ಆ್ಯಪ್ನಗರ

ಮೊಹಮ್ಮದ್‌ ಅಲಿ ಜಿನ್ನಾ PM ಆಗಿದ್ದರೆ ಅಖಂಡ ಭಾರತ ಉಳಿಯುತ್ತಿತ್ತು: ದಲೈ ಲಾಮಾ

ಮೇರು ನಾಯಕ ಮಹಾತ್ಮ ಗಾಂಧಿ ಅವರಿಗೆ ಮೊಹಮ್ಮದ್‌ ಅಲಿ ಜಿನ್ನಾ ಸ್ವತಂತ್ರ ಭಾರತದ ಪ್ರಧಾನಿಯಾಗುವ ಬಗ್ಗೆ ಒಲವು ತೋರಿದ್ದರು. ಆದರೆ ಉನ್ನತ ಅಧಿಕಾರ ತಮಗೇ ಧಕ್ಕಬೇಕೆಂಬ ಹಠದೊಂದಿಗೆ ಜವಾಹರಲಾಲ್‌ ನೆಹರೂ ಇದಕ್ಕೆ ಅವಕಾಶ ನೀಡಲಿಲ್ಲ.

Vijaya Karnataka 9 Aug 2018, 2:31 pm
ಪಣಜಿ: ಮೇರು ನಾಯಕ ಮಹಾತ್ಮ ಗಾಂಧಿ ಅವರಿಗೆ ಮೊಹಮ್ಮದ್‌ ಅಲಿ ಜಿನ್ನಾ ಸ್ವತಂತ್ರ ಭಾರತದ ಪ್ರಧಾನಿಯಾಗುವ ಬಗ್ಗೆ ಒಲವು ತೋರಿದ್ದರು. ಆದರೆ ಉನ್ನತ ಅಧಿಕಾರ ತಮಗೇ ಧಕ್ಕಬೇಕೆಂಬ ಹಠದೊಂದಿಗೆ ಜವಾಹರಲಾಲ್‌ ನೆಹರೂ ಇದಕ್ಕೆ ಅವಕಾಶ ನೀಡಲಿಲ್ಲ. ಒಂದೊಮ್ಮೆ ಜಿನ್ನಾ ಭಾರತದ ಪ್ರಧಾನಿಯಾಗಿದ್ದಿದ್ದರೆ ಭಾರತ ವಿಭಜನೆಯಾಗುತ್ತಿರಲಿಲ್ಲ. ಪಾಕಿಸ್ತಾನವೂ ಹುಟ್ಟಿಕೊಳ್ಳುತ್ತಿರಲಿಲ್ಲ ಎಂದು ಬೌದ್ಧ ಧರ್ಮಗುರು, ನೊಬೆಲ್‌ ಶಾಂತಿ ಪ್ರಶಸ್ತಿ ಪುರಸ್ಕೃತ ದಲೈ ಲಾಮಾ ಹೇಳಿದ್ದಾರೆ.
Vijaya Karnataka Web dalia


ಗೋವಾ ಇನ್ಸಿಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಕಾರ‍್ಯಕ್ರಮದಲ್ಲಿ ಸಂವಾದವೊಂದರಲ್ಲಿ ವಿದ್ಯಾರ್ಥಿಯ ಪ್ರಶ್ನೆಗೆ ಉತ್ತರಿಸಿದ ಅವರು, ''ಮಹಾತ್ಮ ಗಾಂಧಿ ಅವರಿಗೆ ಭಾರತ ವಿಭಜನೆಯಿಂದಾಗುವ ಪರಿಣಾಮಗಳ ಬಗ್ಗೆ ಅರಿವಿತ್ತು. ಹೀಗಾಗಿಯೇ ಅವರು ಜಿನ್ನಾ ಪ್ರಧಾನಿಯಾಗಬೇಕೆಂದು ಬಯಸಿದ್ದರು. ಆದರೆ ನೆಹರೂ ಇದಕ್ಕೆ ಅವಕಾಶ ನೀಡಲಿಲ್ಲ. ನೆಹರೂ ಅವರಿಂದ ಅನೇಕ ತಪ್ಪುಗಳಾಗಿವೆ,'' ಎಂದರು. ಇದೇ ವೇಳೆ ಅವರು ಟಿಬೆಟಿಯನ್ನರು ಚೀನಿಯರನ್ನು ಬಂಧುಗಳಂತೆ ಗೌರವಿಸುತ್ತಾರೆ. ಆದರೆ ಚೀನಾ ಮಾತ್ರ ರಾಜಕೀಯ ಲಾಭಕ್ಕೆ ಟಿಬೆಟ್‌ ಮೇಲೆ ಸವಾರಿ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ