ಆ್ಯಪ್ನಗರ

ಫಲಿತಾಂಶ ದಿನ ಬೆಳಗ್ಗೆ ಕಾಣೆಯಾಗಿದ್ದ ಹಾರ್ದಿಕ್‌ ಪಟೇಲ್‌ ಪ್ರತ್ಯಕ್ಷ: ಮತಯಂತ್ರದಿಂದ ಗೆದ್ದ ಬಿಜೆಪಿ

ಮತಯಂತ್ರಗಳ ಮೇಲೆ ಮತ್ತೆ ಆರೋಪ ಮಾಡಿದ ಯುವ ನಾಯಕ

Vijaya Karnataka Web 18 Dec 2017, 4:11 pm
ಹೊಸದಿಲ್ಲಿ: ಭಾರಿ ಕುತೂಹಲ ಕೆರಳಿದ್ದ ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆ ಫಲಿತಾಂಶದ ದಿನ ಬೆಳಗಿನಿಂದ ಕಾಣೆಯಾಗಿದ್ದ ಹಾರ್ದಿಕ್‌ ಪಟೇಲ್ ಕೊನೆಗೂ ಮಧ್ಯಾಹ್ನದ ವೇಳೆ ಪ್ರತ್ಯಕ್ಷರಾದರು.
Vijaya Karnataka Web hardik patel attacks bjp
ಫಲಿತಾಂಶ ದಿನ ಬೆಳಗ್ಗೆ ಕಾಣೆಯಾಗಿದ್ದ ಹಾರ್ದಿಕ್‌ ಪಟೇಲ್‌ ಪ್ರತ್ಯಕ್ಷ: ಮತಯಂತ್ರದಿಂದ ಗೆದ್ದ ಬಿಜೆಪಿ


ಇಡೀ ಚುನಾವಣೆ ಫಲಿತಾಂಶದ ಟ್ರೆಂಡ್‌ ಹೊರಬಿದ್ದ ಮೇಲೆ ಹೊರಬಂದ ಹಾರ್ದಿಕ್‌ ಪಟೇಲ್‌ ಸುದ್ದಿಗೋಷ್ಠಿ ನಡೆಸಿದರು. ಸಾಮಾನ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚಟುವಟಿಕೆಯಿಂದ ಇರುತ್ತಿದ್ದ ಹಾರ್ದಿಕ್‌ ಪಟೇಲ್‌ ಫಲಿತಾಂಶದ ದಿನ ಮೌನಕ್ಕೆ ಮೊರೆ ಹೋಗಿದ್ದರು.

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿಲ್ಲ. ವಿದ್ಯುನ್ಮಾನ ಮತಯಂತ್ರಗಳ ಸಹಾಯದಿಂದ ಬಿಜೆಪಿ ಗೆದ್ದಿದೆ. ಇದರಿಂದ ಕಾಂಗ್ರೆಸ್‌ಗೆ ಸೋಲಾಗಿದೆ ಎಂದು ಹಾರ್ದಿಕ್ ಪಟೇಲ್‌ ಆರೋಪಿಸಿದರು.

ಪಟೇಲ್‌ ಸಮುದಾಯಕ್ಕೆ ಮೀಸಲಾತಿ ನೀಡುವವರೆಗೂ ಹೋರಾಟ ಮುಂದುವರಿಸಲಾಗುವುದು. ಮುಂದಿನ ದಿನಗಳಲ್ಲಿ ಇದಕ್ಕೆ ಸೂಕ್ತ ಕಾರ್ಯತಂತ್ರ ರೂಪಿಸಲಾಗುವುದು ಎಂದು ಹಾರ್ದಿಕ್‌ ಪಟೇಲ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ