ಆ್ಯಪ್ನಗರ

ಖಾಸಗಿ ಉದ್ಯೋಗದಲ್ಲಿ ಶೇ.75 ಮೀಸಲಿಗೆ ಹರಿಯಾಣ ನಿರ್ಧಾರ, ಶೀಘ್ರ ಸುಗ್ರೀವಾಜ್ಞೆ

ಈ ಮೊದಲು ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್‌ ರೆಡ್ಡಿ ಸರಕಾರ ಇಂತಹದ್ದೊಂದು ಕಾನೂನು ಜಾರಿಗೊಳಿಸಿರುವುದು ಈಗ ಹರಿಯಾಣಕ್ಕೆ ಮಾದರಿ ಒದಗಿಸಿಕೊಟ್ಟಿದೆ. ಹೊಸದಾಗಿ ಆರಂಭವಾಗುವ ಕಂಪನಿಗಳಿಗೆ ಇದು ಅನ್ವಯವಾಗುತ್ತದೆ.

Agencies 7 Jul 2020, 12:02 am
ಚಂಡಿಗಢ: ಕೊರೊನಾ ಸೋಂಕು ಹಾವಳಿಯಿಂದ ಕಾರ್ಮಿಕರ ಮರು ವಲಸೆ ಮಹಾಸ್ಫೋಟ ಘಟಿಸಿರುವ ನಡುವೆಯೇ ಹರಿಯಾಣ ಸರಕಾರವು ರಾಜ್ಯದ ಖಾಸಗಿ ಕಂಪನಿಗಳಲ್ಲಿ ಸ್ಥಳೀಯರಿಗೆ ಶೇ.75ರಷ್ಟು ಮೀಸಲಾತಿ ಕಡ್ಡಾಯಗೊಳಿಸಿ ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಿದೆ.
Vijaya Karnataka Web Manohar Lal Khattar


ಮಂಗಳವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಈ ಮಹತ್ವದ ಮೀಸಲು ನಿಗದಿ ಸುಗ್ರೀವಾಜ್ಞೆಗೆ ಸಮ್ಮತಿ ನೀಡಿದೆ ಎಂದು ಉಪ ಮುಖ್ಯಮಂತ್ರಿ ದುಷ್ಯಂತ್‌ ಚೌಟಾಲ ತಿಳಿಸಿದರು. "ಯುವ ಜನರ ಪಾಲಿಗೆ ಇದು ಐತಿಹಾಸಿಕ ದಿನ. ಹರಿಯಾಣದ ಖಾಸಗಿ ಉದ್ಯೋಗಗಳಲ್ಲಿ ಶೇ.75ರಷ್ಟನ್ನು ಸ್ಥಳೀಯರಿಗೆ ಮೀಸಲಿಡಬೇಕೆಂಬ ನೀತಿ ಜಾರಿಗೊಳ್ಳಲಿದೆ. ಈ ಕುರಿತ ಸುಗ್ರೀವಾಜ್ಞೆ ಕರಡಿಗೆ ರಾಜ್ಯ ಸಂಪುಟ ಒಪ್ಪಿಗೆ ನೀಡಿದೆ," ಎಂದು ದುಷ್ಯಂತ್‌ ಟ್ವೀಟ್‌ ಮಾಡಿದ್ದಾರೆ.

ಕಳೆದ ಫೆಬ್ರವರಿ ತಿಂಗಳಲ್ಲಿಯೇ ಈ ವಿಷಯ ಸಂಪುಟ ಸಭೆಯಲ್ಲಿ ಚರ್ಚೆಯಾಗಿತ್ತು. ಕರಡು ಪ್ರಸ್ತಾಪ ಸಿದ್ಧಪಡಿಸಲು ದುಷ್ಯಂತ್‌ ಅವರಿಗೆ ಜವಾಬ್ದಾರಿ ಒಪ್ಪಿಸಲಾಗಿತ್ತು. ನಾಲ್ಕು ತಿಂಗಳಲ್ಲಿಅವರು ಖಾಸಗಿ ಉದ್ಯೋಗ ಮೀಸಲು ಕರಡು ಸಿದ್ಧಪಡಿಸಿದ್ದು, ಈಗ ಅನುಷ್ಠಾನ ಹಂತ ತಲುಪಿದೆ. ಈ ಮೊದಲು ಆಂಧ್ರಪ್ರದೇಶದಲ್ಲಿ ಜಗನ್‌ಮೋಹನ್‌ ರೆಡ್ಡಿ ಸರಕಾರ ಇಂತಹದ್ದೊಂದು ಕಾನೂನು ಜಾರಿಗೊಳಿಸಿರುವುದು ಈಗ ಹರಿಯಾಣಕ್ಕೆ ಮಾದರಿ ಒದಗಿಸಿಕೊಟ್ಟಿದೆ. ಹೊಸದಾಗಿ ಆರಂಭವಾಗುವ ಕಂಪನಿಗಳಿಗೆ ಇದು ಅನ್ವಯವಾಗುತ್ತದೆ.

ಅನೇಕ ರಾಜ್ಯಗಳಲ್ಲಿ ಖಾಸಗಿ ಕಂಪನಿಗಳ ಸ್ಥಳೀಯರ ಮೀಸಲು ಕೋಟಾ ನಿಗದಿಗೆ ಹಲವು ವರ್ಷಗಳಿಂದ ಒತ್ತಾಯ ಕೇಳಿ ಬಂದಿದೆ. ಈ ದಿಸೆಯಲ್ಲಿಆಂಧ್ರ ಪ್ರಥಮ ಹೆಜ್ಜೆ ಇರಿಸಿದರೆ, ಹರಿಯಾಣ ಅದನ್ನು ಅನುಸರಿಸಿದೆ. ಚೌಟಾಲ ನೇತೃತ್ವದ ಜನನಾಯಕ ಜನತಾ ಪಾರ್ಟಿ (ಜೆಜೆಪಿ) 2019 ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಖಾಸಗಿ ಉದ್ಯೋಗ ಮೀಸಲು ಕುರಿತು ಭರವಸೆ ನೀಡಿತ್ತು. ಆಗ ಬಿಜೆಪಿ ಕೂಡ ಇಂತಹದ್ದೇ ಆಶ್ವಾಸನೆ ನೀಡಿತ್ತು. ಗೆಲುವಿನ ಬಳಿಕ ಬಿಜೆಪಿ-ಜೆಜೆಪಿ ಮೈತ್ರಿ ಸರಕಾರ ರಚಿಸಿದ್ದು, ನೀಡಿದ ಭರವಸೆ ಈಡೇರಿಸುವ ಕೆಲಸಕ್ಕೆ ಕೈಹಾಕಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ