ಆ್ಯಪ್ನಗರ

ಇಸ್ಲಾಂ ಧರ್ಮ ಸ್ವೀಕರಿಸಲು ಮುಂದಾದ ಡೇರಾ ಬಾಬಾ ಭಕ್ತರು

ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಛಾ ಸೌಧಾ ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ವಿಚಾರದಲ್ಲಿ ಅವರ ಬೆಂಬಲಿಗರು ಹೊಸ ನಾಟಕಕ್ಕೆ ಮುಂದಾಗಿದ್ದಾರೆ.

ತೆಲುಗು ಸಮಯಂ 3 Oct 2017, 9:44 am
ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಛಾ ಸೌಧಾ ಬಾಬಾ ಗುರ್ಮೀತ್ ರಾಮ್ ರಹೀಮ್ ಸಿಂಗ್ ವಿಚಾರದಲ್ಲಿ ಅವರ ಬೆಂಬಲಿಗರು ಹೊಸ ನಾಟಕಕ್ಕೆ ಮುಂದಾಗಿದ್ದಾರೆ. ಡೇರಾ ಬಾಬಾರನ್ನು ಅನ್ಯಾಯವಾಗಿ ಶಿಕ್ಷಿಸುತ್ತಿದ್ದಾರೆಂದು, ಅವರು ಹಿಂದೂ ಆಗಿರುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
Vijaya Karnataka Web gurmeet ram rahims aides threaten mass conversion to islam
ಇಸ್ಲಾಂ ಧರ್ಮ ಸ್ವೀಕರಿಸಲು ಮುಂದಾದ ಡೇರಾ ಬಾಬಾ ಭಕ್ತರು


ರಾಮ್ ರಹೀಂ ಹಿಂದೂ ಆಗಿದ್ದೇ ದೊಡ್ಡ ತಪ್ಪಾಗಿದೆ. ಹಾಗಾಗಿ ಡೇರಾ ಅನುಯಾಯಿಗಳನ್ನೆಲ್ಲಾ ಇಸ್ಲಾಂಗೆ ಮತಾಂತರ ಮಾಡುತ್ತೇವೆ ಎಂದು ಗುರ್ಮೀತ್ ಸಿಂಗ್ ಬೆಂಬಲಿಗರು ಎಚ್ಚರಿಸಿದ್ದಾರೆ. ಸಂದೀಪ್ ಮಿಶ್ರಾ ಎಂಬ ವ್ಯಕ್ತಿ ಸಾಮಾಜಿಕ ಮಾಧ್ಯಮದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಈತ ಗುರ್ಮೀತ್‌ಗೆ ತುಂಬಾ ಆಪ್ತ ಎನ್ನಲಾಗಿದೆ. ಡೇರಾ ಪ್ರತಿನಿಧಿಯಾಗಿ ಗುರುತಿಸಿಕೊಂಡಿದ್ದ.

'ಗುರ್ಮೀತ್ ಮುಗ್ಧ, ಅವರನ್ನು ಕುತಂತ್ರದಿಂದ ಬಂಧಿಸಲಾಗಿದೆ. ಈ ವಿಚಾರದಲ್ಲಿ ಡೇರಾ ಭಕ್ತರೆಲ್ಲಾ ಅತೀವ ದುಃಖ ಅನುಭವಿಸುತ್ತಿದ್ದಾರೆ. ಈ ನೋವಿನಲ್ಲೇ ಅವರೆಲ್ಲಾ ಹಿಂದೂ ಧರ್ಮವನ್ನು ಬಿಡಲು ಸಿದ್ಧರಾಗಿದ್ದಾರೆಂದು' ಮಿಶ್ರಾ ಹೇಳಿಕೊಂಡಿದ್ದಾರೆ.

ಈಗಾಗಲೆ ತಾವೆಲ್ಲ ಎಐಎಂಐಎಂ ಮುಖಂಡ ಅಸದುದ್ದೀನ್ ಓವೈಸಿಯನ್ನು, ಸ್ವಲ್ಪ ಮಂದಿ ಮುಸ್ಲಿಂ ಹಿರಿಯರನ್ನು ಸಂಪರ್ಕಿಸಿದ್ದೇವೆ. ಮೊದಲು ಲಕ್ಷ ಮಂದಿಯಿಂದ ಭಾರಿ ಪ್ರಮಾಣದಲ್ಲಿ ಇಸ್ಲಾಂ ಧರ್ಮ ಸ್ವೀಕರಿಸುವ ಕಾರ್ಯಕ್ರಮ ನಿರ್ವಹಿಸುತ್ತೇವೆಂದು ಮಿಶ್ರಾ ಹೇಳಿದ್ದಾರೆ.

ಹಂತಹಂತವಾಗಿ ಗುರ್ಮೀತ್ ಅನುಯಾಯಿಗಳೆಲ್ಲಾ ಇಸ್ಲಾಂಗೆ ಸೇರುತ್ತೇವೆ. ತಮ್ಮ ದೇವರ ಮೇಲೆ ಕುತಂತ್ರದಿಂದ ಶಿಕ್ಷೆ ವಿಧಿಸಿರುವ ಬಗ್ಗೆ ತಮ್ಮ ವಿರೋಧ ವ್ಯಕ್ತ ಪಡೆಸುತ್ತೇವೆ ಎಂದಿದ್ದಾರೆ ಮಿಶ್ರಾ. ಆದರೆ ಮಿಶ್ರಾ ಈ ಹೇಳಿಕೆಗೆ ಹಿಂದೂ ಧಾರ್ಮಿಕ ಸಂಘಟನೆಗಳು ವಿರೋಧಿಸಿವೆ. ಗುರ್ಮೀತ್‌ರನ್ನು ಕಾಪಾಡಿಕೊಳ್ಳಲು ಧರ್ಮವನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸಿವೆ.

ಗುರ್ಮೀತ್‌ ವಸ್ತ್ರ ಒಡವೆ ಕಳವು

ಅತ್ಯಾಚಾರ ಆರೋಪಡದಿ ಜೈಲುಪಾಲಾಗಿರುವ ಡೇರಾ ಸಚ್ಚಾ ಸೌದದ ಗುರ್ಮೀತ್‌ ರಾಮ್‌ ರಹೀಂ ಸಿಂಗ್‌ ಅವರಿಗೆ ಸೇರಿದ್ದ ಬೆಲೆಬಾಳುವ ಉಡುಪು ಮತ್ತು ಅಪಾರ ಮೌಲ್ಯದ ಆಭರಣಗಳು ಕಳ್ಳತನವಾಗಿವೆ. ಬಹದೂರ್‌ಗಢದ ಮೆಹಂದಿಪುರ ದಬೋದ ವಲಯದ 'ನಾಮ್‌ ಚರ್ಚಾ ಘರ್‌' ಆಶ್ರಮದಲ್ಲಿ ಶನಿವಾರ ಈ ದರೋಡೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರ್ಮೀತ್‌ ಅವರಿಗೆ ಸೇರಿದ ದುಬಾರಿ ಬೆಲೆಯ ಉಡುಪುಗಳು ಮತ್ತು ಲಕ್ಷಾಂತರ ಮೌಲ್ಯದ ಆಭರಣಗಳು ಕಣ್ಮರೆಯಾಗಿವೆ. ಚರ್ಚಾ ಘರ್‌ ಒಳಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮರಾ, ಹಾರ್ಡ್‌ ಡಿಸ್ಕ್‌, ಡಿವಿಆರ್‌ ಸಿಸ್ಟಮ್‌ಗಳನ್ನು ಸಹ ದರೋಡೆಕೋರರು ಹೊತ್ತೊಯ್ದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ