ಆ್ಯಪ್ನಗರ

ಜಿಎಸ್‍ಟಿ ಎಫೆಕ್ಟ್: ಪಶ್ಚಿಮ ಬಂಗಾಳದಲ್ಲಿ ಕಹಿಯಾದ 'ಸಿಹಿ'

ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಯಿಂದ ಪಶ್ಚಿಮ ಬಂಗಾಳದಲ್ಲಿ ಸಿಹಿತಿನಿಸುಗಳ ಮಾರಾಟಕ್ಕೆ ಭಾರಿ ಹೊಡೆತ ಬಿದ್ದಿದೆ. ಈ ಸಂಬಂಧ ಸಿಹಿ ತಿಂಡಿ ಮಾರಾಟಗಾರರ ಹಾಗೂ ತಯಾರಕರ ಸಂಘ ರಾಜ್ಯವ್ಯಾಪಿ ಬಂದ‌ಗೆ ಕರೆಕೊಟ್ಟಿದೆ. ಆಗಸ್ಟ್ 21ರಂದು ಪಶ್ಚಿಮ ಬಂಗಾಳದಲ್ಲಿ ಯಾವುದೇ ಸಿಹಿ ತಿಂಡಿ ಸಿಗಲ್ಲ. ಯಾಕೆಂದರೆ ಅಂದು ಸ್ವೀಟ್ ಶಾಪ್‌ಗಳು ಸಂಪೂರ್ಣ ಬಂದ್ ಆಗಲಿವೆ.

Ei Samay 12 Aug 2017, 9:09 pm
ಕೋಲ್ಕತ್ತಾ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಯಿಂದ ಪಶ್ಚಿಮ ಬಂಗಾಳದಲ್ಲಿ ಸಿಹಿತಿನಿಸುಗಳ ಮಾರಾಟಕ್ಕೆ ಭಾರಿ ಹೊಡೆತ ಬಿದ್ದಿದೆ. ಈ ಸಂಬಂಧ ಸಿಹಿ ತಿಂಡಿ ಮಾರಾಟಗಾರರ ಹಾಗೂ ತಯಾರಕರ ಸಂಘ ರಾಜ್ಯವ್ಯಾಪಿ ಬಂದ‌ಗೆ ಕರೆಕೊಟ್ಟಿದೆ. ಆಗಸ್ಟ್ 21ರಂದು ಪಶ್ಚಿಮ ಬಂಗಾಳದಲ್ಲಿ ಯಾವುದೇ ಸಿಹಿ ತಿಂಡಿ ಸಿಗಲ್ಲ. ಯಾಕೆಂದರೆ ಅಂದು ಸ್ವೀಟ್ ಶಾಪ್‌ಗಳು ಸಂಪೂರ್ಣ ಬಂದ್ ಆಗಲಿವೆ.
Vijaya Karnataka Web gst sours the sweets of bengal association calls for bandh
ಜಿಎಸ್‍ಟಿ ಎಫೆಕ್ಟ್: ಪಶ್ಚಿಮ ಬಂಗಾಳದಲ್ಲಿ ಕಹಿಯಾದ 'ಸಿಹಿ'


ಹೊಸ ತೆರಿಗೆ ಪದ್ಧತಿಯಿಂದ ಸಿಹಿ ತಿಂಡಿಗಳ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದೆ. 'ಕೆಡುವಂತಹ ಸಿಹಿ ತಿನಿಸುಗಳಾದ ಸಂದೇಶ್ ಮತ್ತು ರಸಗುಲ್ಲಗೆ ಶೇ.5 ತೆರಿಗೆ ವಿಧಿಸಲಾಗಿದೆ. ಬಂಗಾಳಿ ಸಿಹಿ ತಿನಿಸುಗಳೆಲ್ಲಾ ಕೆಡುವಂತಹವೇ. ಯಾಕೆಂದರೆ ಬಹುತೇಕ ಸಿಹಿತಿನಿಸುಗಳನ್ನು ಕಡಲೆಹಿಟ್ಟಿನಲ್ಲಿ ತಯಾರಿಸಲಾಗುತ್ತದೆ. ಕೆಡುವಂತಹ ಸಿಹಿ ತಿಂಡಿಗಳನ್ನು ಜಿಎಸ್‌ಟಿಯಡಿ ತರಬೇಡಿ ಎಂದು ವಿನಂತಿಸಿಕೊಂಡಿದ್ದೇವೆ. ನಮ್ಮ ಹಣಕಾಸು ಸಚಿವ ಅಮಿತ್ ಮಿಶ್ರಾ ಅವರು ಸಿಹಿತಿಂಡಿಗಳ ಮೇಲಿನ ತೆರಿಗೆಯನ್ನು ಶೇ.12ರಿಂದ ಶೇ.5ಕ್ಕೆ ಇಳಿಸಿದ್ದಾರೆ' ಎಂದಿದ್ದಾರೆ ಪಶ್ಚಿಮ ಬಂಗಾಳದ ಸಿಹಿತಿಂಡಿ ಮಾರಾಟಗಾರರ ಸಂಘದ ಅಧ್ಯಕ್ಷ ರಬೀಂದ್ರಕುಮಾರ್ ಪಾಲ್.

ಈ ಹಿಂದೆ ವ್ಯಾಟ್ ಇದ್ದಾಗ ಸಿಹಿತಿಂಡಿಗಳ ವಿರದ್ಧ ತೆರಿಗೆ ಬೇಡ ಎಂದು ಪ್ರತಿಭಟಿಸಿದ್ದ ಹಿನ್ನೆಲೆಯಲ್ಲಿ ಅದನ್ನು ತೆಗೆದಿದ್ದರು. ಈ ಸಲವೂ ಸಿಹಿತಿಂಡಿಗಳನ್ನು ಸರಕಾರ ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗೆ ತರುತ್ತದೆ ಎಂಬ ನಂಬಿಕೆ ಇದೆ ಎಂದಿದ್ದಾರೆ ಪಾಲ್.

ಆಗಸ್ಟ್ 21ರಂದು ಬಂದ್ ಜತೆಗೆ ಆಗಸ್ಟ್ 24 ರಿಂದ 26ರವರೆಗೂ ಪ್ರತಿಭಟನೆಯನ್ನೂ ನಡೆಸಲಿದೆ ಸಿಹಿತಿಂಡಿ ತಯಾರಕರ ಹಾಗೂ ಮಾರಾಟಗಾರರ ಸಂಘಟನೆ. 'ಗ್ರಾಹಕರು ಈಗ ಹಿಂದಿನಂತೆ ಸಿಹಿ ತಿನಿಸುಗಳನ್ನು ಖರೀದಿಸುತ್ತಿಲ್ಲ. ಹಾಗಾಗಿ ವಿಧಿಯಿಲ್ಲದೆ ಬಂದ್‌ ಮಾಡಲೇಬೇಕಾಗಿದೆ' ಎನ್ನುತ್ತಾರೆ ಕೋಲ್ಕತ್ತಾದ ಸಿಹಿತಿಂಡಿ ಮಾರಾಟಗಾರ ಧಿಮನ್ ದಾಸ್.

ಕೃಪೆ: EiSamay

GST ‘sours’ the sweets of Bengal! Association calls for bandh

Sweet Sellers of West Bengal have called for a statewide bandh against GST. The West Bengal Sweet Sellers Association has informed that on 21st august all sweetshops will be closed.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ