ಅಹಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಮಂತ್ರಿ ಅಭ್ಯರ್ಥಿ ಈಸುದನ್ ಗಧ್ವಿ ಅವರು ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿಯ ವಿರುದ್ಧ 18 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದಾರೆ. ತನ್ನ ಸಿಎಂ ಅಭ್ಯರ್ಥಿ ಸೋಲುವುದರೊಂದಿಗೆ ಗುಜರಾತ್ನಲ್ಲಿ ಆಪ್ ಭಾರೀ ಮುಖಭಂಗ ಅನುಭವಿಸಿದೆ. ಖಂಭಾಲಿಯಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗಧ್ವಿ ಅವರು ಬಿಜೆಪಿಯ ಮುಲುಭಾಯ್ ಬೇರಾ ಅವರ ವಿರುದ್ಧ ಸೋಲು ಕಂಡಿದ್ದಾರೆ. ಬಿಜೆಪಿ ಅಭ್ಯರ್ಥಿ ಇಲ್ಲಿ 77,305 ಮತಗಳನ್ನು ಪಡೆದು ಗೆದ್ದಿದ್ದರೆ, ಈಸುದನ್ ಗಧ್ವಿ ಅವರು 58,467 ಮತ ಗಳಿಸಿ ಎರಡನೇ ಸ್ಥಾನ ಪಡೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಹಾಗೂ ಹಾಲಿ ಶಾಸಕಿ ವಿಕ್ರಂಭಾಯಿ ಮಾದಂ ಅವರು 44,526 ಮತ ಗಳಿಸಿ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.
ಈ ಕ್ಷೇತ್ರದಲ್ಲಿ 2007 ಮತ್ತು 2012ರಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ, 2014ರಲ್ಲಿ ನಡೆದ ಉಪ ಚುನಾವಣೆ ಮತ್ತು 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಪಡೆದಿತ್ತು. ಇದೀಗ ಮತ್ತೆ ಖಂಬಾಲಿಯಾದಲ್ಲಿ ಕಮಲ ಅರಳಿದ್ದು, ಬಿಜೆಪಿ ಅಭ್ಯರ್ಥಿ ವಿಜಯದ ಪತಾಕೆ ಹರಿಸಿದ್ದಾರೆ. ಈಸುದನ್ ಗಧ್ವಿ ಅವರು ಸೋಲು ಅನುಭವಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿಸಲು ಆಮ್ ಆದ್ಮಿ ಪಕ್ಷ ಜನಾಭಿಪ್ರಾಯ ಪಡೆದಿತ್ತು. ಅದರಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿದ್ದ ಪತ್ರಕರ್ತ ಹಾಗೂ ರಾಜಕಾರಣಿ ಈಸುದನ್ ಗಧ್ವಿ ಅವರನ್ನು ಗುಜರಾತ್ ಸಿಎಂ ಅಭ್ಯರ್ಥಿಯನ್ನಾಗಿ ಎಎಪಿಯ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ಆದರೆ, ಈಸುದನ್ ಗಧ್ವಿ ಅವರು ಚುನಾವಣೆಯಲ್ಲಿ ತಾವು ಮತ್ತು ತಮ್ಮ ಪಕ್ಷವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ.
ಟಿವಿ ಸುದ್ದಿವಾಹಿನಿಯ ನಿರೂಪಕರಾಗಿದ್ದ ಗಧ್ವಿ ಖಂಬಾಲಿಯಾದಲ್ಲಿಯೇ ಹುಟ್ಟಿ ಬೆಳೆದವರು. ಕಳೆದ ವರ್ಷ ಜೂನ್ನಲ್ಲಿ ರಾಜಕೀಯ ಪ್ರವೇಶಿಸಿದ್ದರು. ಗುಜರಾತ್ನಲ್ಲಿ 27 ವರ್ಷಗಳ ಬಿಜೆಪಿ ಆಡಳಿತವನ್ನು ಬದಲಾಯಿಸುವ ಇರಾದೆಯೊಂದಿಗೆ ಗಧ್ವಿ ಎಎಪಿ ಸೇರಿದ್ದರು. ಅದಾದ ಬಳಿಕ ಗಧ್ವಿ ಅವರನ್ನು ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈ ನವೆಂಬರ್ನಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ಗುಜರಾತ್ ಸಿಎಂ ಅಭ್ಯರ್ಥಿ ಎಂದು ಗಧ್ವಿ ಅವರ ಹೆಸರನ್ನು ಘೋಷಿಸಿದ್ದರು.
ಅಧಿಕಾರದ ಕನವರಿಕೆಯಲ್ಲಿದ್ದ ಆಪ್ಗೆ ಭಾರೀ ನಿರಾಸೆ!
ದಿಲ್ಲಿ ಹಾಗೂ ಪಂಜಾಬ್ನಲ್ಲಿ ಗೆದ್ದು ಬೀಗಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಗುಜರಾತ್ನಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯಲು ಪ್ರಯತ್ನಿಸಿತ್ತು. ಪಂಜಾಬ್ನಲ್ಲಿ ಮಾಡಿದ್ದ ಮ್ಯಾಜಿಕ್ ಅನ್ನು ಗುಜರಾತ್ನಲ್ಲಿ ಪುನರಾವರ್ತಿಸಲು ಮುಂದಾಗಿದ್ದ ಆಪ್ ಮೋದಿ - ಶಾ ಜೋಡಿ ಮುಂದೆ ಮಂಕಾಗಿದೆ. ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ನೀಡುತ್ತೆ ಎನ್ನಲಾಗಿದ್ದ ಆಪ್ ಕೇವಲ 5 ಸ್ಥಾನಗಳಿಗೆ ಸೀಮಿತವಾಗಿದೆ. ಗುಜರಾತ್ನಲ್ಲಿ ದಾಖಲೆಯ ಗೆಲುವು ಸಾಧಿಸಿರುವ ಬಿಜೆಪಿ 156 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ.
ಈ ಕ್ಷೇತ್ರದಲ್ಲಿ 2007 ಮತ್ತು 2012ರಲ್ಲಿ ಬಿಜೆಪಿ ಜಯ ಸಾಧಿಸಿತ್ತು. ಆದರೆ, 2014ರಲ್ಲಿ ನಡೆದ ಉಪ ಚುನಾವಣೆ ಮತ್ತು 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಪಡೆದಿತ್ತು. ಇದೀಗ ಮತ್ತೆ ಖಂಬಾಲಿಯಾದಲ್ಲಿ ಕಮಲ ಅರಳಿದ್ದು, ಬಿಜೆಪಿ ಅಭ್ಯರ್ಥಿ ವಿಜಯದ ಪತಾಕೆ ಹರಿಸಿದ್ದಾರೆ. ಈಸುದನ್ ಗಧ್ವಿ ಅವರು ಸೋಲು ಅನುಭವಿಸಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿಯಾಗಿಸಲು ಆಮ್ ಆದ್ಮಿ ಪಕ್ಷ ಜನಾಭಿಪ್ರಾಯ ಪಡೆದಿತ್ತು. ಅದರಲ್ಲಿ ಅತಿ ಹೆಚ್ಚು ಮತಗಳನ್ನು ಗಳಿಸಿದ್ದ ಪತ್ರಕರ್ತ ಹಾಗೂ ರಾಜಕಾರಣಿ ಈಸುದನ್ ಗಧ್ವಿ ಅವರನ್ನು ಗುಜರಾತ್ ಸಿಎಂ ಅಭ್ಯರ್ಥಿಯನ್ನಾಗಿ ಎಎಪಿಯ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು. ಆದರೆ, ಈಸುದನ್ ಗಧ್ವಿ ಅವರು ಚುನಾವಣೆಯಲ್ಲಿ ತಾವು ಮತ್ತು ತಮ್ಮ ಪಕ್ಷವನ್ನು ಗೆಲ್ಲಿಸುವಲ್ಲಿ ವಿಫಲರಾಗಿದ್ದಾರೆ.
ಟಿವಿ ಸುದ್ದಿವಾಹಿನಿಯ ನಿರೂಪಕರಾಗಿದ್ದ ಗಧ್ವಿ ಖಂಬಾಲಿಯಾದಲ್ಲಿಯೇ ಹುಟ್ಟಿ ಬೆಳೆದವರು. ಕಳೆದ ವರ್ಷ ಜೂನ್ನಲ್ಲಿ ರಾಜಕೀಯ ಪ್ರವೇಶಿಸಿದ್ದರು. ಗುಜರಾತ್ನಲ್ಲಿ 27 ವರ್ಷಗಳ ಬಿಜೆಪಿ ಆಡಳಿತವನ್ನು ಬದಲಾಯಿಸುವ ಇರಾದೆಯೊಂದಿಗೆ ಗಧ್ವಿ ಎಎಪಿ ಸೇರಿದ್ದರು. ಅದಾದ ಬಳಿಕ ಗಧ್ವಿ ಅವರನ್ನು ಪಕ್ಷದ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಲಾಗಿತ್ತು. ಈ ನವೆಂಬರ್ನಲ್ಲಿ ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ಆಮ್ ಆದ್ಮಿ ಪಕ್ಷದ ಗುಜರಾತ್ ಸಿಎಂ ಅಭ್ಯರ್ಥಿ ಎಂದು ಗಧ್ವಿ ಅವರ ಹೆಸರನ್ನು ಘೋಷಿಸಿದ್ದರು.
ಅಧಿಕಾರದ ಕನವರಿಕೆಯಲ್ಲಿದ್ದ ಆಪ್ಗೆ ಭಾರೀ ನಿರಾಸೆ!
ದಿಲ್ಲಿ ಹಾಗೂ ಪಂಜಾಬ್ನಲ್ಲಿ ಗೆದ್ದು ಬೀಗಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಗುಜರಾತ್ನಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯಲು ಪ್ರಯತ್ನಿಸಿತ್ತು. ಪಂಜಾಬ್ನಲ್ಲಿ ಮಾಡಿದ್ದ ಮ್ಯಾಜಿಕ್ ಅನ್ನು ಗುಜರಾತ್ನಲ್ಲಿ ಪುನರಾವರ್ತಿಸಲು ಮುಂದಾಗಿದ್ದ ಆಪ್ ಮೋದಿ - ಶಾ ಜೋಡಿ ಮುಂದೆ ಮಂಕಾಗಿದೆ. ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಸ್ಪರ್ಧೆ ನೀಡುತ್ತೆ ಎನ್ನಲಾಗಿದ್ದ ಆಪ್ ಕೇವಲ 5 ಸ್ಥಾನಗಳಿಗೆ ಸೀಮಿತವಾಗಿದೆ. ಗುಜರಾತ್ನಲ್ಲಿ ದಾಖಲೆಯ ಗೆಲುವು ಸಾಧಿಸಿರುವ ಬಿಜೆಪಿ 156 ಕ್ಷೇತ್ರಗಳಲ್ಲಿ ವಿಜಯ ಸಾಧಿಸಿದೆ.