ಆ್ಯಪ್ನಗರ

ಬಿಜೆಪಿ ಸೇರಲಿರುವ ಕಾಂಗ್ರೆಸ್‌ ಶಾಸಕ ಆಲ್ಫೇಶ್‌?

ರಾಧಾನ್‌ಪುರ ಕ್ಷೇತ್ರದ ಶಾಸಕರಾಗಿರುವ ಆಲ್ಫೇಶ್‌, ಶುಕ್ರವಾರ ಶಾಸಕತ್ವಕ್ಕೆ ರಾಜೀನಾಮೆ ನೀಡುವುದರ ಜತೆಗೆ ಬಿಜೆಪಿ ಸರಕಾರದಲ್ಲಿ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

Vijaya Karnataka 8 Mar 2019, 5:00 am
ಅಹಮದಾಬಾದ್‌: ಕಾಂಗ್ರೆಸ್‌ ಶಾಸಕ ಹಾಗೂ ಹಿಂದುಳಿದ ವರ್ಗಗಳ ಮುಖಂಡ ಆಲ್ಫೇಶ್‌ ಠಾಕೂರ್‌ ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎನ್ನುವ ವದಂತಿ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ. ಇದು ನಿಜವೇ ಆಗಿದ್ದಲ್ಲಿ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ತೀವ್ರ ಹೊಡೆತ ಬೀಳಲಿದೆ.
Vijaya Karnataka Web BNG-0703-2-2-ALPESH


ರಾಧಾನ್‌ಪುರ ಕ್ಷೇತ್ರದ ಶಾಸಕರಾಗಿರುವ ಆಲ್ಫೇಶ್‌, ಶುಕ್ರವಾರ ಶಾಸಕತ್ವಕ್ಕೆ ರಾಜೀನಾಮೆ ನೀಡುವುದರ ಜತೆಗೆ ಬಿಜೆಪಿ ಸರಕಾರದಲ್ಲಿ ಸಚಿವರಾಗಿಯೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಕಾಕತಾಳೀಯ ಎಂಬಂತೆ ಗುಜರಾತ್‌ ಸಚಿವಾಲಯದಲ್ಲಿನ ಎರಡು ಕೊಠಡಿಗಳನ್ನು ಗುರುವಾರ ಸಿದ್ಧಪಡಿಸಲಾಗಿದೆ. ಈ ವದಂತಿ ತಳ್ಳಿಹಾಕಿರುವ ಆಲ್ಫೇಶ್‌, ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಎಲ್ಲ ಸಂದೇಹಗಳಿಗೂ ಉತ್ತರ ನೀಡುವುದಾಗಿ ತಿಳಿಸಿದ್ದಾರೆ. ಇನ್ನೊಂದೆಡೆ ಬಿಜೆಪಿ, ''ನಾವಂತೂ ಆಲ್ಫೇಶ್‌ರನ್ನು ಸಂಪರ್ಕಿಸಿಲ್ಲ. ಎಲ್ಲರಿಗೂ ಪಕ್ಷದ ಬಾಗಿಲು ತೆರೆದಿದೆ. ಪಕ್ಷಕ್ಕೆ ಬರುವುದು, ಬಿಡುವುದು ಆಲ್ಫೇಶ್‌ಗೆ ಬಿಟ್ಟ ವಿಚಾರ,'' ಎಂದು ಹೇಳುವ ಮೂಲಕ ಕುತೂಹಲ ಮೂಡಿಸಿದೆ.

ಕಾಂಗ್ರೆಸ್‌ ತಮ್ಮನ್ನು ಕಡೆಗಣಿಸುತ್ತಿದೆ ಎಂಬ ಅಸಮಾಧಾನ ಮೊದಲ ಸಲ ನಾಯಕರಾಗಿರುವ ಆಲ್ಫೇಶ್‌ ಠಾಕೂರ್‌ ಅವರನ್ನು ಕಾಡುತ್ತಿದೆ. ''ನನ್ನನ್ನು ವಂಚಿಸಲಾಗಿದೆ ಮತ್ತು ಕಡೆಗಣಿಸಲಾಗುತ್ತಿದೆ ಎಂಬ ಭಾವನೆ ಕಾಡಲಾರಂಭಿಸಿದೆ. ರಾಜ್ಯದಲ್ಲಿನ ಕಾಂಗ್ರೆಸ್‌ ನಾಯಕತ್ವ ದುರ್ಬಲವಾಗಿದೆ,'' ಎಂದು ಇತ್ತೀಚೆಗೆ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಒಮ್ಮೆ ಪಕ್ಷ ತೊರೆದರೆ ಅವರ ಎದುರಿಗಿರುವ ಏಕೈಕ ಆಯ್ಕೆ ಎಂದರೆ ಬಿಜೆಪಿ ಸೇರುವುದು. ಅದಕ್ಕೆ ಬಿಜೆಪಿ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದೆ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ