ಆ್ಯಪ್ನಗರ

ಕಟ್ಟಡ ಕಾಮಗಾರಿ ಪೂರ್ಣಕ್ಕೆ 12 ವರ್ಷ ತೆಗೆದುಕೊಂಡ ಅಧಿಕಾರಿಗಳ ಫೋಟೊ ನೇತು ಹಾಕಿ: ಜಡತೆ ವಿರುದ್ಧ ಗಡ್ಕರಿ ಕಿಡಿ

ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ (ಎನ್‌ಎಚ್‌ಎಐ) ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು 12 ವರ್ಷ ತೆಗೆದುಕೊಂಡ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವಿಳಂಬಗತಿಯ ಕಾಮಗಾರಿ ದೇಶಕ್ಕೆ ನಾಚಿಕೆಗೇಡು ಎಂದು ಕಟ್ಟಡ ಉದ್ಘಾಟನಾ ಕಾರ‍್ಯಕ್ರಮದ ವಿಡಿಯೊ ಕಾನ್ಫರೆನ್ಸ್‌ ಸಭೆಯಲ್ಲಿ ಹೇಳಿದ್ದಾರೆ.

Vijaya Karnataka Web 29 Oct 2020, 7:10 am
ಹೊಸದಿಲ್ಲಿ: ಕಟ್ಟಡ ಉದ್ಘಾಟನೆ ಎಂದರೆ ಆಲ್‌ಮೋಸ್ಟ್‌ ಎಲ್ಲಾ ರಾಜಕೀಯ ಮುಖಂಡರು ಖುಷಿ ಖುಷಿಯಿಂದಲೇ ಬಂದು ಚಾಲನೆ ನೀಡಿ ಹೋಗುತ್ತಾರೆ. ಆದರೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಹಾಗಲ್ಲ ಕಾಮಗಾರಿಯಲ್ಲಿ ಜಡತೆ ತೋರಿದ ಅಧಿಕಾರಿಗಳಿಗೆ ಮಾತಿನ ಚಾಟಿ ಏಟು ಕೊಟ್ಟಿದ್ದಾರೆ.
Vijaya Karnataka Web Nitin Gadkari
Nitin Gadkari


ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ (ಎನ್‌ಎಚ್‌ಎಐ) ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲು 12 ವರ್ಷ ತೆಗೆದುಕೊಂಡ ಬಗ್ಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂತಹ ವಿಳಂಬಗತಿಯ ಕಾಮಗಾರಿ ದೇಶಕ್ಕೆ ನಾಚಿಕೆಗೇಡು ಎಂದು ಕಟ್ಟಡ ಉದ್ಘಾಟನಾ ಕಾರ‍್ಯಕ್ರಮದ ವಿಡಿಯೊ ಕಾನ್ಫರೆನ್ಸ್‌ ಸಭೆಯಲ್ಲಿ ಹೇಳಿದ್ದಾರೆ.

ಸಾಧ್ಯವಾದರೆ ವಿಳಂಬಕ್ಕೆ ಕಾರಣರಾದ ಅಧಿಕಾರಿಗಳ ಫೋಟೊ­ವನ್ನು ಕಟ್ಟಡ­ದಲ್ಲಿ ನೇತು ಹಾಕಿ, ಅದರಡಿ ಷರಾ ಬರೆಯಬೇಕು ಎಂದು ಹೇಳುವ ಮೂಲಕ ಟಾಂಗ್‌ ಕೊಟ್ಟಿದ್ದಾರೆ. ನಾಗ್ಪುರದಲ್ಲಿಎನ್‌ಎಚ್‌ಎಐ ಕೇಂದ್ರ ಕಚೇರಿಯ ಕಟ್ಟಡ ನಿರ್ಮಾ­ಣಕ್ಕೆ 250 ಕೋಟಿ ರೂ. ಮೊತ್ತದ ಯೋಜನೆಯನ್ನು 2008ರಲ್ಲಿಅಂತಿಮಗೊಳಿ­ಸಲಾ­ಗಿತ್ತು. 2011ರಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣ­ಗೊಂಡಿತ್ತು. ಆದರೆ ಕಾಮ ಗಾರಿ ಪೂರ್ಣಗೊಳ್ಳಲು 2020ರವರೆಗೂ ಕಾಯಬೇಕಾಯಿತು. ಇಂತಹ ವಿಳಂಬ ಎಂದಿಗೂ ಸಲ್ಲದು ಎಂದಿದ್ದಾರೆ.

ನವೆಂಬರ್‌ 5ಕ್ಕೆ ಎರಡನೇ ಹಂತದ ರಫೇಲ್‌ ಜೆಟ್‌ಗಳು ಭಾರತಕ್ಕೆ ಆಗಮನ, ಸೇನೆಗೆ ಮತ್ತಷ್ಟು ಭೀಮಬಲ!

ಅಲ್ಲದೆ ತಮ್ಮ ಅವಧಿಯಲ್ಲಿ ದೆಹಲಿ-ಮುಂಬಯಿ ಎಕ್ಸ್‌ಪ್ರೆಸ್‌ ವೇಯ ಕಾಮಗಾರಿಯನ್ನು ಕೇವಲ ಮೂರು ವರ್ಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಅದು ಕೂಡ 80,000ದಿಂದ 1 ಕೋಟಿಯ ಕಾಮಗಾರಿ ಎಂದು ಇದೆ ವೇಳೆ ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ