ಆ್ಯಪ್ನಗರ

ಯುಎಪಿಎ ಕಾಯಿದೆ ಜಾರಿಯಾದ ಕೂಡಲೇ ಮೊದಲ 'ಉಗ್ರ' ಹಣೆಪಟ್ಟಿ ಹಫೀಜ್‌, ಅಜರ್‌ಗೆ

ರಾಜ್ಯಸಭೆಯಲ್ಲಿ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡು ನೂತನ ಕಾನೂನು ಜಾರಿಯಾದ ಕೂಡಲೇ 2008ರ ಮುಂಬೈ ಸರಣಿ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ಮತ್ತು 2001ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆಸಿದ ಸಂಚುಕೋರ ಮಸೂದ್‌ ಅಜರ್‌ನನ್ನು ಉಗ್ರರೆಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಲಿದೆ.

Agencies 27 Jul 2019, 10:09 am
ಹೊಸದಿಲ್ಲಿ: ಲೋಕಸಭೆಯಲ್ಲಿ ಅನುಮೋದನೆ ಪಡೆದು ರಾಜ್ಯಸಭೆಯ ಅಂಗೀಕಾರಕ್ಕೆ ಎದುರು ನೋಡುತ್ತಿರುವ ಅಕ್ರಮ ಚಟುವಟಿಕೆಗಳ ತಡೆ ವಿಧೇಯಕ (ಯುಎಪಿಎ) ಜಾರಿಯಾದ ಕೂಡಲೇ ಪಾಕಿಸ್ತಾನ ಪೋಷಿತ ಉಗ್ರರ ಮುಖಂಡರಾದ ಹಫೀಜ್‌ ಸಯೀದ್‌ ಹಾಗೂ ಮಸೂದ್‌ ಅಜರ್‌ನನ್ನು ಮೊದಲು ಉಗ್ರರ ಪಟ್ಟಿಗೆ ಸೇರಿಸಲು ಕೇಂದ್ರ ಸರಕಾರ ಸಿದ್ಧತೆ ನಡೆಸಿದೆ.
Vijaya Karnataka Web Pak Terrorists Azar- Hafiz


ರಾಜ್ಯಸಭೆಯಲ್ಲಿ ತಿದ್ದುಪಡಿ ವಿಧೇಯಕ ಅಂಗೀಕಾರಗೊಂಡು ನೂತನ ಕಾನೂನು ಜಾರಿಯಾದ ಕೂಡಲೇ 2008ರ ಮುಂಬೈ ಸರಣಿ ದಾಳಿ ಸಂಚುಕೋರ ಹಫೀಜ್‌ ಸಯೀದ್‌ ಮತ್ತು 2001ರಲ್ಲಿ ಸಂಸತ್ತಿನ ಮೇಲೆ ದಾಳಿ ನಡೆಸಿದ ಸಂಚುಕೋರ ಮಸೂದ್‌ ಅಜರ್‌ನನ್ನು ಉಗ್ರರೆಂದು ಕೇಂದ್ರ ಗೃಹ ಸಚಿವಾಲಯ ಘೋಷಿಸಲಿದೆ. ಅಂತಾರಾಷ್ಟ್ರೀಯ ಕಾನೂನು ಮತ್ತು ವಿಶ್ವಸಂಸ್ಥೆ ನಿರ್ಣಯಗಳ ಪ್ರಕಾರ ತಿದ್ದುಪಡಿ ವಿಧೇಯಕ ರೂಪಿಸಲಾಗಿದೆ ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿ ತಿಳಿಸಿದ್ದಾರೆ.

ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಲು ಕೇಂದ್ರ ಸರಕಾರ ಅಕ್ರಮ ಚಟುವಟಿಕೆಗಳ ತಡೆ ಕಾಯಿದೆಗೆ ತಿದ್ದುಪಡಿ ತಂದು ಲೋಕಸಭೆಯಲ್ಲಿ ಅನುಮೋದನೆ ಪಡೆದಿದೆ. ಇದರಿಂದಾಗಿ ಉಗ್ರರಿಗೆ ನೆರವು ನೀಡುವ ವ್ಯಕ್ತಿಗಳನ್ನು ಕೂಡ ಉಗ್ರರೆಂದು ಕಾಯಿದೆ ಅಡಿಯಲ್ಲಿ ಘೋಷಿಸಿ ಅವರ ಸ್ವತ್ತುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ