ಆ್ಯಪ್ನಗರ

ಆ್ಯಂಬುಲೆನ್ಸ್‌ ತಡೆದ ಬಿಜೆಪಿ ಮುಖಂಡ: ರೋಗಿ ಸಾವು

ಹರಿಯಾಣದ ಬಿಜೆಪಿ ಮುಖಂಡ ಆ್ಯಂಬುಲೆನ್ಸ್‌ ತಡೆದು ಗಲಾಟೆ ನಡೆಸಿದ ಪರಿಣಾಮ ಆ್ಯಂಬುಲೆನ್ಸ್‌ನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಪ್ರಾಣಬಿಟ್ಟ ಘಟನೆ ವರದಿಯಾಗಿದೆ.

ನವಭಾರತ್ ಟೈಮ್ಸ್ 7 Aug 2017, 9:44 pm
ಫಾತಾಬಾದ್‌: ಹರಿಯಾಣದ ಬಿಜೆಪಿ ಮುಖಂಡ ಆ್ಯಂಬುಲೆನ್ಸ್‌ ತಡೆದು ಗಲಾಟೆ ನಡೆಸಿದ ಪರಿಣಾಮ ಆ್ಯಂಬುಲೆನ್ಸ್‌ನಲ್ಲಿದ್ದ ವ್ಯಕ್ತಿ ಸ್ಥಳದಲ್ಲೇ ಪ್ರಾಣಬಿಟ್ಟ ಘಟನೆ ವರದಿಯಾಗಿದೆ.
Vijaya Karnataka Web haryana bjp leader accused of stalling ambulance
ಆ್ಯಂಬುಲೆನ್ಸ್‌ ತಡೆದ ಬಿಜೆಪಿ ಮುಖಂಡ: ರೋಗಿ ಸಾವು


ಬಿ.ಜೆ.ಪಿ. ಕೌನ್ಸಿಲರ್ ದರ್ಶನ್ ನಾಗ್‌ಪಾಲ್ ಕಾರಿಗೆ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಆಂಬುಲೆನ್ಸ್ ಒರೆಸಿಕೊಂಡು ಹೋಗಿದೆ. ಕೂಡಲೇ ಆ್ಯಂಬುಲೆನ್ಸ್‌ ತಡೆದು ಗಲಾಟೆ ಸೃಷ್ಠಿಸಿದ ದರ್ಶನ್‌ ಅರ್ಧ ಗಂಟೆಗೂ ಅಧಿಕ ಕಾಲ ಕಾಲಹರಣ ಮಾಡಿದ್ದಾರೆ. ಅಲ್ಲದೇ ತನಗೆ ಪರಿಹಾರ ಕೊಡಬೇಕೆಂದು ದರ್ಶನ್‌ ಬೇಡಿಕೆಯಿಟ್ಟಿದ್ದಾರೆ.

ಈ ವೇಳೆ ಹೃದಯಘಾತಕ್ಕೊಳಗಾಗಿದ್ದ ನವೀನ್ ಸೋನಿ(42) ಕುಟುಂಬಸ್ಥರು ಹಾಗೂ ಆ್ಯಂಬುಲೆನ್ಸ್‌ ಸಿಬ್ಬಂದಿ ಎಷ್ಟೇ ಮನವಿ ಮಾಡಿದರೂ ದರ್ಶನ್‌ ಮಾತ್ರ ಕೇಳಲಿಲ್ಲ. ಅಂತಿಮವಾಗಿ ದರ್ಶನ್‌ ಸಮಾದಾನಗೊಳಿಸಿದ ಆ್ಯಂಬುಲೆನ್ಸ್‌ ಸಿಬ್ಬಂದಿ ರೋಗಿಯನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದರಾದರೂ ಸಕಾಲಕ್ಕೆ ಚಿಕಿತ್ಸೆ ಸಿಗದೆ ಸೋನಿ ಮೃತಪಟ್ಟಿದ್ದಾರೆ ಎಂದು ಅವರ ಸಹೋದರ ಸೀತಾರಾಂ ಸೋನಿ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ