ಆ್ಯಪ್ನಗರ

ಪ್ರಧಾನಿ ಮೋದಿ, ಅಂಬೇಡ್ಕರ್‌ 'ಬ್ರಾಹ್ಮಣರು': ಗುಜರಾತ್‌ ಸ್ಪೀಕರ್‌ ಹೇಳಿಕೆ

ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌ ಅವರು ನಿಜ ಅರ್ಥದಲ್ಲಿ 'ಬ್ರಾಹ್ಮಣ' ಎಂದು ಗುಜರಾತ್‌ ವಿಧಾನಸಭೆ ಸ್ಪೀಕರ್‌ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ.

Vijaya Karnataka Web 30 Apr 2018, 1:27 pm
ಗಾಂಧಿನಗರ: ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌ ಅವರು ನಿಜ ಅರ್ಥದಲ್ಲಿ 'ಬ್ರಾಹ್ಮಣ' ಎಂದು ಗುಜರಾತ್‌ ವಿಧಾನಸಭೆ ಸ್ಪೀಕರ್‌ ರಾಜೇಂದ್ರ ತ್ರಿವೇದಿ ಹೇಳಿದ್ದಾರೆ.
Vijaya Karnataka Web Rajendra Trivedi


'ಬ್ರಾಹ್ಮಣ ಉದ್ಯಮಿಗಳ ಬೃಹತ್ ಸಮ್ಮೇಳನ'ದಲ್ಲಿ ಮಾತನಾಡಿದ ಅವರು, 'ಬಿ.ಆರ್. ಅಂಬೇಡ್ಕರ್‌ ಒಬ್ಬ ಬ್ರಾಹ್ಮಣ ಎಂದು ಹೇಳಲು ನನಗೆ ಯಾವ ಹಿಂಜರಿಕೆಯೂ ಇಲ್ಲ. ಸ್ವಯಂ ಅಧ್ಯಯನದಿಂದ ಉತ್ತಮ ಜ್ಞಾನಿಗಳಾದವರನ್ನು ಬ್ರಾಹ್ಮಣ ಎಂದು ಕರೆಯುವುದರಲ್ಲಿ ಯಾವ ತಪ್ಪೂ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬ ಬ್ರಾಹ್ಮಣ ಎಂದು ನಾನು ಹೇಳುತ್ತೇನೆ' ಎಂದು ತ್ರಿವೇದಿ ನುಡಿದರು.


ಸಂವಿಧಾನ ಶಿಲ್ಪಿ ಬಿ.ಆರ್‌. ಅಂಬೇಡ್ಕರ್‌ ದಲಿತ ಕುಟುಂಬದಲ್ಲಿ ಜನಿಸಿ, ಸಮುದಾಯದ ಹಕ್ಕುಗಳು ಮತ್ತು ಸಮಾನತೆಗಾಗಿ ಹೋರಾಡಿದವರು. ಸ್ವಯಂ ಅಧ್ಯಯನದಿಂದ ಮೇಲೆ ಬಂದು ಸಂವಿಧಾನ ನಿರ್ಮಾತೃಗಳಾಗುವ ಮಟ್ಟಕ್ಕೆ ಏರಿದವರು.

ದಲಿತ-ಬೌದ್ಧ ಆಂದೋಲನದ ಹಿಂದಿನ ಶಕ್ತಿಯಾಗಿರುವ ಅಂಬೇಡ್ಕರ್ ಅಸ್ಪೃಶ್ಯತೆ ವಿರುದ್ಧ ಹೋರಾಡಿದವರು. ಮಹಿಳೆಯರು ಮತ್ತು ಕಾರ್ಮಿಕರ ಹಕ್ಕುಗಳಿಗಾಗಿಯೂ ಅವರು ಹೋರಾಡಿದ್ದರು.

GANDHINAGAR: Gujarat Assembly Speaker Rajendra Trivedi on Sunday described BR Ambedkar as a 'Brahmin', contending that there was nothing wrong in calling a learned person a Brahmin.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ