ಆ್ಯಪ್ನಗರ

ಕೋರ್ಟ್‌ ತೀರ್ಪು ಕೇಳಿ 'ಶಾಕ್‌'ಗೆ ಒಳಗಾದ ಡೇರಾ ಮುಖ್ಯಸ್ಥ

ವಿಶೇಷ ಸಿಬಿಐ ನ್ಯಾಯಾಧೀಶ ಜಗದೀಪ್‌ ಸಿಂಗ್‌ ಶುಕ್ರವಾರ ತನ್ನ ವಿರುದ್ಧ ತೀರ್ಪು ಪ್ರಕಟಿಸಿದಾಗ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಂ ರಹೀಂ ಸಿಂಗ್‌ಗೆ ಮೊದಲಿಗೆ ಏನೂ ಅರ್ಥವಾಗಲಿಲ್ಲ. ತನ್ನ ವಕೀಲ ತೀರ್ಪನ್ನು ವಿವರಿಸಿ ಹೇಳಿದಾಗ ಆಘಾತಕ್ಕೊಳಗಾದ. ಶಾಕ್‌ನಿಂದ ಚೇತರಿಸಿಕೊಳ್ಳಲು ಡೇರಾ ಮುಖ್ಯಸ್ಥನಿಗೆ ಬಹಳ ಹೊತ್ತೇ ಬೇಕಾಯಿತು ಎಂದು ಸಿಬಿಐನ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಚ್‌ಪಿಎಸ್‌ ವರ್ಮಾ ತಿಳಿಸಿದರು.

TNN 26 Aug 2017, 9:59 am
ಪಂಚಕುಲ: ವಿಶೇಷ ಸಿಬಿಐ ನ್ಯಾಯಾಧೀಶ ಜಗದೀಪ್‌ ಸಿಂಗ್‌ ಶುಕ್ರವಾರ ತನ್ನ ವಿರುದ್ಧ ತೀರ್ಪು ಪ್ರಕಟಿಸಿದಾಗ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್‌ ರಾಂ ರಹೀಂ ಸಿಂಗ್‌ಗೆ ಮೊದಲಿಗೆ ಏನೂ ಅರ್ಥವಾಗಲಿಲ್ಲ. ತನ್ನ ವಕೀಲ ತೀರ್ಪನ್ನು ವಿವರಿಸಿ ಹೇಳಿದಾಗ ಆಘಾತಕ್ಕೊಳಗಾದ. ಶಾಕ್‌ನಿಂದ ಚೇತರಿಸಿಕೊಳ್ಳಲು ಡೇರಾ ಮುಖ್ಯಸ್ಥನಿಗೆ ಬಹಳ ಹೊತ್ತೇ ಬೇಕಾಯಿತು ಎಂದು ಸಿಬಿಐನ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಎಚ್‌ಪಿಎಸ್‌ ವರ್ಮಾ ತಿಳಿಸಿದರು.
Vijaya Karnataka Web gurmeet ram rahim singh stunned after court verdict prosecutor
ಕೋರ್ಟ್‌ ತೀರ್ಪು ಕೇಳಿ 'ಶಾಕ್‌'ಗೆ ಒಳಗಾದ ಡೇರಾ ಮುಖ್ಯಸ್ಥ


ಕೋರ್ಟ್‌ ಪ್ರಕ್ರಿಯೆ ನಡೆಯುತ್ತಿದ್ದಾಗ ಗುರ್ಮೀತ್‌ ಕೈಮುಗಿದು ನಮಸ್ಕರಿಸುತ್ತ ಕುಳಿತಿದ್ದ. ಸುಮಾರು ಅರ್ಧ ಗಂಟೆ ಕಾಲ ಕುಳಿತಿದ್ದ ಆತನ ಜತೆಗೆ ಇಬ್ಬರು ಹಿರಿಯ ಸಿಬಿಐ ಅಧಿಕಾರಿಗಳು (ಒಬ್ಬರು ಐಜಿಪಿ ದರ್ಜೆಯವರು ಮತ್ತು ಇನ್ನೊಬ್ಬರು ಸಿಬಿಐ ವಕೀಲ) ಹಾಗೂ ಒಬ್ಬರು ಆರೋಪಿ ಪರ ವಕೀಲರು ಹಾಜರಿದ್ದರು. ತೀರ್ಪು ಪ್ರಕಟವಾದ ಕೂಡಲೇ ಪೊಲೀಸರು ಗುರ್ಮೀತ್‌ನನ್ನು ವಶಕ್ಕೆ ತೆಗೆದುಕೊಂಡರು.

ಬಳಿಕ ಕೋರ್ಟಿನ ಹೊರಗೆ ನಿಲ್ಲಿಸಲಾಗಿದ್ದ ಸ್ಕಾರ್ಪಿಯೋದಲ್ಲಿ ಪೊಲೀಸರು ಆತನನ್ನು ಕರೆದೊಯ್ದರು. ನಂತರ, ಶಾಂತಿ ಕಾಪಾಡುವಂತೆ ಬೆಂಬಲಿಗರಿಗೆ ಮನವಿ ಮಾಡುವಂತೆ ಸೂಚಿಸಿ ಅದನ್ನುವಿಶೇಷ ಕ್ಯಾಮರಾದಲ್ಲಿ ರೆಕಾರ್ಡ್‌ ಮಾಡಿಕೊಂಡರು.

ನಂತರ ಸಿರ್ಸಾದಿಂದ ಪಂಚಕುಲಕ್ಕೆ ಗುರ್ಮೀತ್‌ ಜತೆಗೆ ಬಂದಿದ್ದ ಬೆಂಗಾವಲು ವಾಹನಗಳಿಗೆ ಜಾಗ ಖಾಲಿ ಮಾಡುವಂತೆ ಸೂಚಿಸಲಾಯಿತು. ರಾಂ ರಹೀಂನನ್ನು ಪಂಚಕುಲದಿಂದ ಹೆಲಿಕಾಪ್ಟರ್‌ ಮೂಲಕ ರೋಹ್ಟಕ್‌ಗೆ ಕರೆದೊಯ್ದು ನಿಗದಿತ ಜೈಲಿಗೆ ಕಳುಹಿಸಲಾಯಿತು.

ಸಾಮಾನ್ಯವಾಗಿ ಪಂಚಕುಲ ಕೋರ್ಟ್‌ನಿಂದ ಶಿಕ್ಷೆಗೆ ಗುರಿಯಾದವರನ್ನು ಅಂಬಾಲಾದ ಸೆಂಟ್ರಲ್‌ ಜೈಲಿಗೆ ಹಾಕಲಾಗುತ್ತದೆ. ಆದರೆ, ಅಂಬಾಲಾ ಜೈಲಿನ ಹೊರಗೆ ಡೇರಾ ಮುಖ್ಯಸ್ಥನ ಬೆಂಬಲಿಗರು ಜಮಾಯಿಸಿದ್ದಾರೆ ಎಂಬ ಮಾಹಿತಿ ತಿಳಿದು ಗುರ್ಮೀತ್‌ ರಾಂ ರಹೀಂನನ್ನು ರೋಹ್ಟಕ್‌ಗೆ ಒಯ್ಯಲಾಯಿತು.

ಸೋಮವಾರ ಶಿಕ್ಷೆ ಪ್ರಮಾಣ ಪ್ರಕಟಿಸುವ ವೇಳೆ ಪುನಃ ಆತನನ್ನು ಪಂಚಕುಲದ ಸಿಬಿಐ ಕೋರ್ಟ್‌ ಮುಂದೆ ಹಾಜರುಪಡಿಸುವ ಸಾಧ್ಯತೆಯಿಲ್ಲ.. ವೀಡಿಯೋ ಕಾನ್ಫರೆನ್ಸ್‌ ಮೂಲಕ ಕೋರ್ಟ್‌ ಕಲಾಪದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

Gurmeet Ram Rahim Singh stunned after court verdict: Prosecutor

PANCHKULA: When special CBI judge Jagdeep Singh held him guilty on Friday, Dera Sacha Sauda head Gurmeet Ram Rahim Singh could not understand what the judge had said. In fact, when the counsel pronuounced him guilty, he was shocked. According to the public prosecutor for CBI HPS Verma, who was present inside the courtroom, the dera head remained in a state of shock for some time.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ