ಆ್ಯಪ್ನಗರ

Farmers protest: ಕೇಂದ್ರದೊಂದಿಗೆ ಮಾತನಾಡಲು ರೈತರಿಗೆ ಹರಿಯಾಣ ಸಿಎಂ ಮನವಿ!

ಸಮಸ್ಯೆ ಇತ್ಯರ್ಥಕ್ಕೆ ರೈತ ಸಂಘಟನೆಗಳು ಕೇಂದ್ರ ಸರ್ಕಾರದೊಂದಿಗೆ ಮಾತನಾಡಲಿ ಎಂದು ಹೇಳಿರುವ ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಖಟ್ಟರ್, ಮಾತುಕತೆಗೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Vijaya Karnataka Web 27 Nov 2020, 4:47 pm
ಚಂಡೀಗಢ್: ಕೇಂದ್ರ ಸರ್ಕಾರದ ಕೃಷಿ ವಿಧೇಯಕಗಳ ಜಾರಿ ಖಂಡಿಸಿ ಪಂಜಾಬ್ ರೈತರು ಹಮ್ಮಿಕೊಂಡಿರುವ 'ದೆಹಲಿ ಚಲೋ' ಯಾತ್ರೆ, ರಾಷ್ಟ್ರ ರಾಜಧಾನಿ ದೆಹಲಿ ಸಮೀಪ ಬಂದಿದೆ.
Vijaya Karnataka Web Manohar Lal Khattar
ಸಂಗ್ರಹ ಚಿತ್ರ


ಆದರೆ ದೆಹಲಿ ಚಲೋ ಯಾತ್ರೆಯನ್ನು ಹರಿಯಾಣ ಸರ್ಕಾರ ನಿಭಾಯಿಸಿದ ರೀತಿಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ರೈತರ ಮೇಲೆ ಜಲಫಿರಂಗಿ ಹಾಗೂ ಅಶ್ರುವಾಯು ಬಳಸಿದ ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಲಾಗುತ್ತಿದೆ.

ರೈತರೊಂದಿಗೆ ಪೊಲೀಸರ ಸಂಘರ್ಷಕ್ಕೆ ಹರಿಯಾಣ ಮುಖ್ಯಮಂತ್ರಿ ಮನೋಹರ್‌ಲಾಲ್ ಖಟ್ಟರ್ ಅವರ ಆದೇಶವೇ ಕಾರಣ ಎಂಬ ಆಕ್ರೋಶ ರೈತರಲ್ಲಿ ಕಂಡುಬರುತ್ತಿದ್ದು, ರೈತರ ಈ ಆಕ್ರೋಶವನ್ನು ತಣಿಸುವ ಕೆಲಸಕ್ಕೆ ಇದೀಗ ಖಟ್ಟರ್ ಕೈ ಹಾಕಿದ್ದಾರೆ.

Farmers protest: ದಿಲ್ಲಿ ಪ್ರವೇಶಿಸಲು ಅನ್ನದಾತರಿಗೆ ಅನುಮತಿ, ಶಾಂತಿಯುತ ಪ್ರತಿಭಟನೆಗೆ ಸೂಚನೆ

ರೈತ ಸಮುದಾಯದ ಮೇಲೆ ಸರ್ಕಾರಕ್ಕೆ ಅಪಾರ ಗೌರವವಿದ್ದು, ಕಾನೂನು ಮೀರಿ ವರ್ತಿಸಿದಾಗ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಖಟ್ಟರ್ ಹೇಳಿದ್ದಾರೆ.

ಅಲ್ಲದೇ ಸಮಸ್ಯೆ ಇತ್ಯರ್ಥಕ್ಕೆ ರೈತ ಸಂಘಟನೆಗಳು ಕೇಂದ್ರ ಸರ್ಕಾರದೊಂದಿಗೆ ಮಾತನಾಡಲಿ ಎಂದು ಹೇಳಿರುವ ಖಟ್ಟರ್, ಮಾತುಕತೆಗೆ ಕೇಂದ್ರ ಸರ್ಕಾರ ಸದಾ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದ್ದಾರೆ.


ರೈತ ಸಂಘಟನೆಗಳು ತಮ್ಮ ಸಮಸ್ಯೆಗಳನ್ನು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಬೇಕು. ಕೊರೊನಾ ಕಾಲದಲ್ಲಿ ಹೀಗೆ ಗುಂಪಾಗಿ ರಸ್ತೆಗಿಳಿದರೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳುವುದು ಅನಿವಾರ್ಯ ಎಂದು ಖಟ್ಟರ್ ಹೇಳಿದ್ದಾರೆ.

ರಾಜಧಾನಿಗೆ ಅನ್ನದಾತರ ಮುತ್ತಿಗೆ; ಕೆಂಪುಕೋಟೆ ನಗರದ ಖಾಕಿ ಕೋಟೆಗೆ ಕೃಷಿಕರ ಲಗ್ಗೆ

ರೈತರು ಮತ್ತು ಪೊಲೀಸರ ನಡುವೆ ನಡೆದ ಘರ್ಷಣೆ ನಿಜಕ್ಕೂ ಬೇಸರದ ಸಂಗತಿ. ಆದರೆ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ನಮ್ಮ ಜವಾಬ್ದಾರಿ ಎಂದು ಖಟ್ಟರ್ ನುಡಿದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ