ಆ್ಯಪ್ನಗರ

9 ರೂ. ಆಸೆಗಾಗಿ 15 ಲಕ್ಷ ರೂ. ಕಳೆದುಕೊಂಡ ಬಸ್‌ ಕಂಡಕ್ಟರ್‌!

ಚಿಖ್ಲಿ ಮತ್ತು ಅಂಬಾಚ್‌ ಗ್ರಾಮದ ನಡುವೆ ಸಂಚರಿಸುವ ಸರಕಾರಿ ಬಸ್‌ನಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಕಾಂತ್‌ ಪಟೇಲ್‌ ಎಂಬುವವರು 2003ರ ಜುಲೈ 5ರಂದು ಪ್ರಯಾಣಿಕರೊಬ್ಬರಿಂದ 9 ರೂ. ಪಡೆದು, ಟಿಕೆಟ್‌ ನೀಡಿರಲಿಲ್ಲ.

PTI 30 Jul 2019, 5:00 am
ಅಹಮದಾಬಾದ್‌: ಗುಜರಾತ್‌ ಸರಕಾರಿ ಸಾರಿಗೆ ಸಂಸ್ಥೆಯ ನಿರ್ವಾಹಕರೊಬ್ಬರು ಕೇವಲ 9 ರೂಪಾಯಿ ಆಸೆಗಾಗಿ ಸಂಬಳದಲ್ಲಿ ಬರಬೇಕಾಗಿದ್ದ ಸುಮಾರು 15 ಲಕ್ಷ ರೂ. ಕಳೆದುಕೊಂಡಿದ್ದಾರೆ! ಚಿಖ್ಲಿ ಮತ್ತು ಅಂಬಾಚ್‌ ಗ್ರಾಮದ ನಡುವೆ ಸಂಚರಿಸುವ ಸರಕಾರಿ ಬಸ್‌ನಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದ ಚಂದ್ರಕಾಂತ್‌ ಪಟೇಲ್‌ ಎಂಬುವವರು 2003ರ ಜುಲೈ 5ರಂದು ಪ್ರಯಾಣಿಕರೊಬ್ಬರಿಂದ 9 ರೂ. ಪಡೆದು, ಟಿಕೆಟ್‌ ನೀಡಿರಲಿಲ್ಲ. ಮಾರ್ಗಮಧ್ಯೆ ನಿರೀಕ್ಷಕರ ತಪಾಸಣೆ ವೇಳೆ ಟಿಕೆಟ್‌ ಇಲ್ಲದೆ ಸಿಕ್ಕಿಬಿದ್ದ ಪ್ರಯಾಣಿಕ ದುಡ್ಡು ಕೊಟ್ಟರೂ ಟಿಕೆಟ್‌ ನೀಡಲಿಲ್ಲ ಎಂದು ಹೇಳಿಕೆ ನೀಡಿದ್ದ. ಪಟೇಲ್‌ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿತ್ತು. ವಿಚಾರಣೆ ನಂತರ ಪಟೇಲ್‌ ತಪ್ಪಿತಸ್ಥರೆಂದು ಸಾಬೀತಾಗಿತ್ತು. ಅವರ ಸಂಬಳವನ್ನು ಎರಡು ಪಟ್ಟು ಇಳಿಕೆ ಮಾಡಿದ್ದಲ್ಲದೆ, ಇಡೀ ಸೇವಾವಧಿ ನಿಶ್ಚಿತ ವೇತನ ನೀಡಬೇಕೆಂದು ಆದೇಶಿಸಲಾಯಿತು. ಇದನ್ನು ಪ್ರಶ್ನಿಸಿ ಪಟೇಲ್‌ ಹೈಕೋರ್ಟ್‌ ಮೆಟ್ಟಿಲೇರಿದರೂ ಪ್ರಯೋಜನವಾಗಿಲ್ಲ. ''ಕ್ಷುಲ್ಲಕ 9 ರೂ. ಪ್ರಕರಣಕ್ಕಾಗಿ ಇಂತಹ ಶಿಕ್ಷೆ ತೀರಾ ದೊಡ್ಡದು. ಇನ್ನೂ 32 ವರ್ಷಗಳ ಸೇವಾವಧಿ ಬಾಕಿಯಿದ್ದು, ಸಂಬಳ ಕಡಿತಗೊಂಡರೆ 15 ಲಕ್ಷ ನಷ್ಟವಾಗುತ್ತದೆ,'' ಎಂದು ಆರೋಪಿ ಪರ ವಕೀಲರು ವಾದಿಸಿದ್ದರು. ಇದಕ್ಕೂ ಮುನ್ನ 35 ಬಾರಿ ಇದೇ ರೀತಿ ತಪ್ಪೆಸಗಿದರೂ ಶಿಕ್ಷೆ ವಿಧಿಸದೆ ಎಚ್ಚರಿಕೆ ನೀಡಲಾಗಿತ್ತು. ಇದೇ ಚಾಳಿ ಮುಂದುವರಿದಿರುವ ಹಿನ್ನೆಲೆಯಲ್ಲಿ ಶಿಕ್ಷೆ ಎತ್ತಿಹಿಡಿಯಬೇಕೆಂದು ಸಾರಿಗೆ ಇಲಾಖೆ ವಕೀಲರು ಒತ್ತಾಯಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ