ್ದನ್ನು ತಾಯಿ ಆಕ್ಷೇಪಿಸಿದ್ದಕ್ಕೆ ಮಗ ನೇಣಿಗೆ ಶರಣು

ತಲೆಗೂದಲನ್ನು ನೀಟಾಗಿ ಕತ್ತರಿಸಿಕೊಂಡು ಮಗ ಸ್ಮಾರ್ಟ್ ಆಗಿ ಕಾಣಿಸಬೇಕೆಂಬ ತಾಯಿ ಅಪೇಕ್ಷೆ ತಪ್ಪೆ? ಅಥವಾ ಇಂದಿನ ಜಮಾನಾದಲ್ಲಿ ಮಕ್ಕಳು ಹೀಗೇ ಇರಬೇಕೆಂದು ಪೋಷಕರು ಅಪೇಕ್ಷಿಸುವುದೇ ತಪ್ಪೆ? ತಂದೆ ತಾಯಿಯರನ್ನು ಅನಾಥರನ್ನಾಗಿ ಮಾಡಿ ಸಾವಿಗೆ ಶರಣಾಗಿದ್ದು ಎಷ್ಟು ಸರಿ?

Vijaya Karnataka Web 20 Jan 2020, 1:50 pm
ಚೆನ್ನೈ : ತಲೆಗೂದಲು ಏಕೆ ಉದ್ದ ಬಿಟ್ಟಿದ್ದಿಯಾ ಎಂದು ತಾಯಿ ಆಕ್ಷೇಪಿಸಿದ್ದಕ್ಕೆ ನೊಂದ ಹದಿನಾರು ವರ್ಷದ ಮಗ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಚೆನ್ನೈನ ವಲಸರವಕ್ಕಂ ಎಂಬಲ್ಲಿ ಭಾನುವಾರ ನಡೆದಿದೆ.
Vijaya Karnataka Web image
ಈ ಸಾವು ನ್ಯಾಯವೆ?


ಹನ್ನೆರಡನೇ ತರಗತಿ ಓದುತ್ತಿದ್ದ ಶ್ರೀನಿವಾಸನ್ ಎಂಬ ವಿದ್ಯಾರ್ಥಿ ತನ್ನ ಮನೆಯ ಮಲಗುವ ಕೋಣೆಯಲ್ಲಿ, ಒಬ್ಬಂಟಿಯಾಗಿದ್ದಾಗ ನೇಣು ಹಾಕಿಕೊಂಡು ಇಹದ ಲೋಕಕ್ಕೆ ಗುಡ್ ಬೈ ಹೇಳಿದ್ದಾನೆ. ತಾನು ಸಾವಿಗೀಡಾಗುವುದಲ್ಲದೆ ತಂದೆ-ತಾಯಿಯರನ್ನು ದುಃಖದ ಮಡುವಿನಲ್ಲಿ ಕೆಡವಿದ್ದಾನೆ.

ಪೊಲೀಸರ ಪ್ರಕಾರ, ತನ್ನ ಕೇಶರಾಶಿಯ ಮೇಲೆ ಅಪಾರ ಅಭಿಮಾನ ಹೊಂದಿದ್ದ ಶ್ರೀನಿವಾಸನ್ ಕಳೆದ 3 ತಿಂಗಳಿನಿಂದ ಕಟಿಂಗ್ ಮಾಡಿಸಿರಲಿಲ್ಲ. ಆತನ ತಾಯಿ, ಆತನಿಗೆ ಸಾಕಷ್ಟು ತಿಳಿಹೇಳಲು ಯತ್ನಿಸಿದ್ದರೂ ಆತ ಕಿವಿಗೊಟ್ಟಿರಲಿಲ್ಲ, ತಾಯಿಯ ಮಾತಿಗೆ ಮನ್ನಣೆ ನೀಡುತ್ತಿರಲಿಲ್ಲ.

ಇದು ಮನೆಯಲ್ಲಿ ಸಾಕಷ್ಟು ಜಟಾಪಟಿಗೂ ಕಾರಣವಾಗಿತ್ತು. ಶ್ರೀನಿವಾಸನ್ ನ ತಂದೆ ಮಣಿ ಇಬ್ಬರಿಗೂ ಸಮಾಧಾನ ಮಾಡಲು ಯತ್ನಿಸಿದ್ದರು. ತಾಯಿಯೂ ಬಗ್ಗಲಿಲ್ಲ, ಮಗನೂ ಬಗ್ಗಲಿಲ್ಲ. ಇದು ಅತಿರೇಕಕ್ಕೆ ಹೋಗಿ ಭಾನುವಾರ ಮತ್ತೆ ತಾಯಿ ಮಗನ ನಡುವೆ ವಾಗ್ಯುದ್ಧ ನಡೆದಿದೆ.

ಇದರಿಂದ ಮತ್ತಷ್ಟು ರೊಚ್ಚಿಗೆದ್ದ ಮಗ ಶ್ರೀನಿವಾಸನ್ ಸಂಜೆಯ ವೇಳೆ ಒಬ್ಬನೇ ಇದ್ದಾಗ ಮಲಗುವ ಕೋಣೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಆತನ ದೇಹವನ್ನು ಸರಕಾರಿ ಕಿಲ್ಪಾಕ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ವಲಸರವಕ್ಕಂ ಪೊಲೀಸರು ಅಸಹಜ ಸಾವಿನ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ತಲೆಗೂದಲನ್ನು ನೀಟಾಗಿ ಕತ್ತರಿಸಿಕೊಂಡು ಮಗ ಸ್ಮಾರ್ಟ್ ಆಗಿ ಕಾಣಿಸಬೇಕೆಂಬ ತಾಯಿ ಅಪೇಕ್ಷೆ ತಪ್ಪೆ? ಅಥವಾ ಇಂದಿನ ಜಮಾನಾದಲ್ಲಿ ಮಕ್ಕಳು ಹೀಗೇ ಇರಬೇಕೆಂದು ಪೋಷಕರು ಅಪೇಕ್ಷಿಸುವುದೇ ತಪ್ಪೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ