ಆ್ಯಪ್ನಗರ

ಗನ್‌ಮ್ಯಾನ್‌ನಿಂದ ಗುಂಡಿನ ದಾಳಿ: ನ್ಯಾಯಾಧೀಶರ ಪತ್ನಿ, ಪುತ್ರ ಸಾವು

ಗುರುಗ್ರಾಮದ ಹೆಚ್ಚುವರಿ ಸೆಶನ್ಸ್‌ ನ್ಯಾಯಾಧೀಶರ ಪತ್ನಿ ಮತ್ತು ಪುತ್ರ ಶನಿವಾರ ಸಂಜೆ ಮಾರುಕಟ್ಟೆಗೆ ತೆರಳಿದ್ದರು. ಆ ಸಂದರ್ಭದಲ್ಲಿ ಅವರು ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಗನ್‌ಮ್ಯಾನ್ ಇಬ್ಬರ ಮೇಲೂ ಗುಂಡು ಹಾರಿಸಿದ್ದಾನೆ.

Vijaya Karnataka Web 14 Oct 2018, 12:07 pm
ಹೊಸದಿಲ್ಲಿ: ಗುರುಗ್ರಾಮದ ಜನನಿಬಿಡ ರಸ್ತೆಯಲ್ಲಿ ಶನಿವಾರ ಹಾಡಹಗಲೇ ನ್ಯಾಯಾಧೀಶರೊಬ್ಬರ ಪತ್ನಿ ಮತ್ತು ಪುತ್ರನ ಮೇಲೆ ಗುಂಡು ಹಾರಿಸಿದ್ದು, ಇಂದು ಅವರಿಬ್ಬರೂ ಮೃತಪಟ್ಟಿದ್ದಾರೆ.
Vijaya Karnataka Web judge wife shooted


ಭದ್ರತೆ ನೀಡಬೇಕಾದ ನ್ಯಾಯಾಧೀಶರ ಗನ್‌ ಮ್ಯಾನ್‌ನಿಂದಲೇ ಈ ಕೃತ್ಯ ನಡೆದಿದ್ದು, ಜನರನ್ನು ಬೆಚ್ಚಿಬೀಳುವಂತೆ ಮಾಡಿದೆ.

ಗುರುಗ್ರಾಮದ ಸೆಕ್ಟರ್‌ 51ರ ಮಾರುಕಟ್ಟೆ ಪ್ರದೇಶದಲ್ಲಿ ಶನಿವಾರ ಮಧ್ಯಾಹ್ನ 3.30ರ ಸುಮಾರಿಗೆ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಕೃಷ್ಣಕಾಂತ್‌ ಅವರ ಪತ್ನಿ ರೀತು ಮತ್ತು ಮಗ ಧ್ರುವ ಕಾರಿನಿಂದ ಹೊರಬರುತ್ತಿದ್ದಂತೆ ಅವರ ಮೇಲೆ ಗನ್‌ಮ್ಯಾನ್‌ ಮಹಿಪಾಲ್‌ (32) ಗುಂಡಿನ ದಾಳಿ ನಡೆಸಿದ. ಬಳಿಕ ಅವರದ್ದೇ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ. ಆದರೆ, ಕ್ಷಣಾರ್ಧ ಕಾರ್ಯಾಚರಣೆಗೆ ಇಳಿದ ಪೊಲೀಸರು ಗುರುಗ್ರಾಮ-ಫರಿದಾಬಾದ್‌ ರಸ್ತೆಯಲ್ಲಿ ಆತನನ್ನು ಬಂಧಿಸಿದರು.

ನ್ಯಾಯಾಧೀಶರ ಪತ್ನಿ ರೀತು ಅವರ ಎದೆಗೆ ಹಾಗೂ ಮಗ ಧ್ರುವ ಅವರ ತಲೆಗೆ ಗುಂಡೇಟು ಬಿದ್ದಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ನ್ಯಾಯಾಧೀಶರ ಪತ್ನಿ ಹಾಗೂ ಮಗ ಮೃತಪಟ್ಟಿದ್ದಾರೆ.

ಗನ್‌ಮ್ಯಾನ್‌ಗೆ ಖಿನ್ನತೆ !

ಕಳೆದ ಎರಡು ವರ್ಷಗಳಿಂದ ನ್ಯಾಯಾಧೀಶರ ಗನ್‌ಮ್ಯಾನ್‌ ಆಗಿ ಮುಖ್ಯ ಪೇದೆ ಮಹಿಪಾಲ್‌ ಕರ್ತವ್ಯ ನಿರ್ವಹಿಸುತ್ತಿದ್ದ. ಯಾವ ಉದ್ದೇಶದಿಂದ ಈ ದಾಳಿ ನಡೆಸಲಾಗಿದೆ ಎಂಬುದರ ಸ್ಪಷ್ಟ ಮಾಹಿತಿ ಇದುವೆಗೆ ಲಭ್ಯವಾಗಿಲ್ಲ. ಪೊಲೀಸರ ಪ್ರಾಥಮಿಕ ವಿಚಾರಣೆಯಿಂದಲೂ ಅಂತಹ ವಿವರಗಳು ಬಯಲಾಗಿಲ್ಲ.

ಆರೋಪಿ ಗನ್‌ಮ್ಯಾನ್‌ ಖಿನ್ನತೆಗೆ ಒಳಗಾಗಿದ್ದ. ಜತೆಗೆ ಕೆಲವು ಮಾನಸಿಕ ಸಮಸ್ಯೆಗಳಿಂದಲೂ ಬಳಲುತ್ತಿದ್ದ ಎಂದು ಗುರುಗ್ರಾಮ ಪೊಲೀಸ್‌ ಆಯುಕ್ತ ಕೆ.ಕೆ.ರಾವ್‌ ತಿಳಿಸಿದ್ದಾರೆ.

ಗುಂಡು ಹಾರಿಸಿದ ಬಳಿಕ ಮಹಿಪಾಲ್ ನ್ಯಾಯಾಧೀಶರಿಗೆ ಕರೆ ಮಾಡಿ ತನ್ನ ಕೃತ್ಯವನ್ನು ಅವರಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ