ಆ್ಯಪ್ನಗರ

Muslim Women in Elections: ಚುನಾವಣೆಯಲ್ಲಿ ಮಹಿಳೆಯರ ಸ್ಪರ್ಧೆ ಧರ್ಮವನ್ನು ದುರ್ಬಲಗೊಳಿಸುತ್ತದೆ: ಗುಜರಾತ್ ಮೌಲ್ವಿ

Muslim Women in Elections: ಮುಸ್ಲಿಂ ಮಹಿಳೆಯರು ಚುನಾವಣೆಗಳಲ್ಲಿ ಸ್ಪರ್ಧಿಸುವುದು ಇಸ್ಲಾಂ ಧರ್ಮವನ್ನು ದುರ್ಬಲಗೊಳಿಸುತ್ತದೆ ಎಂದಿರುವ ಗುಜರಾತ್ ಜಾಮಾ ಮಸೀದಿ ಮೌಲ್ವಿ ಶಬ್ಬೀರ್ ಅಹ್ಮದ್ ಸಿದ್ದಿಕಿ, ಮಹಿಳೆಯರಿಗೆ ಟಿಕೆಟ್ ನೀಡುವವರು ಇಸ್ಲಾಂಗೆ ವಿರುದ್ಧ ಎಂದು ಕಿಡಿಕಾರಿದ್ದಾರೆ.

Authored byಅಮಿತ್ ಎಂ.ಎಸ್ | Vijaya Karnataka Web 4 Dec 2022, 9:27 pm

ಹೈಲೈಟ್ಸ್‌:

  • ಚುನಾವಣೆಗಳಲ್ಲಿ ಮುಸ್ಲಿಂ ಮಹಿಳೆಯರು ಸ್ಪರ್ಧಿಸುವುದಕ್ಕೆ ಮೌಲ್ವಿ ವಿರೋಧ
  • ಮುಸ್ಲಿಂ ಮಹಿಳೆಯರ ಸ್ಪರ್ಧೆ ಇಸ್ಲಾಂ ಧರ್ಮವನ್ನು ದುರ್ಬಲಗೊಳಿಸುತ್ತದೆ
  • ಎಲ್ಲರ ಮುಂದೆ ಬರಲು ಶುರುಮಾಡಿದರೆ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web Muslim women
ಅಹಮದಾಬಾದ್: ಮುಸ್ಲಿಂ ಮಹಿಳೆಯರಿಗೆ ಚುನಾವಣೆಗಳಲ್ಲಿ ಸ್ಪರ್ಧಿಸಲು ಟಿಕೆಟ್ ನೀಡುವವರು ಇಸ್ಲಾಂಗೆ ವಿರುದ್ಧವಾಗಿದ್ದಾರೆ ಮತ್ತು ಅದು ಧರ್ಮವನ್ನು ದುರ್ಬಲಗೊಳಿಸುತ್ತದೆ ಎಂದು ಅಹಮದಾಬಾದ್‌ನ ಜಾಮಾ ಮಸೀದಿಯ ಮುಖ್ಯ ಮೌಲ್ವಿ ಭಾನುವಾರ ಹೇಳಿದ್ದಾರೆ. ಗುಜರಾತ್ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನ ನಡೆಯಲಿರುವ ಒಂದು ದಿನದ ಮುನ್ನ ಅವರು ನೀಡಿರುವ ಹೇಳಿಕೆ ಚರ್ಚೆಗೆ ಗ್ರಾಸವಾಗಿದೆ.
"ನೀವು ಇಸ್ಲಾಂ ಕುರಿತು ಮಾತನಾಡುವುದಾದರೆ, ಈ ಧರ್ಮದಲ್ಲಿ ನಮಾಜ್‌ಗಿಂತಲೂ ಮುಖ್ಯವಾಗಿರುವುದು ಇನ್ಯಾವುದೂ ಇಲ್ಲ. ಇಲ್ಲಿ ಯಾವುದಾದರೂ ಮಹಿಳೆ ನಮಾಜ್ ಓದುವುದನ್ನು ನೀವು ನೋಡಿದ್ದೀರಾ? ಇಸ್ಲಾಂನಲ್ಲಿ ಮಹಿಳೆಯರು ಎಲ್ಲರ ಮುಂದೆ ಬರುವುದು ತೊಂದರೆ ಇಲ್ಲ ಎಂತಾದರೆ, ಅವರು ಹಾಗೆ ಮಾಡುವುದನ್ನು ಮತ್ತೆ ನಿಲ್ಲಿಸುವುದಿಲ್ಲ" ಎಂದು ಮೌಲ್ವಿ ಶಬ್ಬೀರ್ ಅಹ್ಮದ್ ಸಿದ್ದಿಕಿ ಹೇಳಿದ್ದಾರೆ.
Muslim Marriage: ಮುಸ್ಲಿಮರಂತೆ ಹಿಂದೂಗಳೂ ಚಿಕ್ಕ ವಯಸ್ಸಿಗೇ ಮದುವೆಯಾಗಲಿ: ಎಐಯುಡಿಎಫ್ ಮುಖ್ಯಸ್ಥನ ಸಲಹೆ

"ನಮಾಜ್ ಮಾಡುವುದಕ್ಕಾಗಿ ಮಸೀದಿಗೆ ಬರದಂತೆ ಮಹಿಳೆಯರನ್ನು ತಡೆಯಲಾಗಿದೆ. ಏಕೆಂದರೆ ಇಸ್ಲಾಂನಲ್ಲಿ ಮಹಿಳೆಯರಿಗೆ ನಿರ್ದಿಷ್ಟ ಸ್ಥಾನವಿದೆ. ಹೀಗಾಗಿ, ಮುಸ್ಲಿಂ ಮಹಿಳೆಯರಿಗೆ ಚುನಾವಣೆಯಲ್ಲಿ ಟಿಕೆಟ್ ನೀಡಿರುವವರು ಇಸ್ಲಾಂ ವಿರುದ್ಧ ಬಂಡಾಯವೆದ್ದಿದ್ದಾರೆ ಎಂದರ್ಥ" ಎಂದು ಶಾಹಿ ಇಮಾಮ್ ಹೇಳಿದ್ದಾರೆ.


"ನೀವು ಮಹಿಳೆಯರನ್ನು ಸ್ಪರ್ಧೆಗೆ ಇಳಿಸುತ್ತಿದ್ದೀರಲ್ಲ, ಹಾಗಾದರೆ ಇಲ್ಲಿ ಯಾವುದೇ ಪುರುಷರು ಉಳಿದಿಲ್ಲವೇ? ಇದು ನಮ್ಮ ಧರ್ಮವನ್ನು ದುರ್ಬಲಗೊಳಿಸುತ್ತದೆ. ದುರ್ಬಲ ಹೇಗೆ? ನೀವು ಮಹಿಳೆಯರನ್ನು ಶಾಸಕಿಯರು ಮತ್ತು ಕೌನ್ಸಿಲರ್‌ಗಳನ್ನಾಗಿ ಮಾಡಿದರೆ, ನಾವು ನಮ್ಮ ಹಿಜಾಬ್ ಅನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗುವುದಿಲ್ಲ" ಎಂದು ಮುಸ್ಲಿಂ ವಿದ್ಯಾರ್ಥಿನಿಯರು ಶಿರವಸ್ತ್ರ ಧರಿಸುವ ವಿಚಾರದಲ್ಲಿ ಕರ್ನಾಟಕದಲ್ಲಿ ಉಂಟಾಗಿರುವ ವಿವಾದವನ್ನು ಉಲ್ಲೇಖಿಸಿದ್ದಾರೆ.
Jama Masjid: ಜಾಮಾ ಮಸೀದಿಗೆ ಮಹಿಳೆಯರ ಪ್ರವೇಶ ನಿಷೇಧ: ವಿವಾದ ಸೃಷ್ಟಿಸಿದ ಆದೇಶ

"ಚುನಾವಣೆಯಲ್ಲಿ ಸ್ಪರ್ಧಿಸಲು, ಮನೆಯಿಂದ ಮನೆಗೆ ತೆರಳಿ ಜನರನ್ನು ಸಂಪರ್ಕಿಸಬೇಕು. ಹಿಂದೂ ಮತ್ತು ಮುಸ್ಲಿಮರು ಇಬ್ಬರನ್ನೂ ಭೇಟಿಯಾಗಬೇಕು. ಹೀಗಾಗಿ ನಾನು ಅದಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿದ್ದೇನೆ. ನೀವು ಪುರುಷರಿಗೆ ಚುನಾವಣಾ ಟಿಕೆಟ್ ನೀಡಬಹುದು" ಎಂದು ಮುಸ್ಲಿಂ ಮಹಿಳೆಯರು ಸಾರ್ವಜನಿಕವಾಗಿ ಚಟುವಟಿಕೆಗಳಲ್ಲಿ ಭಾಗವಹಿಸುವುದು ತಪ್ಪು ಎಂದಿದ್ದಾರೆ.

"ಅವರು ಮಹಿಳೆಯರಿಗೆ ಟಿಕೆಟ್ ನೀಡುತ್ತಿರುವುದಕ್ಕೆ ಕಾರಣ, ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚು ಪ್ರಭಾವಶಾಲಿಯಾಗಿದ್ದಾರೆ ಎನ್ನುವುದು. ನೀವು ಮಹಿಳೆಯರನ್ನು ಕರೆದೊಯ್ದರೆ, ಇಡೀ ಕುಟುಂಬ ಕೂಡ ಬರುತ್ತದೆ. ಇದಕ್ಕಿಂತ ಬೇರೆ ಯಾವುದೇ ಕಾರಣ ನನಗೆ ಕಾಣಿಸುತ್ತಿಲ್ಲ" ಎಂದು ಹೇಳಿದ್ದಾರೆ.

"ಮಹಿಳೆಯರು ಈ ದಿನಗಳಲ್ಲಿ ಎಲ್ಲವನ್ನೂ ನಿಯಂತ್ರಿಸುತ್ತಾರೆ ಎಂದು ಅವರು ಭಾವಿಸಿರುವಂತೆ ಇದೆ. ಹೀಗಾಗಿ ಮಹಿಳೆಯರನ್ನು ಟ್ರ್ಯಾಪ್ ಮಾಡಿದರೆ, ಅವರ ಇಡೀ ಕುಟುಂಬವನ್ನು ಟ್ರ್ಯಾಪ್ ಮಾಡಬಹುದು" ಎಂದಿದ್ದಾರೆ.
ಲೇಖಕರ ಬಗ್ಗೆ
ಅಮಿತ್ ಎಂ.ಎಸ್
ವಿಜಯ ಕರ್ನಾಟಕದ ಡಿಜಿಟಲ್ ವಿಭಾಗದಲ್ಲಿ ಪತ್ರಕರ್ತ. 2009ರಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ದಿನಪತ್ರಿಕೆಗಳು ಮತ್ತು ವೆಬ್‌ ಪೋರ್ಟಲ್‌ಗಳಲ್ಲಿ ವರದಿಗಾರಿಕೆ, ಸಿನಿಮಾ ವರದಿಗಾರಿಕೆ, ಡೆಸ್ಕ್ ಹಾಗೂ ಜಿಲ್ಲಾ ಕರೆಸ್ಪಾಂಡೆಂಟ್ ಆಗಿ ಕೆಲಸ ಮಾಡಿದ ಅನುಭವ ಇವರಿಗಿದೆ. ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳು ಪ್ರಮುಖ ಆಸಕ್ತಿಯ ವಿಭಾಗಗಳು. ಮಾನವಾಸಕ್ತಿಯ ಹಾಗೂ ಸ್ಫೂರ್ತಿದಾಯಕ ಕಥನಗಳನ್ನು ನಿರೂಪಿಸುವುದು ವೃತ್ತಿಯಲ್ಲಿನ ನೆಚ್ಚಿನ ಸಂಗತಿ. ಪ್ರವಾಸ, ಕ್ರಿಕೆಟ್, ಓದು, ಕೃಷಿ ಇತರೆ ಇವರ ಆಸಕ್ತಿ ಮತ್ತು ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ