ಆ್ಯಪ್ನಗರ

ಗುಜರಾತ್‌ನಲ್ಲಿ ಪಾಂಡವ-ಕೌರವರ ಸಮರ

ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಗುಜರಾತ್‌ ವಿಧಾನಸಭಾ ಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಸಿದ್ದು, ಇದು ಪಾಂಡವರು ಮತ್ತು ಕೌರವರ ನಡುವಿನ ಸಮರ ಎಂದು ಬಣ್ಣಿಸಿದ್ದಾರೆ.

Vijaya Karnataka 4 Nov 2017, 8:25 am

ಗಾಂಧಿನಗರ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ಗುಜರಾತ್‌ ವಿಧಾನಸಭಾ ಚುನಾವಣೆಯನ್ನು ಮಹಾಭಾರತಕ್ಕೆ ಹೋಲಿಸಿದ್ದು, ಇದು ಪಾಂಡವರು ಮತ್ತು ಕೌರವರ ನಡುವಿನ ಸಮರ ಎಂದು ಬಣ್ಣಿಸಿದ್ದಾರೆ.

ಸತ್ಯ ಮತ್ತು ಮಿಥ್ಯದ ನಡುವೆ ನಡೆಯಲಿರುವ ಈ ಹೋರಾಟದಲ್ಲಿ ಬಿಜೆಪಿಯ ಕೌರವರ ವಿರುದ್ಧ ಕಾಂಗ್ರೆಸ್‌ನ ಪಾಂಡವರು ಜಯಭೇರಿ ಬಾರಿಸಲಿದ್ದಾರೆ ಎಂದು ರಾಹುಲ್‌ ಹೇಳಿದ್ದಾರೆ.

ಗುಜರಾತ್‌ನ ವಲ್ಸಾದ್‌ ಜಿಲ್ಲೆಯ ಪದ್ರಿನಲ್ಲಿ ಶುಕ್ರವಾರ ಚುನಾವಣಾ ರಾರ‍ಯಲಿಯಲ್ಲಿ ಭಾಗವಹಿಸಿದ ಅವರು, ಬಿಜೆಪಿ ವಿರುದ್ಧ ವಾಗ್ದಾಳಿಗೆ ಮಹಾಭಾರತದ ಪಾತ್ರಗಳನ್ನು ಬಳಸಿಕೊಂಡರು.

''ಕೌರವರಿಗೆ ಅಪಾರ ಸೇನಾಬಲ ಮತ್ತು ಶಸ್ತ್ರಬಲವಿತ್ತು. ಪಾಂಡವರ ಬಳಿ ಸತ್ಯವೊಂದನ್ನು ಬಿಟ್ಟರೆ ಬೇರೇನೂ ಇರಲಿಲ್ಲ. ಗುಜರಾತ್‌ ಸಮರದಲ್ಲೂ ಪಾಂಡವರಾದ ಕಾಂಗ್ರೆಸ್‌ ಬಳಿ ಸತ್ಯವೊಂದರ ಹೊರತಾಗಿ ಬೇರೇನೂ ಇಲ್ಲ,'' ಎಂದು ರಾಹುಲ್‌ ಹೇಳಿದರು.

''ಮಹಾಭಾರತ ಯುದ್ಧಕ್ಕೆ ಮುನ್ನ ದುರ್ಯೋಧನ ಮತ್ತು ಅರ್ಜುನ ಇಬ್ಬರೂ ಕೃಷ್ಣನ ಬಳಿಗೆ ಹೋಗಿದ್ದರು. ಯುದ್ಧವನ್ನು ತಪ್ಪಿಸಲು ಐದು ಗ್ರಾಮಗಳನ್ನು ಪಾಂಡವರಿಗೆ ನೀಡುವಂತೆ ಕೃಷ್ಣ ಕೌರವರಿಗೆ ಸಲಹೆ ಕೊಟ್ಟಿದ್ದ. ಆದರೆ, ದುರ್ಯೋಧನ ಇದಕ್ಕೆ ನಿರಾಕರಿಸಿದ್ದೇ ಯುದ್ಧಕ್ಕೆ ಕಾರಣವಾಯಿತು,'' ಎಂದು ರಾಹುಲ್‌ ಹೇಳಿದರು.

ವಲ್ಸಾದ್‌ ಜಿಲ್ಲೆಯ ಕೋಸಂಬಾದಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ದೇಗುಲಕ್ಕೂ ರಾಹುಲ್‌ ಭೇಟಿ ನೀಡಿ ದರ್ಶನ ಪಡೆದರು.

======================

ಪಟೀದಾರರ ಕೋಟಾ: ಕಾಂಗ್ರೆಸ್‌ ಸ್ಪಷ್ಟನೆಗೆ ಬಿಜೆಪಿ ಆಗ್ರಹ

ಪಟೀದಾರರಿಗೆ ಒಬಿಸಿ ಮೀಸಲಿಗೆ ಬದಲಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗದ (ಇಬಿಸಿ) ಕೋಟಾದಡಿ ಮೀಸಲು ನೀಡುವುದಾಗಿ ಪ್ರಕಟಿಸಿರುವ ಪ್ರತಿಪಕ್ಷ ನಾಯಕ ಮೋಹನ್‌ ಸಿನ್ಹಾ ರಾವತ್‌ ಅವರ ಹೇಳಿಕೆ ಬಗ್ಗೆ ಕಾಂಗ್ರೆಸ್‌ ಹಾಗೂ ಹಾರ್ದಿಕ್‌ ಪಟೇಲ್‌ ಇಬ್ಬರೂ ಸ್ಪಷ್ಟನೆ ನೀಡಬೇಕೆಂದು ಬಿಜೆಪಿ ಆಗ್ರಹಿಸಿದೆ.

ಶುಕ್ರವಾರ ರಾರ‍ಯಲಿಯೊಂದರಲ್ಲಿ ಮಾತನಾಡಿದ ರಾವತ್‌ ಅವರು, ''ಹಾಲಿ ಇರುವ ಮೀಸಲನ್ನು ಬದಲಾಯಿಸುವುದಿಲ್ಲ. ಪಟೀದಾರರಿಗೆ 'ಇಬಿಸಿ' ಕೋಟಾದಲ್ಲಿ ಮೀಸಲು ನೀಡಲಾಗುವುದು,'' ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ, ಕೇಂದ್ರ ಸಚಿವ ಪುರಷೋತ್ತಮ ರೂಪಾಲ, ''ಕಾಂಗ್ರೆಸ್‌ ತನ್ನ ಮನಸಿನಲ್ಲಿರುವ ಮಾತನ್ನು ಹೇಳಿದೆ. ಹಾರ್ದಿಕ್‌ ಪಟೇಲ್‌ ಅವರನ್ನು ಕಾಂಗ್ರೆಸ್‌ ಹಾದಿ ತಪ್ಪಿಸಿದೆ,'' ಎಂದಿದ್ದಾರೆ.

Gujarat polls a Pandava-Kaurava battle where truth will win: Rahul
Vijaya Karnataka Web gujarat polls a pandava kaurava battle where truth will win rahul gandhi
ಗುಜರಾತ್‌ನಲ್ಲಿ ಪಾಂಡವ-ಕೌರವರ ಸಮರ


Pardi (Guj): Invoking the 'Mahabharata', Congress leader Rahul Gandhi today likened his party to the triumphant Pandavas who would vanquish the Kauravas of the BJP in the battle between "truth and falsehood" in the Gujarat Assembly elections

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ