ಆ್ಯಪ್ನಗರ

ವೇಶ್ಯಾವಾಟಿಕೆ ವಿರೋಧಿಸಿದ್ದಕ್ಕೆ 70 ವರ್ಷದ ವೃದ್ಧನನ್ನು ಹೊಡೆದು ಕೊಂದ ದುರುಳರು

ದುಷ್ಕರ್ಮಿಗಳು ವೃದ್ಧನನ್ನು ತೀವ್ರವಾಗಿ ಥಳಿಸಿ ರಸ್ತೆಯಲ್ಲಿ ಎಸೆದು ಪರಾರಿಯಾದರು. ಬಳಿಕ ಗಾಯಾಳು ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದರೂ ಸ್ವಲ್ಪ ಹೊತ್ತಿನಲ್ಲೇ ಕೊನೆಯುಸಿರೆಳೆದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Vijaya Karnataka Web 11 Mar 2019, 1:10 pm
ಮಾಲ್ಡಾ: ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಪಬ್ನಾಪಾರದಲ್ಲಿ ವೇಶ್ಯಾವಾಟಿಕೆ ವಿರುದ್ಧ ಪ್ರತಿಭಟಿಸಿದ್ದಕ್ಕಾಗಿ 70 ವರ್ಷದ ವೃದ್ಧ ದುಖು ಹಲ್ದಾರ್ ಎಂಬಾತನನ್ನು ಗುಂಪೊಂದು ಬಡಿಗೆ, ಸರಳುಗಳಿಂದ ಹೊಡೆದು ಸಾಯಿಸಿದ ಘಟನೆ ಭಾನುವಾರ ನಡೆದಿದೆ.
Vijaya Karnataka Web Crime


ದುಷ್ಕರ್ಮಿಗಳು ವೃದ್ಧನನ್ನು ತೀವ್ರವಾಗಿ ಥಳಿಸಿ ರಸ್ತೆಯಲ್ಲಿ ಎಸೆದು ಪರಾರಿಯಾದರು. ಬಳಿಕ ಗಾಯಾಳು ವೃದ್ಧನನ್ನು ಆಸ್ಪತ್ರೆಗೆ ದಾಖಲಿಸಿದರೂ ಸ್ವಲ್ಪ ಹೊತ್ತಿನಲ್ಲೇ ಕೊನೆಯುಸಿರೆಳೆದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ವ್ಯಾಪಾರಿ ಶ್ಯಾಮ್ ಹಲ್ದಾರ್‌ ಮತ್ತು ಆತನ ಪತ್ನಿ ಚಂದ್ರಿಕಾ ಹಾಗೂ ಗೆಳೆಯ ಮಂತು ಹಲ್ದಾರ್‌ ಪಬ್ನಾಪಾರದ ಮನೆಯೊಂದರಲ್ಲಿ ವೇಶ್ಯಾವಟಿಕೆ ಅಡ್ಡೆ ನಡೆಸುತ್ತಿದ್ದರು. ಅಪರಿಚಿತ ಯುವಕರು ಸದಾ ಈ ಮನೆಗೆ ಬಂದು ಹೋಗುತ್ತಿದ್ದರು ಎಂದು ಸ್ಥಳೀಯರು ಹೇಳಿದರು.

ಇನ್ನೊಬ್ಬ ವ್ಯಾಪಾರಿ ದುಖು ಹಲ್ದಾರ್‌ ಈ ಕೃತ್ಯಗಳನ್ನು ಪ್ರತಿಭಟಿಸಿದಾಗ ಮೂವರೂ ಆರೋಪಿಗಳು ಒಟ್ಟಾಗಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು. ರಕ್ತದ ಮಡುವಿನಲ್ಲಿ ಬಿದ್ದಿದ್ದ ದುಖುವನ್ನು ನೆರೆಹೊರೆಯವರು ಮಾಲ್ಡಾ ಮೆಡಿಕಲ್‌ ಕಾಲೇಜ್ ಆಸ್ಪತ್ರೆಗೆ ದಾಖಲಿಸಿದರು. ಬಳಿಕ ಅಲ್ಲಿಂದ ಕೋಲ್ಕತ ಆಸ್ಪತ್ರೆಗೆ ಒಯ್ಯಲು ಸೂಚಿಸಲಾಯಿತು. ಆದರೆ ಅಷ್ಟು ಹೊತ್ತಿಗೆ ದುಖು ಮೃತಪಟ್ಟಿದ್ದ ಎಂದು ಪೊಲೀಸರು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ