ಆ್ಯಪ್ನಗರ

ಇದು ಲೋಕಸಭೆ, ಮುನ್ನಾ ಭಾಯ್‌ ತಾಣವಲ್ಲ: ರಾಹುಲ್‌ಗೆ ಹರ್‌ಸಿಮ್ರತ್‌ ಕೌರ್ ಟಾಂಗ್

ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರದ ಎನ್‌ಡಿಎ ಸರಕಾರದ ವಿರುದ್ಧ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಮಂಡನೆ ಸಂದರ್ಭ ಹಲವು ರೀತಿಯ ಪ್ರಸಂಗಗಳಿಗೆ ಸಂಸತ್‌ ಅಧಿವೇಶನ ಸಾಕ್ಷಿಯಾಯಿತು.

Vijaya Karnataka Web 20 Jul 2018, 3:50 pm
ಹೊಸದಿಲ್ಲಿ: ಲೋಕಸಭೆಯಲ್ಲಿ ಶುಕ್ರವಾರ ಕೇಂದ್ರದ ಎನ್‌ಡಿಎ ಸರಕಾರದ ವಿರುದ್ಧ ವಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಮಂಡನೆ ಸಂದರ್ಭ ಹಲವು ರೀತಿಯ ಪ್ರಸಂಗಗಳಿಗೆ ಸಂಸತ್‌ ಅಧಿವೇಶನ ಸಾಕ್ಷಿಯಾಯಿತು.
Vijaya Karnataka Web harsimrath


ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಗಳ ಸುರಿಮಳೆ ಸುರಿಸುತ್ತಿದ್ದರೆ, ಅತ್ತ ಸಚಿವೆ ಹರ್‌ಸಿಮ್ರತ್‌ ಕೌರ್ ಬಾದಲ್, ರಾಹುಲ್‌ಗೆ ತಿರುಗೇಟು ನೀಡಿದರು. ಕೌರ್‌ ವಿರುದ್ಧವೂ ರಾಹುಲ್ ಭಾಷಣದಲ್ಲಿ ಆರೋಪಿಸಿದ್ದು, ಅದಕ್ಕೆ ಪ್ರತ್ಯುತ್ತರ ನೀಡಿದ ಕೌರ್, ಇದು ಸಂಸತ್ತು. ಇಲ್ಲಿ ಮಾತನಾಡುವಾಗ ಎಚ್ಚರ ಇರಲಿ. ಇದು ಮುನ್ನಾಭಾಯ್‌ನ ಪ್ರದೇಶವಲ್ಲ, ಹೀಗಾಗಿ ಸರಿಯಾಗಿ ಮಾತನಾಡಿ ಎಂದು ಹೇಳಿದರು.


ಕೌರ್‌ ಪ್ರತಿಕ್ರಿಯೆಗೆ ದನಿಗೂಡಿಸಿದ ಲೋಕಸಭಾ ಸ್ಪೀಕರ್ ಸುಮಿತ್ರಾ ಮಹಾಜನ್, ರಾಹುಲ್‌ ಗಾಂಧಿಯನ್ನು ಉದ್ದೇಶಿಸಿ, ನೀವು ಪ್ರಧಾನಿ ವಿರುದ್ಧವಾಗಲೀ, ಅಥವಾ ಯಾರ ವಿರುದ್ಧವೇ ಆಗಲಿ, ಮಾತನಾಡುವಾಗ ಸೂಕ್ತ ದಾಖಲೆ ತೋರಿಸಿ ಮಾತನಾಡಿ ಎಂದರು.

ಇದರಿಂದಾಗಿ ರಾಹುಲ್‌ಗೆ ಕೌರ್ ಪ್ರತ್ಯುತ್ತರ ಮತ್ತು ಭಾಷಣದಲ್ಲಿ ರಾಹುಲ್ ತೋರಿದ ಭಾವಾವೇಶಕ್ಕೆ ಮೆಚ್ಚುಗೆ ಕೇಳಿಬಂದರೂ, ರಾಹುಲ್ ಮತ್ತೆ ಟ್ರೋಲ್‌ಗೆ ಒಳಗಾಗಬೇಕಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ